ಧನ್ವೀರ್ ಮತ್ತು ಸಂಜನಾ ಆನಂದ್ 
ಸಿನಿಮಾ ಸುದ್ದಿ

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!

ಬಜಾರ್‌ , ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ಬಜಾರ್‌, ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ರಘು ಕುಮಾರ್ ಈ ಹಿಂದೆ ಸುದೀಪ್ ಅವರ ಕೋಟಿಗೊಬ್ಬ 3 ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಸೀತಾ ಸರ್ಕಲ್ ಮತ್ತು ಮನೆದೇವರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅವರು ದಿ ಬೆಲ್ ಎಂಬ ಕಿರುಚಿತ್ರವನ್ನು ಸಹ ನಿರ್ದೇಶಿಸಿರುವ ಅವರು ಸಿನಿಮಾ ನಿರ್ದೇಶನಕ್ಕಳಿದಿದ್ದಾರೆ. ರಘು ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ, ಆಧುನಿಕ ಕಾಲದಲ್ಲಿ ಪುರಾಣ ಮತ್ತು ಅಪರಾಧವನ್ನು ಹೆಣೆದುಕೊಂಡಿರುವ ಪರಿಕಲ್ಪನೆಯಾಗಿದೆ.

ಮುಂದಿನ 40 ವರ್ಷಗಳಲ್ಲಿ ನಡೆಯುವ ಭವಿಷ್ಯದ ಅಂಶಗಳನ್ನೊಳಗೊಂಡ ಕಾಲ್ಪನಿಕ ಕಥೆಯಾಗಿದೆ, ಪ್ರಭುಗಳನ್ನು ಒಳಗೊಂಡ ಅಪರಾಧದ ಪರಿಣಾಮಗಳನ್ನು ಅನ್ವೇಷಿಸುತ್ತದೆ. ಪುರಾತನ ಕಥೆಗಳು ಮತ್ತು ಸಮಕಾಲೀನ ಅಂಶಗಳ ಮಿಶ್ರಣವನ್ನು ಹೊಂದಿರುವ ಈ ಚಿತ್ರವು ರೊಮ್ಯಾಂಟಿಕ್ ಟ್ರ್ಯಾಕ್ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಆಗಿದೆ ಎಂದು  ನಿರ್ದೇಶಕರು ಹೇಳಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ಶುಕ್ರವಾರ ಮುಹೂರ್ತದ  ನಡೆದಿದ್ದು, ಫೆ.8ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಿಳಿಸಿದರು, ರವಿಶಂಕರ್ ಪೌರಾಣಿಕ ಪಾತ್ರದಲ್ಲಿ ನಟಿಸಲಿದ್ದಾರೆ. ರಂಗಾಯಣ ರಘು ಮತ್ತು ಸಾಧು ಕೋಕಿಲ, ಶೃತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಯಗ್ರೀವಕ್ಕೆ ಸಂಗೀತ ನಿರ್ದೇಶಕರಾಗಿ ಜೂಡಾ ಸ್ಯಾಂಡಿ ಮತ್ತು ಕಾರ್ತಿಕ್ ಎಸ್.  ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT