ವಿನೋದ್ ಪ್ರಭಾಕರ್ 
ಸಿನಿಮಾ ಸುದ್ದಿ

'ಫೈಟರ್‌' ಅನ್ಯಾಯದ ವಿರುದ್ಧದ ಹೋರಾಟ ಮಾಡುವುದನ್ನು ಸೂಚಿಸುತ್ತದೆ: ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರ ಹಾದಿಯಲ್ಲಿ ಹೆಮ್ಮೆಯಿಂದ ಸಾಗುತ್ತಿದ್ದಾರೆ. ನಟನೆಯನ್ನು ಆರಂಭಿಸಿದ ಅವರು, ಆ್ಯಕ್ಷನ್ ಹೀರೊ ಎಂಬ ಬಿರುದನ್ನು ಪಡೆದಿದ್ದಾರೆ. ಆದಾಗ್ಯೂ, ಆಕ್ಷನ್ ಹೀರೊ ಆಗಿರುವುದು ಕೇವಲ ಕತ್ತಿಗಳು ಮತ್ತು ಬಂದೂಕುಗಳನ್ನು ಹಿಡಿಯುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ ಎಂದು ಅವರು ಒತ್ತಿಹೇಳುತ್ತಾರೆ. 

ವಿನೋದ್ ಪ್ರಭಾಕರ್ ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರ ಹಾದಿಯಲ್ಲಿ ಹೆಮ್ಮೆಯಿಂದ ಸಾಗುತ್ತಿದ್ದಾರೆ. ನಟನೆಯನ್ನು ಆರಂಭಿಸಿದ ಅವರು, ಆ್ಯಕ್ಷನ್ ಹೀರೊ ಎಂಬ ಬಿರುದನ್ನು ಪಡೆದಿದ್ದಾರೆ. ಆದಾಗ್ಯೂ, ಆಕ್ಷನ್ ಹೀರೊ ಆಗಿರುವುದು ಕೇವಲ ಕತ್ತಿಗಳು ಮತ್ತು ಬಂದೂಕುಗಳನ್ನು ಹಿಡಿಯುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ ಎಂದು ಅವರು ಒತ್ತಿಹೇಳುತ್ತಾರೆ. ವಿನೋದ್ ಅವರು ತಮ್ಮ ಚಿತ್ರಗಳಲ್ಲಿ ಸಂಪೂರ್ಣ ಮನರಂಜನೆಯ ಜೊತೆಗೆ ಅರ್ಥಪೂರ್ಣ ಸಂದೇಶವನ್ನು ನೀಡುವ ಗುರಿಯನ್ನು ಹೊಂದಿದ್ದಾರೆ.

ವಿನೋದ್ ಪ್ರಭಾಕರ್

ದರ್ಶನ್ ಅಭಿನಯದ ರಾಬರ್ಟ್‌ನಲ್ಲಿನ ಅವರ ಪಾತ್ರಕ್ಕಾಗಿ ಪ್ರಶಂಸೆ ಗಳಿಸಿದ ಅವರು ಈಗ ತಮ್ಮ ಮುಂಬರುವ 'ಫೈಟರ್‌' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸಿದ್ದು, ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿದ್ದಾರೆ. ಚಿತ್ರ ಇದೇ ವಾರ ಬಿಡುಗಡೆಯಾಗಲಿದೆ. 'ಈ ಸಂದರ್ಭದಲ್ಲಿ, ಫೈಟರ್ ಕುಟುಂಬವೊಂದಕ್ಕೆ ಆಗಿರುವ ಅನ್ಯಾಯದ ವಿರುದ್ಧದ ಯುದ್ಧವನ್ನು ಸೂಚಿಸುತ್ತದೆ'.

'ರೋಚಕ ಅಂಶಗಳಿಂದ ಕೂಡಿದ ಈ ಚಿತ್ರವು ತಾಯಿ-ಮಗ ಮತ್ತು ತಂದೆ-ಮಗನ ಬಾಂಧವ್ಯದ ಬಂಧಗಳನ್ನು ಅನ್ವೇಷಿಸುತ್ತದೆ. ಇದು ಪ್ರೇಕ್ಷಕರ ಹೃದಯವನ್ನು ಮುಟ್ಟುತ್ತದೆ. ಈ ಚಿತ್ರವು ರೈತರು ಎದುರಿಸುತ್ತಿರುವ ಸವಾಲುಗಳ ಮೇಲೆಯೂ ಬೆಳಕು ಚೆಲ್ಲುತ್ತದೆ. ಮನರಂಜನೆಯೊಂದಿಗೆ ಗಂಭೀರ ವಿಚಾರಗಳನ್ನು ಹೇಳುತ್ತದೆ' ಎಂದು ವಿನೋದ್ ಹೇಳಿದರು. 

ಆಕ್ಷನ್ ಸೀಕ್ವೆನ್ಸ್‌ಗಳು, ವಿಶೇಷವಾಗಿ ಚಿತ್ರದುರ್ಗ ಕೋಟೆಯಲ್ಲಿ ಚಿತ್ರೀಕರಿಸಿರುವಂತವುಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಫೈಟರ್ ಚಿತ್ರದಲ್ಲಿನ ತಮ್ಮ ವಿಭಿನ್ನ ಲುಕ್ ಕೂಡ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರೆ ವಿನೋದ್. 

ಚಿತ್ರದಲ್ಲಿ ವಿನೋದ್ ಜೊತೆಗೆ ಪಾವನಾ ಮತ್ತು ಲೇಖಾ ಚಂದ್ರ ನಟಿಸಿದ್ದಾರೆ. ಇದರೊಂದಿಗೆ ನಿರೋಷಾ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ವಿನೋದ್, 'ನಾನು ನಿರೋಷಾ ಅವರ ಬಗ್ಗೆ ಯೋಚಿಸಿದಾಗಲೆಲ್ಲಾ ಅವರ 'ಲಾಕಪ್ ಡೆತ್' ಚಿತ್ರ ನೆನಪಾಗುತ್ತದೆ. ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಅವರು ಮರಳಿರುವುದಕ್ಕೆ ನಾನು ಸಂತೋಷಪಡುತ್ತೇನೆ' ಎಂದರು. 

ವಿನೋದ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಿಂದಲೂ ತಮ್ಮೊಂದಿಗೆ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಪಡೆದ ಅಪಾರ ಬೆಂಬಲ ಮತ್ತು ಪ್ರೇರಣೆಯನ್ನು ಒಪ್ಪಿಕೊಂಡಿದ್ದಾರೆ. 'ನನ್ನ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯವನ್ನು ಹೆಚ್ಚಿಸುವಲ್ಲಿ ದರ್ಶನ್ ಅವರ ಬೆಂಬಲವು ನಿರ್ಣಾಯಕ ಪಾತ್ರವನ್ನು ವಹಿಸಿದೆ' ಎಂದು ಅವರು ಸಂಕ್ಷಿಪ್ತವಾಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT