ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

'ಶ್ರೀ ರಾಮ್ ಜೈ ಹನುಮಾನ್' ಬಹು ಭಾಷೆಗಳಲ್ಲಿ ತಯಾರು!

ಗಣೇಶ್ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ, ಜಗ್ಗೇಶ್ ಮತ್ತು ಧನಂಜಯ್ ಜೊತೆ ತೋತಾಪುರಿ 1 ಮತ್ತು 2 ಚಿತ್ರಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸುರೇಶ್ ಕೆ.ಎ, ಬಹುಭಾಷಾ  ಪ್ರಾಜೆಕ್ಟ್ ಗೆ ತಮ್ಮ ವ್ಯಾಪ್ತಿ ವಿಸ್ತರಿಸಲು ಸಜ್ಜಾಗುತ್ತಿದ್ದಾರೆ.

ಗಣೇಶ್ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ, ಜಗ್ಗೇಶ್ ಮತ್ತು ಧನಂಜಯ್ ಜೊತೆ ತೋತಾಪುರಿ 1 ಮತ್ತು 2 ಚಿತ್ರಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸುರೇಶ್ ಕೆ.ಎ, ಬಹುಭಾಷಾ  ಪ್ರಾಜೆಕ್ಟ್ ಗೆ ತಮ್ಮ ವ್ಯಾಪ್ತಿ ವಿಸ್ತರಿಸಲು ಸಜ್ಜಾಗುತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನದಂದು, ನಿರ್ಮಾಪಕರು, ತಮ್ಮ  ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ಶ್ರೀ ರಾಮ್, ಜೈ ಹನುಮಾನ್ ಎಂಬ ಶೀರ್ಷಿಕೆಯ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ.

ಅವದೂತ್ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗಲಿದೆ. "ರಾಮಾಯಣದ ಅನ್ಟೋಲ್ಡ್ ಎಪಿಕ್" ಎಂಬ ಅಡಿಬರಹದೊಂದಿಗೆ, ರಾಮಾಯಣದ ಅಂಶಗಳನ್ನು ಪರಿಶೀಲಿಸುವ ಗುರಿಯನ್ನು ಸೂಚಿಸುತ್ತದೆ, ಇದು ಮಹಾಕಾವ್ಯದ ಕಥೆಯ ಮೇಲೆ ಅನನ್ಯ ದೃಷ್ಟಿಕೋನವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಪರ್ವತಗಳು, ಬೆಂಕಿ, ನೀರು ಮತ್ತು ರಾಮ್ ಮತ್ತು ಹನುಮಂತನ ದೈವಿಕ ಜೋಡಿಯಂತಹ ಅಂಶಗಳನ್ನು ಒಳಗೊಂಡಿರುವ ಪೋಸ್ಟರ್, ಈ ಟೈಮ್ಲೆಸ್ ನಿರೂಪಣೆಗೆ ಜೀವ ತುಂಬುವ ಆಕ್ಷನ್-ಪ್ಯಾಕ್ಡ್ ಚಲನಚಿತ್ರವಾಗಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಡಕ್ಷನ್ ಹೌಸ್ ವಿವಿಧ ಭಾಷೆಗಳ ನಟರು ಮತ್ತು ಕಲಾವಿದರನ್ನು ಸೇರಿಸಲು ಯೋಜಿಸಿದೆ. ಪ್ರಸ್ತುತ ಸ್ಟೋರಿ ಬೋರ್ಡಿಂಗ್ ಮತ್ತು ವಿಎಫ್‌ಎಕ್ಸ್ ಹಂತಗಳಲ್ಲದೆ. ಶ್ರೀ ರಾಮ್, ಜೈ ಹನುಮಾನ್, ಮುಂದಿನ ದಿನಗಳಲ್ಲಿ ಕಥಾಹಂದರದ ಹೆಚ್ಚಿನ ವಿವರಗಳನ್ನು ಬಿಚ್ಚಿಡಲು ತಯಾರಕರು ಪ್ಲಾನ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT