ಹಂಟರ್ ಚಿತ್ರತಂಡದೊಂದಿಗೆ ನಟ ಶರತ್‌ಕುಮಾರ್ 
ಸಿನಿಮಾ ಸುದ್ದಿ

ನಿರಂಜನ್ ಸುಧೀಂದ್ರ ನಟನೆಯ ಹಂಟರ್‌ ಸಿನಿಮಾಗೆ ಶರತ್‌ಕುಮಾರ್ ಎಂಟ್ರಿ

ಹಂಟರ್ ಸಿನಿಮಾ ನಿರಂಜನ್ ಸುಧೀಂದ್ರ ಅಭಿನಯದ ಮತ್ತು ವಿನಯ್ ಕೃಷ್ಣ ನಿರ್ದೇಶನದ ಚಿತ್ರ ಸೆಟ್ಟೇರಿದ್ದು, ಇದೀಗ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ತ್ರಿವಿಕ್ರಮ ಸಪಲ್ಯ ನಿರ್ಮಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರಂಜನ್ ಅವರನ್ನು ಬಹು ಛಾಯೆಗಳಲ್ಲಿ ತೋರಿಸಲಿದೆ.

ಹಂಟರ್ ಸಿನಿಮಾ ನಿರಂಜನ್ ಸುಧೀಂದ್ರ ಅಭಿನಯದ ಮತ್ತು ವಿನಯ್ ಕೃಷ್ಣ ನಿರ್ದೇಶನದ ಚಿತ್ರ ಸೆಟ್ಟೇರಿದ್ದು, ಇದೀಗ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.ತ್ರಿವಿಕ್ರಮ ಸಪಲ್ಯ ನಿರ್ಮಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರಂಜನ್ ಅವರನ್ನು ಬಹು ಛಾಯೆಗಳಲ್ಲಿ ತೋರಿಸಲಿದೆ.

ಸೌಮ್ಯ ಮೆನನ್ (ಸರ್ಕಾರು ವಾರಿ ಪಾಟ), ಸುಮನ್, ಸಾಧು ಕೋಕಿಲಾ ಮತ್ತು ಬಾಲಿವುಡ್ ನಟ ಕಬೀರ್ ಬೇಡಿ ಮುಖ್ಯಮಂತ್ರಿಯಾಗಿ ನಟಿಸಿರುವ ಈ ಚಿತ್ರಕ್ಕಾಗಿ ಚಿತ್ರತಂಡ ಇದೀಗ ಮತ್ತೋರ್ವ ಆಸಕ್ತಿದಾಯಕ ನಟನನ್ನು ಕರೆತಂದಿದೆ. ಇದೀಗ, ಶರತ್‌ಕುಮಾರ್ ಪೊಲೀಸ್ ಕಮಿಷನರ್ ಆಗಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಇತ್ತೀಚೆಗೆ ಘೋಷಿಸಿದ್ದು, ನಟ ಈಗಾಗಲೇ ಅವರ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

'ನಾವು ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದೇವೆ ಮತ್ತು 26 ದಿನಗಳ ಶೆಡ್ಯೂಲ್ ಬಾಕಿ ಉಳಿದಿದೆ. ಜೂನ್ 10ರೊಳಗೆ ಚಿತ್ರೀಕರಣವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದೇವೆ. ನಾವು ಚಿತ್ರವನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇವೆ' ಎಂದು ನಿರ್ದೇಶಕರು ಹೇಳುತ್ತಾರೆ. ಬೆಂಗಳೂರು, ಲೋನಾವಾಲಾ, ಪುಣೆ, ಮೈಸೂರು ಮತ್ತು ಹೈದರಾಬಾದ್‌ಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ತ್ರಿವಿಕ್ರಮ್ ಫಿಲ್ಮ್ಸ್ ನಿರ್ಮಾಣದ ಹಂಟರ್ ಚಿತ್ರಕ್ಕೆ ಚಂದನ್ ಶೆಟ್ಟಿ ಅವರ ಸಂಗೀತ ಮತ್ತು ಮಹೇಶ್ ಅವರ ಛಾಯಾಗ್ರಹಣವಿದೆ. ಈಮಧ್ಯೆ, ನಿರಂಜನ್ ಅವರು ಕ್ಯೂ ಮತ್ತು ಸೂಪರ್‌ಸ್ಟಾರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel