ಸಿನಿಮಾ ಸುದ್ದಿ

ಟಗರುಪಲ್ಯ ಬಳಿಕ ಮತ್ತೆ ಒಂದಾದ ನಾಗಭೂಷಣ್-ಧನಂಜಯ್; 'ವಿದ್ಯಾಪತಿ'ಯಾಗಿ ತೆರೆಗೆ ಬರಲು ಸಜ್ಜು

Ramyashree GN

ಟಗರು ಪಲ್ಯ ಮೂಲಕ ಹಿಟ್ ಚಿತ್ರ ನೀಡಿದ ನಟ ನಾಗಭೂಷಣ್ ಮತ್ತು ನಿರ್ಮಾಪಕ ಧನಂಜಯ್ ಅವರು 'ವಿದ್ಯಾಪತಿ' ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರವು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಯೋಜನೆಯಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಬಹಿರಂಗಪಡಿಸಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಕಥೆ, ನಿರ್ದೇಶನ ಮತ್ತು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಕ್ಕಟ್ ಚಿತ್ರದಲ್ಲೂ ನಟ ನಾಗಭೂಷಣ್ ನಟಿಸಿದ್ದರು. ಚಿತ್ರದ ಫಸ್ಟ್‌ಲುಕ್‌ನಲ್ಲಿ ನಟ ನಾಗಭೂಷಣ್ ಕರಾಟೆ ಕಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ ವಾರದಲ್ಲಿ ವಿದ್ಯಾಪತಿ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಚಿತ್ರಕ್ಕೆ ಮುರಳಿ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಸಂಯೋಜನೆ ಮತ್ತು ಅರ್ಜುನ್ ಮಾಸ್ಟರ್ ಅವರ ಆ್ಯಕ್ಷನ್ ಇರಲಿದೆ. 

SCROLL FOR NEXT