ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ! 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ!

ಆರ್ಯನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಮೂಲಕ ಅಧ್ಯಯನ್ ಸುಮನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಾಝ್- ದಿ ಮಿಸ್ಟರಿ ಕಂಟಿನ್ಯೂಸ್ ಮತ್ತು ಆಶ್ರಮ್ ವೆಬ್ ಸರಣಿ, ಹಾಗೆಯೇ ಮ್ಯೂಸಿಕಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಹಿಂದಿ ನಟ, ಇದೀಗ ಥ್ರಿಲ್ಲಿಂಗ್ ಬಹುಭಾಷಾ ಕ್ರೈಮ್ ಸಿನಿಮಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆರ್ಯನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಮೂಲಕ ಅಧ್ಯಯನ್ ಸುಮನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಾಝ್- ದಿ ಮಿಸ್ಟರಿ ಕಂಟಿನ್ಯೂಸ್ ಮತ್ತು ಆಶ್ರಮ್ ವೆಬ್ ಸರಣಿ, ಹಾಗೆಯೇ ಮ್ಯೂಸಿಕಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಹಿಂದಿ ನಟ, ಇದೀಗ ಥ್ರಿಲ್ಲಿಂಗ್ ಬಹುಭಾಷಾ ಕ್ರೈಮ್ ಸಿನಿಮಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಧ್ಯಯನ್ ಸುಮನ್‌ಗೆ ಜೋಡಿಯಾಗಿ ನಟಿ ರಾಗಿಣಿ ದ್ವಿವೇದಿ ನಟಿಸಲಿದ್ದಾರೆ. ಅಲ್ಲದೆ, ಅಭಿಮನ್ಯು ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ನಿರ್ಮಾಪಕರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಹುಭಾಷಾ ಚಿತ್ರವನ್ನು ಪ್ರಾರಂಭಿಸಿದರು ಮತ್ತು ಜೂನ್ 10 ರಂದು ಬೆಂಗಳೂರಿನಲ್ಲಿ ಮತ್ತೊಂದು ಶುಭ ಸಮಾರಂಭ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಆರ್ಯನ್ ಹೇಳುತ್ತಾರೆ. 

ಬಿಂಬಿಸಾರ, ಕಮಲ್ ಹಾಸನ್ ನಟನೆಯ ವಿಕ್ರಮ್ ಮತ್ತು ಪೊನ್ನಿಯಿನ್ ಸೆಲ್ವನ್ 1 ಮುಂತಾದ ದಕ್ಷಿಣ ಭಾರತದ ಚಲನಚಿತ್ರಗಳನ್ನು ಕರ್ನಾಟಕದಲ್ಲಿ ವಿತರಿಸಿದ ಹೊರೈಜನ್ ಸ್ಟುಡಿಯೊದಿಂದ ಟೋನಿ ರಾಜ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ವಿಜಯ್ ರಾಘವೇಂದ್ರ ಅಭಿನಯದ ಇನ್ನೂ ಬಿಡುಗಡೆಯಾಗಬೇಕಿರುವ '3 BHK' ನಂತರ ಇದು ಹೊರೈಜನ್ ಸ್ಟುಡಿಯೋಸ್‌ನ ಎರಡನೇ ಯೋಜನೆಯಾಗಿದೆ.

ಚಿತ್ರದ ಶೂಟಿಂಗ್ ಜೂನ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, ಮಹಾಂತೇಶ ಹಿರೇಮಠ, ವಿಜಯ್ ಚೆಂಡೂರ್ ಮತ್ತು ಸಂಜಯ್ ಕುಮಾರ್ ಸಹ ತಾರಾಗಣದಲ್ಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದ ಸಂಗೀತ ಸಂಯೋಜಕರಾಗಿ ಶ್ರೀಧರ್ ಕಶ್ಯಪ್ ಮತ್ತು ಛಾಯಾಗ್ರಾಹಕರಾಗಿ ಚಂದ್ರಶೇಖರ್ ಕೆಎಸ್ ಅವರನ್ನು ಆರ್ಯನ್ ಕರೆತಂದಿದ್ದಾರೆ. ಚಿತ್ರದ ಸಂಭಾಷಣೆ ಮತ್ತು ಸಾಹಿತ್ಯವನ್ನು ಹರೀಶ್ ಶೃಂಗ ಬರೆಯಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT