ಶ್ರೀಲೀಲಾ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ: ಶ್ರೀಲೀಲಾ

ಒಂದು ವೇಳೆ ಸಿನಿಮಾಗಳಲ್ಲಿ ನಟಿಸದಿದ್ದರೇ ತಾನು ವ್ಯಾಸಂಗದ ಕಡೆ ಅಥವಾ ನೃತ್ಯದ ಕಡೆ ತಾನು ಗಮನ ಹರಿಸುತ್ತಿದ್ದೆ ಎಂದು ಕಿಸ್ ಚಿತ್ರದ ನಾಯಕಿ ಶ್ರೀಲೀಲಾ ಹೇಳಿದ್ದಾರೆ.

ಒಂದು ವೇಳೆ ಸಿನಿಮಾಗಳಲ್ಲಿ ನಟಿಸದಿದ್ದರೇ ತಾನು ವ್ಯಾಸಂಗದ ಕಡೆ ಅಥವಾ ನೃತ್ಯದ ಕಡೆ ತಾನು ಗಮನ ಹರಿಸುತ್ತಿದ್ದೆ ಎಂದು ಕಿಸ್ ಚಿತ್ರದ ನಾಯಕಿ ಶ್ರೀಲೀಲಾ ಹೇಳಿದ್ದಾರೆ.

ಎಲ್ಲೆಡೆ ಕೊರೋನಾ ಸೋಂಕು ಹೆಚ್ಚುತ್ತಿದೆ, ಇಂತಹ ಸಂದರ್ಭದಲ್ಲಿ ನಾನು ಕೇವಲ ದೇವರ ಮೇಲೆ ಭಾರ ಹಾಕುತ್ತೇನೆ,  ಕೊರೋನಾ ಎರಡನೇ ಅಲೆ ಅಪ್ಪಳಿಸಿದಾಗ ಯಾರು ಹೆಚ್ಚಿ ನ ಪ್ರಮಾಣದಲ್ಲಿ ಕೇರ್ ಮಾಡಲಿಲ್ಲ,  ವರ್ಷದ ಆರಂಭದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿತ್ತು, ಆದರೆ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಕೊವಿಡ್ ಸೋಂಕಿನ ಬಗ್ಗೆ ಶ್ರೀಲೀಲಾ ಆತಂಕ ವ್ಯಕ್ತ ಪಡಿಸಿದ್ದಾರೆ.

ಕನ್ನಡದ ಈ ಪ್ರತಿಭೆ ತೆಲುಗಿನ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೆಲ್ಲಿ ಸಂದಾಡಿ ಎಂಬ ಸಿನಿಮಾದಲ್ಲಿ ರೋಶನ್ ಮೆಕಾ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಹರಿ ಸಂತೋಷ್ ನಿರ್ದೇಶನದ ಸಿನಿಮಾದ ಬೈ ಟು ಲವ್ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾರೆ, ಲಾಕ್ ಡೌನ್ ಗೂ ಮೊದಲ ಚಿತ್ರದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಾಗಿದೆ.

ತಮ್ಮ ಚೊಚ್ಚಲ ತೆಲುಗು ಸಿನಿಮಾದ ಬಗ್ಗೆ ಮಾತನಾಡಿರುವ ಶ್ರೀಲೀಲಾ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

ಭಾಷೆಯ ವ್ಯತ್ಯಾಸ ಹೊರತು ಪಡಿಸಿದರೇ ಅಂತ ವ್ಯತ್ಯಾಸವೇನಿಲ್ಲ, ಸೆಟ್ ನಲ್ಲಿ ಹಲವರು ನನ್ನ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಇದರಿಂದ ನನಗೆ ಹೆಚ್ಚು
ಕಂಪರ್ಟಬಲ್ ಅನ್ನಿಸುತ್ತಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನನಗೆ ಆಫರ್ ಬಂದಾನ ನಿಜವಾಗಿಯೂ ಆಶ್ಚರ್ಯವಾಗಿತ್ತು. ಕಥೆ ನನಗೆ ಬಹಳ ಹಿಡಿಸಿತು. ಈ ಪ್ರಾಜೆಕ್ಟ್ ನ ಭಾಗವಾಗಿರುವುದು ನನಗೆ ಖುಷಿ ತಂದಿದೆ, ಲಾಕ್ ಡೌನ್ ನಂತರ ಆರಂಭವಾಗುವ ನನ್ನ ಮೊದಲ ಶೂಟಿಂಗ್ ಇದೇ ಆಗಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾನು ನಟಿಯಾಗದಿದ್ದರೇ ವೈದ್ಯೆಯಾಗುತ್ತಿದ್ದೆ ಇಲ್ಲವೇ ನೃತ್ಯ ಕಲಾವಿದೆಯಾಗುತ್ತಿದ್ದೆ ಎಂದು ತಿಳಿಸಿದ್ದಾರೆ. “ಇಲ್ಲಿಯವರೆಗೆ ನಾನು ವರ್ಣರಂಜಿತ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಇತರ ಬೇರೆ  ಪ್ರಕಾರಗಳ ಭಾಗವಾಗಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT