ಜಾನ್ವಿಕಾ ಕಲಕೇರಿ 
ಸಿನಿಮಾ ಸುದ್ದಿ

ರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಸುನೀಲ್ ರಾವ್ ಜೋಡಿಯಾಗಿ ಜಾನ್ವಿಕಾ ಕಲಕೇರಿ

ನಿರ್ದೇಶಕ ರಾಧಾಕೃಷ್ಣ ಪಲ್ಲಕಿ ಅವರ ವೀರ್ ಸಾವರ್ಕರ್ (ವಿನಯ ಕೆ ದಾಮೋದರ್ ಸಾವರ್ಕರ್) ಬಯೋಪಿಕ್‌ನಲ್ಲಿ ನಟ ಸುನೀಲ್ ರಾವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ವೀರ್ ಸಾವರ್ಕರ್ ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಜಾನ್ವಿಕಾ ಕಲಕೇರಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ರಾಧಾಕೃಷ್ಣ ಪಲ್ಲಕಿ ಅವರ ವೀರ್ ಸಾವರ್ಕರ್ (ವಿನಯ ಕೆ ದಾಮೋದರ್ ಸಾವರ್ಕರ್) ಬಯೋಪಿಕ್‌ನಲ್ಲಿ ನಟ ಸುನೀಲ್ ರಾವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಚಿತ್ರತಂಡದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ವೀರ್ ಸಾವರ್ಕರ್ ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಜಾನ್ವಿಕಾ ಕಲಕೇರಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಕೀರ್ತಿ ಕಲಕೇರಿ ಎಂದು ಕರೆಯಲಾಗುತ್ತಿದ್ದ ಜಾನ್ವಿಕಾ, ಮನೋರಂಜನ್ ಅವರ ಪ್ರಾರಂಭ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಕ್ಷಿತ್ ಶಶಿಕುಮಾರ್ ಅವರ ಓ ಮೈ ಲವ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಜಾನ್ವಿಕಾ ಬಾಗಲಕೋಟೆಯ ಹೆಸರಾಂತ ಶೆಹನಾಯಿ ವಾದಕ ಸನದಿ ಅಪ್ಪನವರ ಮರಿ ಮೊಮ್ಮಗಳಾಗಿದ್ದು, ಬಯೋಪಿಕ್‌ನಲ್ಲಿ ನಟಿಸಲು ಅವರಿಗೆ ಬಲವಾದ ಪಾತ್ರವಿದೆ ಎಂದು ರಾಧಾಕೃಷ್ಣ ಬಹಿರಂಗಪಡಿಸಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಉತ್ಸುಕರಾಗಿರುವ ಜಾನ್ವಿಕಾ, 'ಈ ಚಿತ್ರದಲ್ಲಿ ನನ್ನ ಪಾತ್ರವು ನನ್ನ ಹಿಂದಿನ ಎರಡು ಪ್ರಾಜೆಕ್ಟ್‌ಗಳಿಗೆ ವ್ಯತಿರಿಕ್ತವಾಗಿದೆ. ಅವು ರೊಮ್ಯಾನ್ಸ್ ಪ್ರಕಾರದಲ್ಲಿದ್ದವು. ಯಮುನಾಬಾಯಿ ಸಾವರ್ಕರ್ ಪಾತ್ರವನ್ನು ನಿರ್ವಹಿಸುವುದು ದೊಡ್ಡ ಜವಾಬ್ದಾರಿ ಎಂದು ನಾನು ನಂಬುತ್ತೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅಂತಹ ಮಹತ್ವದ ಪಾತ್ರವನ್ನು ಪಡೆಯುವುದು ಒಂದು ಹೆಜ್ಜೆ ಮುಂದಿದೆ' ಎಂದು ತಿಳಿಸಿದ್ದಾರೆ.

'ಒಮ್ಮೆ ಮಾರ್ಚ್ 18 ರಂದು ನನ್ನ ಕಾರ್ಯಾಗಾರವನ್ನು ಪ್ರಾರಂಭಿಸಿದ ನಂತರ, ನಾನು ಪಾತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತೇನೆ ಮತ್ತು ಮಾರ್ಚ್ 25ರಂದು ಚಿತ್ರತಂಡವು ಶೂಟಿಂಗ್ ಆರಂಬಿಸುವ ಮೊದಲು ನಾನು ಸಿದ್ಧಳಾಗಿರುತ್ತೇನೆ ಎಂದು ನಾನು ಭಾವಿಸುತ್ತೇನೆ' ಎನ್ನುತ್ತಾರೆ.

ತಾರಾಗಣದಲ್ಲಿ ಸಾಯಿ ಕುಮಾರ್, ಅನು ಪ್ರಭಾಕರ್, ರವಿಶಂಕರ್ ಮತ್ತು ರಂಗಾಯಣ ರಘು ಅವರಂತಹ ಹೆಸರಾಂತ ಕಲಾವಿದರು ಇದ್ದಾರೆ ಮತ್ತು ತಂಡವು ಅನುಪಮ್ ಖೇರ್ ಅವರನ್ನು ಒಂದು ಪ್ರಮುಖ ಪಾತ್ರವನ್ನು ಮಾಡಲು ಸಂಪರ್ಕಿಸಲು ಯೋಜಿಸುತ್ತಿದೆ. 

ಹೊಂದಾವರೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆಎನ್ ಚಕ್ರಪಾಣಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಕೆಎಸ್ ಚಂದ್ರಶೇಖರ್ ಅವರನ್ನು ಛಾಯಾಗ್ರಾಹಕರಾಗಿ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನಕ್ಕೆ ಆಯ್ಕೆಮಾಡಲಾಗಿದೆ. ಗೌತಮ್ ಪಲ್ಲಕಿ ಸಂಕಲನಕಾರರಾಗಿ, ಸ್ಯಾಮ್ ಬಯೋಪಿಕ್‌ಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT