ಪುನೀತ್ ಜೊತೆ ನಿರ್ದೇಶಕ ಅಮೋಘವರ್ಷ 
ಸಿನಿಮಾ ಸುದ್ದಿ

ಪ್ರಕೃತಿ ಮಾತೆಗೆ ಸಲ್ಲಿಸುವ ಗೌರವ "ಗಂಧದ ಗುಡಿ"

ಗಂಧದ ಗುಡಿ ಅ.28 ರಂದು ತೆರೆ ಕಾಣಲಿದ್ದು, ಈ ಡಾಕ್ಯುಮೆಂಟರಿ ಸಿನಿಮಾ ಮೂಲಕ ಪುನೀತ್ ರಾಜ್ ಕುಮಾರ್ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗಂಧದ ಗುಡಿ ಅ.28 ರಂದು ತೆರೆ ಕಾಣಲಿದ್ದು, ಈ ಡಾಕ್ಯುಮೆಂಟರಿ ಸಿನಿಮಾ ಮೂಲಕ ಪುನೀತ್ ರಾಜ್ ಕುಮಾರ್ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಅ.09 ರಂದು ಸಾಹಸಗಳನ್ನೊಳಗೊಂಡ ಸಿನಿಮಾ ಬಿಡುಗಡೆಯಾಗಲಿದ್ದು, ಕರ್ನಾಟಕದ ರೋಮಾಂಚಕ ದೃಶ್ಯಗಳನ್ನು ಪವರ್ ಸ್ಟಾರ್ ಪುನೀತ್ ಹಾಗೂ ನಿರ್ದೇಶಕ ಜೆಎಸ್ ಅಮೋಘವರ್ಷ ತೆರೆ ಮೇಲೆ ತಂದಿದ್ದಾರೆ. ಟ್ರೈಲರ್ ನಲ್ಲಿ ಪುನೀತ್ ರಾಜ್ ಕುಮಾರ್ ಕಠಿಣ ಭೂಪ್ರದೇಶಗಳು ಮತ್ತು ಸವಾಲುಗಳಿಂದ ಕೂಡಿರುವ ಪ್ರದೇಶಗಳಲ್ಲಿ ಹಾದುಹೋಗುವ ದೃಶ್ಯಗಳು ಇದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಕರ್ನಾಟಕದ ಸೆಲೆಬ್ರಿಟಿಗಳು ಹಾಗೂ ಪ್ರಧಾನಿ ಮೋದಿ ಸೇರಿದಂತೆ ಹಲವು ನೇತಾರರು ಗಂಧದ ಗುಡಿಯ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಹೃದಯದಲ್ಲಿ ಜೀವಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಪ್ರಧಾನಿ ಅವರಿಂದ ಮೆಚ್ಚುಗೆ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೋಘವರ್ಷ ಅದನ್ನು ರಾಷ್ಟ್ರೀಯ ಹೆಮ್ಮೆ ಎಂದು ಬಣ್ಣಿಸಿದ್ದಾರೆ. 1.3 ಬಿಲಿಯನ್ ಮಂದಿ ಇರುವ ದೇಶದಲ್ಲಿ ಇಂದಿಗೂ ಆನೆ, ಹುಲಿಗಳು ನೋಡಸಿಗುತ್ತಿವೆ ಈ ವಿಷಯದಲ್ಲಿ ಬೇರೆ ಯಾವ ದೇಶಕ್ಕೂ ಅವಕಾಶವಿಲ್ಲದ ಹೆಮ್ಮೆ ನಮ್ಮದಾಗಿದೆ ಎಂದು ಹೇಳಿದ್ದಾರೆ.
 
ನಾವು ಒಳ್ಳೆಯ ಸಂಗತಿಗಳನ್ನು ಸಂಭ್ರಮಿಸಿ ಹೆಮ್ಮೆ ಪಡಬೇಕು, ಈ ಸಂದರ್ಭದಲ್ಲಿ ಭರವಸೆಯ ಸಂದೇಶ ಬಹಳ ಮುಖ್ಯವಾಗುತ್ತದೆ. ಗಂಧದ ಗುಡಿಯಲ್ಲಿ ಪುನೀತ್ ಸ್ವತಃ ಇದ್ದು, ಇದೇ ಕಾರಣದಿಂದ ಸಿನಿಮಾ ವಿಶಿಷ್ಟವಾಗಿರಲಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಇದು ಪುನೀತ್ ಅವರು ಕ್ಯಾಮರಾ ಮುಂದೆ ಬಂದಂಥಹ ಇತ್ತೀಚಿನ ದೃಶ್ಯಗಳಾಗಿದ್ದು, ನಮಗಾಗಿ ಅವರು ಬಿಟ್ಟು ಹೋದಂತಹ ಪರಂಪರೆಯಾಗಿದೆ ಎನ್ನುತ್ತಾರೆ ಅಮೋಘವರ್ಷ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video