ನಿರಂಜನ ಸುಧೀಂದ್ರ 
ಸಿನಿಮಾ ಸುದ್ದಿ

ಹಲವು ಹಿನ್ನಡೆಯ ನಡುವೆಯೂ 'ನಮ್ಮ ಹುಡುಗರು' ಸಿನಿಮಾ ನನಗೆ ವಿಶೇಷ: ನಿರಂಜನ್ ಸುಧೀಂದ್ರ

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ನಮ್ಮ ಹುಡುಗರು ಚಿತ್ರದ ಮೂಲಕ ನಾಯಕನಾಗಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ನಮ್ಮ ಹುಡುಗರು ಚಿತ್ರದ ಮೂಲಕ ನಾಯಕನಾಗಿದ್ದಾರೆ.

ನಾಯಕನಾಗಿ ನನ್ನ ಪ್ರವೇಶ ನಾನು ಅಂದುಕೊಂಡಂತೆ ಆಗಲಿಲ್ಲ, ಇದೊಂದು ಹೋರಾಟವಾಗಿತ್ತು. ನಿರ್ಮಾಣ ಮತ್ತು ವಿತರಣೆಯ ತೊಂದರೆಯೂ ಅರ್ಥವಾಯಿತು. ಆದರೂ ಇದರಿಂದ ನಾನು ವಿಚಲಿತನಾಗಲಿಲ್ಲ, ನನ್ನ ತಾಳ್ಮೆ ಮತ್ತು ಶಾಂತ ಮನೋಭಾವ ಫಲ ನೀಡಿತು. ಪೂರ್ಣ ಪ್ರಮಾಣದ ನಾಯಕನಾಗಿ ನನ್ನ ಮೊದಲ ಸಿನಿಮಾ ಮೂಲಕ ಬಂದಿದ್ದೇನೆ ಎಂದು ನಿರಂಜನ್ ತಿಳಿಸಿದ್ದಾರೆ.

ನಿರಂಜನ್‌ ಸುಧೀಂದ್ರ

ನಟ ನಿರಂಜನ್‌ ಸುಧೀಂದ್ರ ನಟನೆಯ ‘ನಮ್‌ ಹುಡುಗ್ರು’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಹೆಚ್‌.ಬಿ. ಸಿದ್ದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ಅವರಿಗೆ ನಾಯಕಿಯಾಗಿ ರಿಯಾ ರಣ್ವಿಕಾ ಕಾಣಿಸಿಕೊಂಡಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕ ಕೆ ಕೆ ಅಶ್ರಫ್‌, ನಮ್ಮ ಚಿತ್ರದ ನಾಯಕ ನಿರಂಜನ್‌.

ಹೆಚ್ ಬಿ ಸಿದ್ದು ನಿರ್ದೇಶನದ ‘ನಮ್ಮ ಹುಡುಗರು’ ಸಿನಿಮಾ ಮಂಡ್ಯ ಮತ್ತು ಮಂಗಳೂರಿನ ಹಳ್ಳಿಯಲ್ಲಿ ಶೂಟಿಂಗ್ ನಡೆಸಿದೆ. “ನಾಲ್ಕು ವರ್ಷಗಳ ಹಿಂದೆ ನಾನು ತೆಳ್ಳಗಿರುವಾಗ ಮತ್ತು ಕಾಲೇಜಿಗೆ ಹೋಗುವವನಂತೆ ಕಾಣುತ್ತಿದ್ದಾಗ ಚಿತ್ರ ಮಾಡಲಾಗಿತ್ತು. ಆಗ ನನ್ನ ವ್ಯಕ್ತಿತ್ವವು ಮಾಸ್ ಚಿತ್ರಗಳಿಗೆ ಹೊಂದಿಕೆಯಾಗಲಿಲ್ಲ, ಆದ್ದರಿಂದ ನಾನು ನಮ್ಮ ಹುಡುಗರಂತಹ ವಿಷಯವನ್ನು ಆರಿಸಬೇಕಾಯಿತು.

ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು.  ನನ್ನ ಅಭಿನಯ, ನನ್ನ ನೃತ್ಯ ಕೌಶಲ್ಯ ಮತ್ತು ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯ. ಹಲವು ಹಿನ್ನಡೆಯ ನಡುವೆಯೂ ನಮ್ಮ ಹುಡುಗರು ಸಿನಿಮಾವನ್ನು ನಾನು ವಿಶೇಷವಾಗಿ ಪರಿಗಣಿಸುತ್ತೇನೆ ಏಕೆಂದರೆ ಇದು ನಾಯಕನಾಗಿ ನನ್ನ ಮೊದಲ ಚಿತ್ರವಾಗಿದೆ ಎಂದು ನಿರಂಜನ್ ತಿಳಿಸಿದ್ದಾರೆ.

ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಯಾನ್ ರಾಯ್  ಸಂಗೀತ  ಮತ್ತು ಚಿದಾನಂದ್ ಎಚ್ ಕೆ ಮತ್ತು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ತಮ್ಮ ಚಿಕ್ಕಪ್ಪ ಉಪೇಂದ್ರ ಅವರ ಸಪೋರ್ಟ್ ಬಗ್ಗೆ ಮಾತನಾಡಿದ ನಿರಂಜನ್,  ನಾನು ಜವಾಬ್ದಾರಿಯಿಂದ ನನ್ನ ವೃತ್ತಿ ಜೀವನವನ್ನು ನಡೆಸಬೇಕು ಎಂಬ ಬಗ್ಗೆ ಸ್ಪಷ್ಟತೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT