ಉರ್ಫಿ ಜಾವೇದ್ 
ಸಿನಿಮಾ ಸುದ್ದಿ

ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ದೂರು ನೀಡಿದ ಬಿಜೆಪಿ ನಾಯಕಿ ವಿರುದ್ಧ ಕೆರಳಿ ಕೆಂಡವಾದ ಉರ್ಫಿ ಜಾವೇದ್!

ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬಯಿ: ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಭೇಟಿ ಮಾಡಿ ದೂರು ದಾಖಲಿಸಿರುವ ಅವರು, ದೇಹದ ಅಂಗಾಂಗಗಳನ್ನ ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಈ ನಟಿ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂವಿಧಾನ ನೀಡಿರುವ ನಡವಳಿಕೆಯ ಹಕ್ಕು ಹೀಗೆ ಉಪಯೋಗವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ನಟಿ ತನ್ನ ಖಾಸಗಿ ಜೀವನದಲ್ಲಿ ಮಾಡುವ ಕೆಲಸಕ್ಕೂ ಸಮಾಜಕ್ಕೂ ಸಂಬಂಧವಿಲ್ಲ. ಆದರೆ, ಕೇವಲ ಖ್ಯಾತಿ ಗಳಿಸಲು ಈ ನಟಿ ತನ್ನ ದೇಹವನ್ನು ಮಾರ್ಕೆಟಿಂಗ್ ಮಾಡಿರುವುದು ಬೇಸರ ತರಿಸಿದೆ.

ತನ್ನ ದೇಹವನ್ನು ಪ್ರದರ್ಶಿಸಲು ಬಯಸಿದರೆ, ಅದನ್ನು ನಾಲ್ಕು ಗೋಡೆಗಳ ಹಿಂದೆ ಮಾಡಬೇಕು. ಈಕೆ ನಡೆಯಿಂದ ಸಮಾಜದಲ್ಲಿ ಕೆರಳಿಸುವ ಮನೋಭಾವ ಹೆಚ್ಚಾಗುತ್ತಿದೆ. ಈ ನಟಿಗೆ ಇದರ ಅರಿವೇ ಇಲ್ಲ. ಹಾಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿತ್ರಾ ವಾಘ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅತ್ತ ಬಿಜೆಪಿ ನಾಯಕಿ ದೂರು ನೀಡ್ತಿದ್ದಂತೆ, ಉರ್ಫಿ ಜಾವೇದ್ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಕೋಪದ ಪೋಸ್ಟ್​  ಹಾಕಿ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಕೆಲವು ರಾಜಕಾರಣಿಗಳಿಗೆ ಮಾಡೋದಕ್ಕೆ ಬೇರೆ ಕೆಲಸನೇ ಇಲ್ಲ. ನಾನು ಮುಂಬೈನಲ್ಲಿ ಮಾನವ ಕಳ್ಳಸಾಗಣೆ ಮತ್ತು ಅಕ್ರಮವಾಗಿ ಲೈಂಗಿಕ ಬಳಕೆಯನ್ನ ವಿರೋಧಿಸಿದ್ದೆ. ಮುಂಬೈನಲ್ಲಿ ಅಕ್ರಮ ಡ್ಯಾನ್ಸ್ ಬಾರ್‌ಗಳು ಮತ್ತು ವೇಶ್ಯಾವಾಟಿಕೆ ನಿಲ್ಲಿಸಬೇಕಿದೆ.

ಈ ಬಗ್ಗೆ ಯಾರೂ ಮಾತನಾಡಲ್ಲ. ಕೇವಲ ಮೀಡಿಯಾ ಅಟೆನ್ಷನ್​ಗಾಗಿ ಮಾತ್ರ ನನ್ನ ವಿರುದ್ಧ ದೂರು ನೀಡ್ತಾರೆ ಎಂದು ಉರ್ಫಿ ಕಿಡಿಕಾರಿದ್ದಾರೆ. ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ನಿಮ್ಮದೇ ಪಕ್ಷದ ನಾಯಕರ ವಿರುದ್ಧ ದೌರ್ಜನ್ಯದ ಕೇಸ್​ಗಳಿವೆಯಲ್ಲಾ? ಇದಕ್ಕೆ ನಿಮ್ಮ ಉತ್ತರವೇನು ಅಂತಾ ನಟಿ ಜಾವೇದ್ ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT