ಸಿನಿಮಾ ಸುದ್ದಿ

ಚೆನ್ನೈ: ರಜನಿಕಾಂತ್  ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಮುಖ್ಯಮಂತ್ರಿ ಸ್ಟಾಲಿನ್ ಭೇಟಿ 

Nagaraja AB

ಚೆನ್ನೈ: ಇತ್ತೀಚಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಭೇಟಿ ನೀಡಿದರು. 

ರಜನಿಕಾಂತ್  ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾದ ನಂತರ ನಿನ್ನೆದಿನ ಮಿದುಳಿಗೆ ರಕ್ತ ಪೂರೈಕೆ ಪುನರ್ ಸ್ಥಾಪಿಸುವ ಪ್ರಕ್ರಿಯೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.

ರಜನಿಕಾಂತ್ ಬೇಗನೆ ಗುಣಮುಖರಾಗಲಿ ಎಂದು ಈ ಹಿಂದೆ ಶುಭ ಹಾರೈಸಿದ್ದ ಮುಖ್ಯಮಂತ್ರಿ ಸ್ಟಾಲಿನ್, ಇಂದು ಆಸ್ಪತ್ರೆಗೆ ಭೇಟಿ ನೀಡಿ, ರಜನಿ ಕಾಂತ್ ಅವರ ಆರೋಗ್ಯ ವಿಚಾರಿಸಿದರು. 

ಸಿಎಆರ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಜನಿಕಾಂತ್ ಕೆಲ ದಿನಗಳ ಬಳಿಕ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ  ತಿಳಿಸಿದೆ. ಆಗಾಗ್ಗೆ ತಲೆ ತಿರುಗುವಿಕೆ ಸಮಸ್ಯೆಯಿಂದಾಗಿ ಅಕ್ಟೋಬರ್ 28ರಂದು ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. 

SCROLL FOR NEXT