ಚಿತ್ರದ ನಾಯಕ-ನಾಯಕಿ, ಒಳ ಚಿತ್ರದಲ್ಲಿ ಸಂಗೀತ ನಿರ್ದೇಶಕ ವೀರ ಸಮರ್ಥ್ 
ಸಿನಿಮಾ ಸುದ್ದಿ

ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಒಂದು ಸಂಗೀತ ರೊಮ್ಯಾಂಟಿಕ್ ಡ್ರಾಮಾ!

ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಸಂಗೀತ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು ಸಂಗೀತ ಸಂಯೋಜಕ ವೀರ ಸಮರ್ಥ ಅವರ ಗೀತೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಚಿತ್ರಕ್ಕಾಗಿ 8 ಹಾಡುಗಳು ಮತ್ತು ಮೂರು ಬಿಟ್ಸ್ ಗಳಿದ್ದು, ಕೆಲವು ಪೂರ್ಣ-ಉದ್ದದ ಟ್ಯೂನ್‌ಗಳಾಗಿ ಪ್ರಸ್ತುತಪಡಿಸಲಾಗಿದೆ.

ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಸಂಗೀತ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು ಸಂಗೀತ ಸಂಯೋಜಕ ವೀರ ಸಮರ್ಥ ಅವರ ಗೀತೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಚಿತ್ರಕ್ಕಾಗಿ 8 ಹಾಡುಗಳು ಮತ್ತು ಮೂರು ಬಿಟ್ಸ್ ಗಳಿದ್ದು, ಕೆಲವು ಪೂರ್ಣ-ಉದ್ದದ ಟ್ಯೂನ್‌ಗಳಾಗಿ ಪ್ರಸ್ತುತಪಡಿಸಲಾಗಿದೆ. ಇದು ಕೇವಲ ಸಂಖ್ಯೆ ಮಾತ್ರವಲ್ಲ; ಇದು ಗಜಲ್, ಸೂಫಿ, ಡ್ಯುಯೆಟ್, ಮಧುರ, ಭಕ್ತಿ ಮತ್ತು ರಾಪ್ ಆವೃತ್ತಿಯನ್ನು ಒಳಗೊಂಡಿರುವ ಸಂಗೀತ ಪಯಣವಾಗಿದೆ. 

ಸಂಯೋಜಕರ ಪ್ರಕಾರ, ಈ ವೈವಿಧ್ಯಮಯ ಸಂಗೀತ ಸ್ವರಗಳು ಒಂದು ಸರಳ ಪ್ರೇಮ ಕಥೆಯ ಭಾವಗಳೊಂದಿಗೆ ಅನುರಣಿಸುತ್ತವೆ, ಇಲ್ಲಿ ಸಂಗೀತ ಚಲನಚಿತ್ರದ ಮುಖ್ಯ ಭಾಗವಾಗಿರುತ್ತದೆ. ಇಲ್ಲಿ ನಾಯಕ ವಿನಯ್ ರಾಜ್‌ಕುಮಾರ್, ಮಹತ್ವಾಕಾಂಕ್ಷಿ ಸಂಗೀತ ಸಂಯೋಜಕ ಅತಿಶಯ್‌ನ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮಲ್ಲಿಕಾ ಸಿಂಗ್, ಮಧುರಾ ಎಂಬ ಹೆಸರಿನ ಗಾಯಕಿ ಪಾತ್ರ. ನಾಯಕನ ಪ್ರಯಾಣದಲ್ಲಿ ಸಂಗೀತವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಸಂಯೋಜಕರು ವಿವರಿಸುತ್ತಾರೆ. 

40ಕ್ಕೂ ಹೆಚ್ಚು ಚಿತ್ರಗಳಿಗೆ ಗೀತೆ ಸಂಯೋಜನೆ ಮಾಡಿರುವ ವೀರ ಸಮರ್ಥ ಅವರ ಸಂಗೀತದ ಹಿನ್ನೆಲೆ ಮತ್ತು ಅನುಭವವು ಚಿತ್ರದ ಸಂಗೀತ ಪ್ರೇಮ ಪಯಣಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಚಿತ್ರವೊಂದರ ದೃಶ್ಯವನ್ನು ರಾಜಸ್ಥಾನದಲ್ಲಿ 10 ನಿಮಿಷಗಳ ಕಾಲ ಸೆರೆಹಿಡಿಯಲಾಗಿದೆ, ಮುಂಬೈನಲ್ಲಿ ನಡೆದ ಎಪಿಸೋಡ್‌ಗೆ ಸೆಟ್ಟಿಂಗ್‌ಗೆ ಪೂರಕವಾದ ಹಾಡಿನ ಅಗತ್ಯವಿತ್ತು ಎಂದು ವೀರ್ ಸಮರ್ಥ್ ವಿವರಿಸುತ್ತಾರೆ. 

ಸ್ವಾತಿಷ್ಟ ಕೃಷ್ಣನ್ ನಾಯಕಿಯಾಗಿ ನಟಿಸಿದ್ದು, ರಮೇಶ್ ನಿರ್ಮಾಣದ ಈ ಚಿತ್ರದಲ್ಲಿ ಸಾಧು ಕೋಕಿಲಾ ಮತ್ತು ಅರುಣಾ ಬಾಲರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಂದು ಸರಳ ಪ್ರೇಮ ಕಥೆಯಲ್ಲಿ ಸುನಿ ಹೊಸ ಛಾಯಾಗ್ರಾಹಕ, ಸಂಕಲನಕಾರ ಮತ್ತು ಗಾಯಕರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದಾರೆ. ವಿಕ್ರಾಂತ್ ರೋಣಾ ಮುಂತಾದ ಚಿತ್ರಗಳಲ್ಲಿ ಡಿಒಪಿ ಮಾಡಿದ್ದ ವಿಲಿಯಂ ಡೇವಿಡ್‌ಗೆ ಸಹಾಯ ಮಾಡಿದ ಕಾರ್ತಿಕ್ ಅವರು ಛಾಯಾಗ್ರಾಹಕರಾಗಿ ಇದು ಅವರಿಗೆ ಚೊಚ್ಚಲ ಚಿತ್ರ. ಈ ಹಿಂದೆ ಪ್ರೊಡಕ್ಷನ್ ಹೌಸ್‌ಗೆ ಸಂಪಾದಕರಾಗಿದ್ದ ಆದಿತ್ಯ ಕೃಷ್ಣನ್ ಈಗ ಈ ಚಿತ್ರಕ್ಕೆ ಸಂಕಲನಕಾರರಾಗಿ ಸೇರಿಕೊಂಡಿದ್ದಾರೆ. ಇಂಡಿಯನ್ ಐಡಲ್ ಸ್ಪರ್ಧಿ ಶಿವಾನಿ ಸ್ವಾಮಿ ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT