ಸಿನಿಮಾ ಸುದ್ದಿ

'ನೂರು ಜನ್ಮಕು' ಸಿನಿಮಾ ನಟ ಆರ್ಯನ್ ಸಂತೋಷ್ ಮಲಯಾಳಂಗೆ ಪದಾರ್ಪಣೆ

Ramyashree GN

ಕೊನೆಯದಾಗಿ ಡಿಯರ್ ಸತ್ಯ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಆರ್ಯನ್ ಸಂತೋಷ್ ಅವರು ಮಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನೂರು ಜನ್ಮಕು ಸಿನಿಮಾದಲ್ಲಿ ನಟಿಸಿದ್ದ ನಟ, ಅರುಣ್ ಗೋಪಿ ನಿರ್ದೇಶನದ ದಿಲೀಪ್ ಅವರ ನಿರ್ಮಾಣದ ಮುಂದಿನ ಮಲಯಾಳಂ ಚಿತ್ರದ ಭಾಗವಾಗಲಿದ್ದಾರೆ.

ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿ ತಮನ್ನಾ, ನಟ ಡಿನೋ ಮೋರಿಯಾ ಮತ್ತು ಶರತ್‌ಕುಮಾರ್ ಕೂಡ ನಟಿಸುತ್ತಿದ್ದಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಆರ್ಯನ್, ತಮ್ಮ ಚೊಚ್ಚಲ ಮಲಯಾಳಂ ಚಿತ್ರದ ಬಗ್ಗೆ ಮಾತನಾಡುತ್ತಾರೆ. 'ನಾನು ತನಿಖೆಯನ್ನು ನಿರ್ವಹಿಸುವ ಮುಂಬೈ ಅಪರಾಧ ವಿಭಾಗದ ಐಪಿಎಸ್ ಅಧಿಕಾರಿಯಾಗಿ ನಟಿಸುತ್ತಿದ್ದೇನೆ' ಎನ್ನುತ್ತಾರೆ.

'ದಿಲೀಪ್ ಅಭಿನಯದ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ ಮತ್ತು ಅವರೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ. ನಾನು ಈ ಸಿನಿಮಾದ ಭಾಗವಾಗಿದ್ದೇನೆ ಎಂದು ತಿಳಿದ ನಂತರ ದಿಲೀಪ್ ಅಭಿಮಾನಿಗಳಿಂದ ನನಗೆ ಸಾಕಷ್ಟು ಸಂದೇಶಗಳು ಬರುತ್ತಿವೆ. ಈ ದೊಡ್ಡ ಬಜೆಟ್ ಚಿತ್ರವು ದಿಲೀಪ್ ಮತ್ತು ಅರುಣ್ ಗೋಪಿ ಅವರ ರಾಮಲೀಲಾ ಸಂಯೋಜನೆಯನ್ನು ಮತ್ತೆ ಒಂದುಗೂಡಿಸುತ್ತದೆ' ಎಂದು ಹೇಳುತ್ತಾರೆ.

'ಬರಹಗಾರ ಉದಯಕೃಷ್ಣ ಮತ್ತು ಪುಲಿಮುರುಗನ್ ಛಾಯಾಗ್ರಾಹಕ ಶಾಜಿಕುಮಾರ್ ಅವರೊಂದಿಗೆ ಒಡನಾಡಲು ನಾನು ಅಷ್ಟೇ ರೋಮಾಂಚನಗೊಂಡಿದ್ದೇನೆ' ಎಂದು ಅವರು ಹೇಳುತ್ತಾರೆ.

ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಆರ್ಯನ್ ಸಿನಿಮಾದ ಸೆಟ್‌ಗೆ ಸೇರಲಿದ್ದು, ಮುಂಬೈ ಮತ್ತು ಗುಜರಾತ್‌ನಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಈಮಧ್ಯೆ, ಆರ್ಯನ್ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಅವು ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿವೆ.

SCROLL FOR NEXT