ಬಾಲಕೃಷ್ಣ-ವಿಚಿತ್ರಾ 
ಸಿನಿಮಾ ಸುದ್ದಿ

ನಟ ಬಾಲಕೃಷ್ಣ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ: Biggboss ಮನೆಯಲ್ಲಿ ಬಾಂಬ್ ಸಿಡಿಸಿದ ನಟಿ

ಖ್ಯಾತ ನಟ ಹಾಗೂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಅವರು ವಿವಾದಗಳಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಅವರ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪಗಳು ಕೇಳಿ ಬರುತ್ತಿವೆ. ಸದ್ಯ ಕಾಲಿವುಡ್‌ನ ಹಿರಿಯ ನಾಯಕಿಯೊಬ್ಬರು ಮಾಡಿರುವ ಕಾಮೆಂಟ್‌ಗಳು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.

ಚೆನ್ನೈ: ಖ್ಯಾತ ನಟ ಹಾಗೂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಅವರು ವಿವಾದಗಳಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಅವರ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪಗಳು ಕೇಳಿ ಬರುತ್ತಿವೆ. ಸದ್ಯ ಕಾಲಿವುಡ್‌ನ ಹಿರಿಯ ನಾಯಕಿಯೊಬ್ಬರು ಮಾಡಿರುವ ಕಾಮೆಂಟ್‌ಗಳು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.

ನಾಯಕಿಯ ಹೆಸರು ವಿಚಿತ್ರಾ. ಈ ಹಿಂದೆ ಭಲೇವಾದಿ ಬಸು ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಜೊತೆಯಾಗಿ ನಟಿಸಿದ್ದರು. ಇದರಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿಚಿತ್ರಾ ನಟಿಸಿದ್ದು ಬುಡಕಟ್ಟು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಕೃಷ್ಣ, ಶಿಲ್ಪಾಶೆಟ್ಟಿ, ಅಂಜಲ ಜವೇರಿ ಕಾಂಬಿನೇಷನ್ ನಲ್ಲಿ 2001ರಲ್ಲಿ ತೆರೆಕಂಡ ಸಿನಿಮಾವನ್ನು ಪಿಎ ಅರುಣ್ ಪ್ರಸಾದ್ ನಿರ್ದೇಶಿಸಿದ್ದರು. ಬಾಲಯ್ಯ ಅವರ ಕೆರಿಯರ್‌ನಲ್ಲಿ ದೊಡ್ಡ ಡಿಸಾಸ್ಟರ್ ಸಿನಿಮಾ ಇದಾಗಿತ್ತು.

ಈ ಚಿತ್ರದ ಚಿತ್ರೀಕರಣದ ವೇಳೆ ಕಾಸ್ಟಿಂಗ್ ಕೌಚ್ ಕಿರುಕುಳ ಎದುರಿಸಿದ್ದೇನೆ ಎಂದು ವಿಚಿತ್ರಾ ಹೇಳಿದ್ದಾರೆ. ಬಿಗ್ ಬಾಸ್ ತಮಿಳು ಸೀಸನ್ 7 ರಲ್ಲಿ ವಿಚಿತ್ರ ಅತಿಥಿಯಾಗಿ ಬಂದಿದ್ದರು. ಇನ್ನು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಸಿನಿಮಾದಲ್ಲಿ ನಟಿಸುವಾಗ ಆದ ಅನುಭವಗಳನ್ನು ಹಂಚಿಕೊಂಡರು.

ಕಾಡಿನ ಹಿನ್ನೆಲೆಯಿಂದಾಗಿ ಚಿತ್ರದ ಬಹುತೇಕ ಚಿತ್ರೀಕರಣ ಕೇರಳದ ಮಲಂಪುಳ ಕಾಡುಗಳಲ್ಲಿ ನಡೆದಿತ್ತು. ಚಿತ್ರದ ಶೂಟಿಂಗ್ ಸಮಯದಲ್ಲಿ ಕಹಿ ಅನುಭವಗಳನ್ನು ಎದುರಿಸಿದ್ದೇನೆ. ಭಲೇವಾಡಿವಿ ಬಸು ಚಿತ್ರದ ಬಳಿಕ ನಾನು ಚಲನಚಿತ್ರಗಳಲ್ಲಿ ನಟಿಸುವ ಆಸಕ್ತಿ ಕಳೆದುಕೊಂಡೆ. ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸದಿರಲು ಕಾಸ್ಟಿಂಗ್ ಕೌಚ್ ಪ್ರಮುಖ ಕಾರಣ ಎಂದು ವಿಚಿತ್ರಾ ಹೇಳಿದ್ದಾರೆ.

ಮಲಂಪುಳದ ಕಾಡಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ, ಚಿತ್ರ ಘಟಕವು 3-ಸ್ಟಾರ್ ಹೋಟೆಲ್‌ನಲ್ಲಿ ವಸತಿಯನ್ನು ಒದಗಿಸಿತು. ಅವರು ಮೊದಲ ಬಾರಿಗೆ ತನ್ನ ಪತಿಯನ್ನು ಭೇಟಿಯಾಗಿದ್ದಾಗಿ ಹೇಳಿದರು. ವಿಚಿತ್ರಾ ಅವರು ತಮ್ಮ ಪತಿ ಆ ಹೊಟೇಲಿನ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಚಿತ್ರ ಯೂನಿಟ್ ಆದ ಕಾರಣ ಹೋಟೆಲ್ ಮ್ಯಾನೇಜ್ ಮೆಂಟ್ ನೈಟ್ ಪಾರ್ಟಿ ಏರ್ಪಡಿಸಿತ್ತು ಎಂದು ಹೇಳಿದರು.

ಪಾರ್ಟಿ ಮುಗಿಸಿ ಸಿನಿಮಾ ಹೀರೋ ಕೊಠಡಿಗೆ ಬರುವಂತೆ ಒತ್ತಡ ಹೇರಿದ್ದಾಗಿ ವಿಚಿತ್ರಾ ಹೇಳಿಕೊಂಡಿದ್ದಾರೆ. ಇಷ್ಟು ದೊಡ್ಡ ಸ್ಟಾರ್ ಹೀರೋನ ಬಾಯಿಂದ ಇಂತಹ ಮಾತು ಕೇಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ವಿವರಿಸಿ, ಹೋಟೆಲ್ ರೂಮಿಗೆ ಹೋಗಲು ನಿರಾಕರಿಸಿದರು.

ಮರುದಿನದಿಂದ ಅವರು ಅನೇಕ ಕಿರುಕುಳ ಮತ್ತು ಸಮಸ್ಯೆಗಳನ್ನು ಎದುರಿಸಿದರು ಎಂದು ವಿಚಿತ್ರಾ ಹೇಳಿದರು. ಅದಾದ ನಂತರ ಸಿನಿಮಾದಲ್ಲಿ ಆಸಕ್ತಿ ಕಳೆದುಕೊಂಡು ಮದುವೆಯ ನಂತರ ಇಂಡಸ್ಟ್ರಿಯನ್ನು ಸಂಪೂರ್ಣವಾಗಿ ತೊರೆದೆ ಎಂದಿದ್ದಾರೆ. ಆ ನಾಯಕ ನಂದಮೂರಿ ಬಾಲಕೃಷ್ಣ ಎಂದು ಇಂಡಿಯಾ ಟುಡೇ ಲೇಖನ ಪ್ರಕಟಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

SCROLL FOR NEXT