ಧನ್ವೀರ್ ಮತ್ತು ಸಂಜನಾ ಆನಂದ್ 
ಸಿನಿಮಾ ಸುದ್ದಿ

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!

ಬಜಾರ್‌ , ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ಬಜಾರ್‌, ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ರಘು ಕುಮಾರ್ ಈ ಹಿಂದೆ ಸುದೀಪ್ ಅವರ ಕೋಟಿಗೊಬ್ಬ 3 ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಸೀತಾ ಸರ್ಕಲ್ ಮತ್ತು ಮನೆದೇವರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅವರು ದಿ ಬೆಲ್ ಎಂಬ ಕಿರುಚಿತ್ರವನ್ನು ಸಹ ನಿರ್ದೇಶಿಸಿರುವ ಅವರು ಸಿನಿಮಾ ನಿರ್ದೇಶನಕ್ಕಳಿದಿದ್ದಾರೆ. ರಘು ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ, ಆಧುನಿಕ ಕಾಲದಲ್ಲಿ ಪುರಾಣ ಮತ್ತು ಅಪರಾಧವನ್ನು ಹೆಣೆದುಕೊಂಡಿರುವ ಪರಿಕಲ್ಪನೆಯಾಗಿದೆ.

ಮುಂದಿನ 40 ವರ್ಷಗಳಲ್ಲಿ ನಡೆಯುವ ಭವಿಷ್ಯದ ಅಂಶಗಳನ್ನೊಳಗೊಂಡ ಕಾಲ್ಪನಿಕ ಕಥೆಯಾಗಿದೆ, ಪ್ರಭುಗಳನ್ನು ಒಳಗೊಂಡ ಅಪರಾಧದ ಪರಿಣಾಮಗಳನ್ನು ಅನ್ವೇಷಿಸುತ್ತದೆ. ಪುರಾತನ ಕಥೆಗಳು ಮತ್ತು ಸಮಕಾಲೀನ ಅಂಶಗಳ ಮಿಶ್ರಣವನ್ನು ಹೊಂದಿರುವ ಈ ಚಿತ್ರವು ರೊಮ್ಯಾಂಟಿಕ್ ಟ್ರ್ಯಾಕ್ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಆಗಿದೆ ಎಂದು  ನಿರ್ದೇಶಕರು ಹೇಳಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ಶುಕ್ರವಾರ ಮುಹೂರ್ತದ  ನಡೆದಿದ್ದು, ಫೆ.8ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಿಳಿಸಿದರು, ರವಿಶಂಕರ್ ಪೌರಾಣಿಕ ಪಾತ್ರದಲ್ಲಿ ನಟಿಸಲಿದ್ದಾರೆ. ರಂಗಾಯಣ ರಘು ಮತ್ತು ಸಾಧು ಕೋಕಿಲ, ಶೃತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಯಗ್ರೀವಕ್ಕೆ ಸಂಗೀತ ನಿರ್ದೇಶಕರಾಗಿ ಜೂಡಾ ಸ್ಯಾಂಡಿ ಮತ್ತು ಕಾರ್ತಿಕ್ ಎಸ್.  ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಗೆಲುವು; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

SCROLL FOR NEXT