ಸಿನಿಮಾ ಸುದ್ದಿ

ಸಂದೇಶ್ ಪ್ರಸನ್ನ ನಾಯಕ ನಟನೆಯ 'ರೇಸರ್' ಚಿತ್ರಕ್ಕೆ ಮೂಹೂರ್ತ

Nagaraja AB

ನಿರ್ಮಾಪಕ ಭರತ್ ವಿಷ್ಣುಕಾಂತ್, ಮುಂಬರುವ 'ರೇಸರ್' ಚಿತ್ರದ ಮೂಲಕ ನಿರ್ದೇಶಕರಾಗಲು ಸಜ್ಜಾಗಿದ್ದಾರೆ. ಇದನ್ನು ತಮ್ಮ ಬ್ಯಾನರ್ ಭಾರತ್ ಫಿಲ್ಮ್ಸ್‌ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಭಾನುವಾರ ಈ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ವೃತ್ತಿಪರ ಸೂಪರ್ ಬೈಕ್ ರೇಸರ್ ಸಂದೇಶ್ ಪ್ರಸನ್ನ ನಾಯಕ ನಟರಾಗಿ, ಚೊಚ್ಚಲ ಬಾರಿಗೆ ಅಭಿನಯಿಸುತ್ತಿದ್ದಾರೆ.  

ಮೆಕ್ಯಾನಿಕ್ ಮತ್ತು ರಾಷ್ಟ್ರೀಯ ಚಾಂಪಿಯನ್ ಖಲೀಮ್ ಎಂಬ ವ್ಯಕ್ತಿಯ ಸುತ್ತಲಿನ ನೈಜ ಘಟನೆಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಚಿತ್ರದಲ್ಲಿ ನಿಜವಾದ ಬೈಕರ್ ರೇಸರ್ ಗಳು ಇರಲಿದ್ದು, ಮೊದಲ ಬಾರಿಗೆ, ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಚಿತ್ರೀಕರಿಸಲಾಗುತ್ತದೆ.

ಬೈಕರ್‌ ಜೀವನದ ಹೋರಾಟ ಮತ್ತು ಇಂಟರ್ ನ್ಯಾಷನಲ್ ಚಾಂಪಿಯನ್‌ಶಿಪ್ ಸರ್ಕ್ಯೂಟ್‌ನ ಕುತಂತ್ರವನ್ನು ಅರ್ಥಮಾಡಿಕೊಳ್ಳಲು ನಿರ್ದೇಶಕರು ಆರಂಭದಲ್ಲಿ ತಮ್ಮ ಬಳಿ ಬಂದರು. ಅಂತಿಮವಾಗಿ ತಮ್ಮನ್ನು ಹಿರೋ ಆಗಿ ಮಾಡಿದರು ಎಂದು ಸಂದೇಶ್ ಹೇಳುತ್ತಾರೆ. ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ಕೂಡ ಅಭಿನಯಿಸುತ್ತಿದ್ದು, ಮಂಗಳವಾರದಿಂದ ಸೆಟ್‌ ಸೇರಲಿದ್ದಾರೆ. 

ಶುಗರ್ ಫ್ಯಾಕ್ಟರಿ, ಬ್ರಹ್ಮಕಮಲ, ಐರಾವಣ, ವೀರ ಸಾಮ್ರಾಟ್, ಮತ್ತು 188 ಚಿತ್ರಗಳ ಚಿತ್ರೀಕರಣ ಮುಗಿಸಿರುವ ನಟ ಸಂದೇಶ್ ಪ್ರಸನ್ನ ಈಗ ರೇಸರ್ ಮೇಲೆ ಕೇಂದ್ರೀಕರಿಸಿದ್ದಾರೆ. ಪ್ರಾಜೆಕ್ಟ್  ಭಾಗವಾಗಲು ಆಸಕ್ತಿಯಿದೆ. ಇದು ಸಂಪೂರ್ಣವಾಗಿ ರೇಸಿಂಗ್‌ಗೆ ಸಂಬಂಧಿಸಿದೆ. ನಾನು ಮಾತನಾಡುವ ಪಾತ್ರವನ್ನು ನಿರ್ವಹಿಸುತ್ತೇನೆ. ನಿರ್ದೇಶಕರು ಈ ಚಿತ್ರದಲ್ಲಿ ನನ್ನ ನೃತ್ಯ ಕೌಶಲ್ಯವನ್ನು ಅನ್ವೇಷಿಸಿದ್ದಾರೆ ಎಂದು ಅದ್ವಿತಿ ಹೇಳಿದ್ದಾರೆ. 

ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಮತ್ತು ಮೈಸೂರು ಸ್ವಾಮಿ ಅವರ ಛಾಯಾಗ್ರಹಣದೊಂದಿಗೆ ಭಜರಂಗಿ ಲೋಕಿ, ಕಿರಣ್ ಶೆಟ್ಟಿ, ಯಶ್ ಶೆಟ್ಟಿ, ಟಗರ್ ಖ್ಯಾತಿಯ ಸುದ್ದಿ, ಸೂರಾಜ್ ಮತ್ತಿತತರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

SCROLL FOR NEXT