ರಾಮ್ ಚರಣ್ - ಉಪಾಸನಾ 
ಸಿನಿಮಾ ಸುದ್ದಿ

ಊಹಾಪೋಹಗಳಿಗೆ ತೆರೆ ಎಳೆದ ರಾಮ್ ಚರಣ್, ಉಪಾಸನಾ: ನಮ್ಮ ಮಗು ಭಾರತದಲ್ಲಿ ಜನಿಸಲಿದೆ ಎಂದ ತಾರಾ ದಂಪತಿ!

ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ರಾಮ್ ಚರಣ್ ಮತ್ತು ಅವರ ಉದ್ಯಮಿ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಭಾರತದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ತಮ್ಮ ಮೊದಲ ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಉಪಾಸನಾ ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್: ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ರಾಮ್ ಚರಣ್ ಮತ್ತು ಅವರ ಉದ್ಯಮಿ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಭಾರತದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ತಮ್ಮ ಮೊದಲ ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಉಪಾಸನಾ ಸ್ಪಷ್ಟನೆ ನೀಡಿದ್ದಾರೆ.

ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ 2022 ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಅಪೋಲೋ ಆಸ್ಪತ್ರೆಗಳಲ್ಲಿ ಸಿಎಸ್‌ಆರ್‌ನ ಉಪಾಧ್ಯಕ್ಷರೂ ಆಗಿರುವ ಉಪಾಸನಾ, ತಮಗೆ ವರ್ಷಗಳಿಂದ ತಿಳಿದಿರುವ ಆಸ್ಪತ್ರೆಯ ಸಿಬ್ಬಂದಿಯಿಂದಲೇ ತನ್ನ ತಾಯ್ನಾಡಿನಲ್ಲಿ ಹೆರಿಗೆ ಮಾಡಿಸಲು ಉತ್ಸುಕರಾಗಿದ್ದಾರೆ.

ಜನಪ್ರಿಯ ಸುದ್ದಿ ಕಾರ್ಯಕ್ರಮ 'ಗುಡ್ ಮಾರ್ನಿಂಗ್ ಅಮೆರಿಕಾ'ದಲ್ಲಿ ರಾಮ್ ಚರಣ್ ಕಾಣಿಸಿಕೊಂಡ ನಂತರ ಈ ಊಹಾಪೋಹಗಳು ಹುಟ್ಟಿಕೊಂಡಿದ್ದವು. ದಂಪತಿ ತಮ್ಮ ಚೊಚ್ಚಲ ಮಗುವನ್ನು ಯುಎಸ್‌ನಲ್ಲಿ ಸ್ವಾಗತಿಸಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ತಮ್ಮ ಹೆರಿಗೆ ಭಾರತದಲ್ಲಿಯೇ ನಡೆಯಲಿದೆ ಎಂದು ಉಪಾಸನಾ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

'ನಮ್ಮ ತಾಯ್ನಾಡಿನಲ್ಲಿ- ಭಾರತದಲ್ಲಿ ನಮ್ಮ ಮೊದಲ ಮಗುವನ್ನು ಹೆರಿಗೆ ಮಾಡಿಸಲು ನಾನು ರೋಮಾಂಚನಗೊಂಡಿದ್ದೇನೆ. ಡಾ. ಸುಮನಾ ಮನೋಹರ್, ಡಾ. ರೂಮಾ ಸಿನ್ಹಾ ಮತ್ತು ಈಗ ಗುಡ್ ಮಾರ್ನಿಂಗ್ ಅಮೇರಿಕಾ ಶೋನಿಂದ ಡಾ ಜೆನ್ನಿಫರ್ ಆಶ್ಟನ್ ಸೇರಿದಂತೆ ಅಪೋಲೋ ಆಸ್ಪತ್ರೆಗಳಲ್ಲಿ ವಿಶ್ವ ದರ್ಜೆಯ ವೈದ್ಯಕೀಯ OB/GYN ತಂಡವು ಲಭ್ಯವಿದೆ. ಈ ಪ್ರಯಾಣವು ನಮಗೆ ಅನೇಕ ರೋಮಾಂಚಕಾರಿ ಅನುಭವಗಳನ್ನು ನೀಡುತ್ತಿದೆ ಮತ್ತು ನಾವು ನಮ್ಮ ಜೀವನದಲ್ಲಿ ಈ ಹೊಸ ಹಂತವನ್ನು ಬಹಳ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದೇವೆ' ಎಂದು ಉಪಾಸನಾ ಹೇಳಿದ್ದಾರೆ.

ಅಪೊಲೊ ಆಸ್ಪತ್ರೆಗಳಲ್ಲಿ, OB/GYN ತಂಡವು ಡಾ. ಸುಮನಾ ಮನೋಹರ್ ಮತ್ತು ಡಾ ರೂಮಾ ಸಿನ್ಹಾ ಅವರನ್ನು ಒಳಗೊಂಡಿರುತ್ತದೆ. ಅಲ್ಲದೆ, ಬೋರ್ಡ್-ಪ್ರಮಾಣೀಕೃತ ಒಬ್-ಜಿನ್, ಲೇಖಕ ಮತ್ತು ಯುಎಸ್‌ನ ಟಿವಿ ವೈದ್ಯಕೀಯ ವರದಿಗಾರ ಡಾ ಜೆನ್ನಿಫರ್ ಆಶ್ಟನ್ ಕೂಡ ದಂಪತಿಯ ಮಗುವನ್ನು ಹೆರಿಗೆ ಮಾಡಿಸುವ ತಂಡದ ಭಾಗವಾಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT