ಮಿ. ನಟ್ವರ್‌ಲಾಲ್ ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ಮಿ. ನಟ್ವರ್‌ಲಾಲ್ ಈ ವಾರ ತೆರೆಗೆ

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಅವರ ಮುಂದಿನ ಚಿತ್ರ ಮಿ. ನಟ್ವರ್‌ಲಾಲ್ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ವಿ ಲವ ಚಿತ್ರ ನಿರ್ದೇಶಿಸಿದ್ದು, ಅಮಿತಾಭ್ ಬಚ್ಚನ್ ನಟಿಸಿದ್ದ 1979ರ ಹಿಂದಿಯ ಹಿಟ್ ಚಲನಚಿತ್ರದಿಂದ ಚಿತ್ರದ ಶೀರ್ಷಿಕೆಯನ್ನು ಎರವಲು ಪಡೆಯಲಾಗಿದೆ.

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಅವರ ಮುಂದಿನ ಚಿತ್ರ ಮಿ. ನಟ್ವರ್‌ಲಾಲ್ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ವಿ ಲವ ಚಿತ್ರ ನಿರ್ದೇಶಿಸಿದ್ದು, ಅಮಿತಾಭ್ ಬಚ್ಚನ್ ನಟಿಸಿದ್ದ 1979ರ ಹಿಂದಿಯ ಹಿಟ್ ಚಲನಚಿತ್ರದಿಂದ ಚಿತ್ರದ ಶೀರ್ಷಿಕೆಯನ್ನು ಎರವಲು ಪಡೆಯಲಾಗಿದೆ. ಇದೊಂದು ವಿಶಿಷ್ಟವಾದ ಕ್ರೈಮ್-ಆಕ್ಷನ್ ಥ್ರಿಲ್ಲರ್ ಅನುಭವ ನೀಡಲಿದೆ.

ತನುಷ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ತನುಷ್, ಶೀರ್ಷಿಕೆಯು ಹಿಂದಿ ಚಲನಚಿತ್ರಕ್ಕೆ ಗೌರವವನ್ನು ನೀಡುತ್ತದೆ ಎಂದು ಅವರು ವಿವರಿಸುತ್ತಾರೆ.

'ಚಿತ್ರವು ನಟ್ವರ್‌ಲಾಲ್ (1912-2009) ಎಂದೂ ಕರೆಯಲ್ಪಡುವ ಕುಖ್ಯಾತ ಮಿಥಿಲೇಶ್ ಕುಮಾರ್ ಶ್ರೀವಾಸ್ತವ್ ಅವರ ಸುತ್ತ ಸುತ್ತುತ್ತದೆ. ತಾಜ್ ಮಹಲ್, ಕೆಂಪು ಕೋಟೆ, ರಾಷ್ಟ್ರಪತಿ ಭವನ ಮತ್ತು ಭಾರತದ ಸಂಸತ್ ಭವನದಂತಹ ಐತಿಹಾಸಿಕ ಕಟ್ಟಡಗಳ ಮಾರಾಟವನ್ನು ಒಳಗೊಂಡಂತೆ, ನಟ್ವರ್‌ಲಾಲ್ ಇತರೆ ಹಗರಣಗಳಿಗೆ ಹೆಸರಾದ ಭಾರತೀಯ ವಂಚಕ. ನಾವು ಆತನ ಜೀವನದ ಅಂಶಗಳನ್ನು ನಿರೂಪಣೆಯಲ್ಲಿ ಹೆಣೆದಿದ್ದೇವೆ. ಕ್ರೈಮ್ ಮತ್ತು ಆ್ಯಕ್ಷನ್ ಅಂಶಗಳನ್ನು ಸೇರಿಸಿದ್ದೇವೆ' ಎಂದು ನಟ-ನಿರ್ಮಾಪಕ ಧನುಷ್ ಹೇಳುತ್ತಾರೆ.

ಮಿ.ನಟ್ವರ್‌ಲಾಲ್ ಚಿತ್ರದಲ್ಲಿ ಸೋನಲ್ ಮೊಂಟೇರೊ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಯಶ್ ಸೆಟ್ಟಿ, ಸುಧಿ, ಕೆಎಸ್ ಶ್ರೀಧರ್, ತ್ರಿವೇಣಿ ರಾವ್ ಮತ್ತು ಪದ್ಮಾ ವಾಸಂತಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಲವ ಅವರ ಚಿತ್ರಕಥೆ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಧರ್ಮ ವಿಶ್ ಅವರ ಸಂಗೀತ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT