ಊರ್ವಶಿ ರೌಟೇಲಾ ಮತ್ತು ರಿಷಬ್ ಶೆಟ್ಟಿ 
ಸಿನಿಮಾ ಸುದ್ದಿ

‘ಕಾಂತಾರ 2' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿ ಊರ್ವಶಿ ರೌಟೇಲಾ: ಚಿತ್ರ ತಂಡ ಹೇಳಿದ್ದೇನು?

ಇತ್ತೀಚೆಗಷ್ಟೇ ನಟಿ ಊರ್ವಶಿ ರೌಟೇಲಾ ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಜತೆಗಿನ ಫೋಟೋ ಹಂಚಿಕೊಂಡು, ‘ಕಾಂತಾರ 2’ ಲೋಡಿಂಗ್‌ ಎಂದು ಪೋಸ್ಟ್‌ ಮಾಡಿದ್ದರು.

ಇತ್ತೀಚೆಗಷ್ಟೇ ನಟಿ ಊರ್ವಶಿ ರೌಟೇಲಾ ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಜತೆಗಿನ ಫೋಟೋ ಹಂಚಿಕೊಂಡು, ‘ಕಾಂತಾರ 2’ ಲೋಡಿಂಗ್‌ ಎಂದು ಪೋಸ್ಟ್‌ ಮಾಡಿದ್ದರು.

‘ಕಾಂತಾರ 2’ ಬಳಗಕ್ಕೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಸಹ ಎಂಟ್ರಿಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಅಪ್‌ಡೇಟ್‌ ಮಾಹಿತಿ ಸಿಕ್ಕಿದೆ.

‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ ಎಂಬ ವಿಚಾರ ಶುದ್ಧ ಸುಳ್ಳು. ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಆಧಾರರಹಿತವಾಗಿದೆ. ಇತ್ತೀಚೆಗಷ್ಟೇ ರಿಷಬ್‌ ಶೆಟ್ಟಿ ಇದ್ದ ಹೊಟೇಲ್‌ನಲ್ಲಿ ಊರ್ವಶಿ ಸಹ ಇದ್ದರು. ಈ ವೇಳೆ ರಿಷಬ್‌ ಅವರನ್ನು ಭೇಟಿ ಮಾಡಿಸುವಂತೆ ಊರ್ವಶಿ ಕೇಳಿದ್ದರು. ಅದಕ್ಕೆ ಅಷ್ಟೇ ನಯವಾಗಿ ಒಪ್ಪಿದ ರಿಷಬ್‌, ಊರ್ವಶಿ ಅವರನ್ನು ಭೇಟಿಯಾಗಿದ್ದಾರೆ. ಫೋಟೋವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋವನ್ನು ಊರ್ವಶಿ ಶೇರ್‌ ಮಾಡಿದ್ದಾರೆ" ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಕಾಂತಾರ ಚಿತ್ರದ ಎರಡನೇ ಭಾಗ ಸಿದ್ಧವಾಗಲಿದೆ ಎಂದು ರಿಷಬ್‌ ಶೆಟ್ಟಿ ಘೋಷಿಸುತ್ತಿದ್ದಂತೆ, ಇತ್ತ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇರಲಿದ್ದಾರೆ? ಹೊಸಬರಾಗಿ ಯಾರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಅದರಂತೆ ಅದೇ ಸಮಯಕ್ಕೆ ನಟಿ ಊರ್ವಶಿ ರೌಟೇಲಾ ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಜತೆಗಿನ ಫೋಟೋ ಹಂಚಿಕೊಂಡು, ‘ಕಾಂತಾರ 2’ ಲೋಡಿಂಗ್‌ ಎಂದು ಪೋಸ್ಟ್‌ ಮಾಡಿದ್ದರು. ರಿಷಬ್, ಸಪ್ತಮಿ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ನಟಿಸಿರುವ ಕಾಂತಾರ,  ಪ್ಯಾನ್-ಇಂಡಿಯನ್ ಚಲನಚಿತ್ರವಾಗಿದ್ದು, ಇದು 2022 ರ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT