ಸಹಾರ ಚಿತ್ರದ ಪೋಸ್ಟರ್ - ನಟ ಗಣೇಶ್ 
ಸಿನಿಮಾ ಸುದ್ದಿ

ಕ್ರಿಕೆಟ್ ಆಧರಿತ 'ಸಹಾರ' ಬಿಡುಗಡೆ ನಾಳೆ; ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಶುಭಕೋರಿದ ನಟ ಗಣೇಶ್

ಭಾವನಾತ್ಮಕ ಮತ್ತು ಅಗತ್ಯ ಕಮರ್ಷಿಯಲ್ ಅಂಶಗಳೊಂದಿಗೆ ಕ್ರೀಡೆ ಆಧರಿತ ಸಿನಿಮಾವನ್ನು ನಿರ್ಮಿಸುವುದು ಸವಾಲಿನ ಕೆಲಸ ಎಂದ ನಟ ಗಣೇಶ್, 'ಈ ಪ್ರಕಾರದ ಚಿತ್ರವನ್ನು ನಿರ್ಮಿಸುವ ಬಗ್ಗೆ ಚಿತ್ರರಂಗದೊಳಗೆ ಬೇಡಿಕೆಯಿದೆ ಎಂದು ಹೇಳಿದರು.

ಸಾರಿಕಾ ರಾವ್ ಮತ್ತು ಅಂಕುಶ್ ರಜತ್ ನಟಿಸಿರುವ ಮಂಜೇಶ್ ಭಾಗವತ್ ಅವರ ಮುಂಬರುವ ಚಿತ್ರ 'ಸಹಾರಾ' ಕ್ರಿಕೆಟ್ ಆಧಾರಿತ ಚಿತ್ರವಾಗಿದ್ದು, ಜೂನ್ 7 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಚಿತ್ರದ ಮೊದಲ ಸಿಂಗಲ್ 'ಒಂದೂ ಶಕ್ತಿಯು' ಅನ್ನು ಬಿಡುಗಡೆ ಮಾಡಿದ್ದಾರೆ.

ಭಾವನಾತ್ಮಕ ಮತ್ತು ಅಗತ್ಯ ಕಮರ್ಷಿಯಲ್ ಅಂಶಗಳೊಂದಿಗೆ ಕ್ರೀಡೆ ಆಧರಿತ ಸಿನಿಮಾವನ್ನು ನಿರ್ಮಿಸುವುದು ಸವಾಲಿನ ಕೆಲಸ ಎಂದ ಗಣೇಶ್, 'ಈ ಪ್ರಕಾರದ ಚಿತ್ರವನ್ನು ನಿರ್ಮಿಸುವ ಬಗ್ಗೆ ಚಿತ್ರರಂಗದೊಳಗೆ ಬೇಡಿಕೆಯಿದೆ ಎಂದು ಸ್ವತಃ ಕ್ರಿಕೆಟ್ ಉತ್ಸಾಹಿಯಾಗಿ, ಹಲವಾರು ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ನಟ ಹೇಳಿದರು.

'ಹಾಡಿನ ಬಿಡುಗಡೆಗೆ ಸಾಕ್ಷಿಯಾದ ನಂತರ, ನಿರ್ದೇಶಕ ಮಂಜೇಶ್ ಭಾಗವತ್ ಅವರು ಅತ್ಯುತ್ಸಾಹದಿಂದಲೇ ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂಬುದು ನನಗೆ ಸ್ಪಷ್ಟವಾಯಿತು. ಅವರ ಕ್ರೀಡೆಯ ಮೇಲಿನ ಪ್ರೀತಿಯನ್ನು ಇದು ತೋರಿಸುತ್ತದೆ' ಎಂದ ಗಣೇಶ್, ಸಹಾರಾ ಪಾತ್ರದಲ್ಲಿ ಸಾರಿಕಾ ರಾವ್ ಅವರ ಅಭಿನಯವನ್ನು ಶ್ಲಾಘಿಸಿದರು. ವೃತ್ತಿಪರ ಕ್ರಿಕೆಟಿಗಳಾಗುವ ತನ್ನ ಕನಸನ್ನು ಮುಂದುವರಿಸಲು ಎದುರಾಗುವ ಹಲವಾರು ಅಡೆತಡೆಗಳನ್ನು ಜಯಿಸುವ ಹಳ್ಳಿ ಹುಡುಗಿ ಜಯಶ್ರೀ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ಚಲನಚಿತ್ರವು ವಿವರಿಸುತ್ತದೆ.

ಸಾರಿಕಾ ರಾವ್ ಅವರು ಚಿತ್ರದಲ್ಲಿ ಲೆಗ್ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲು ವೃತ್ತಿಪರ ಕ್ರಿಕೆಟ್ ಆಟಗಾರರ ಮಾರ್ಗದರ್ಶನದಲ್ಲಿ ತಿಂಗಳುಗಟ್ಟಲೆ ಕಠಿಣ ತರಬೇತಿ ಪಡೆದಿದ್ದಾರೆ. ಚಿತ್ರದಲ್ಲಿ ನಟಿ ಸುಧಾರಾಣಿ ಅವರು ಕ್ರಿಕೆಟ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಮಂಜುನಾಥ್ ಹೆಗ್ಡೆ, ಕುರಿ ಸುನೀಲ್ ಮತ್ತು ಮಂಜುಳಾ ರೆಡ್ಡಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಆಂಟೋನಿ ರುತ್ ವಿನ್ಸೆಂಟ್ ಛಾಯಾಗ್ರಹಣ ಮಾಡಿದ್ದಾರೆ. ಸಹಾರಾ ಚಿತ್ರವನ್ನು ಶಿವಕುಮಾರ್ ಮಾದಯ್ಯ ನಿರ್ಮಿಸಿದ್ದಾರೆ ಮತ್ತು ಕೆಆರ್‌ಜಿ ಸ್ಟುಡಿಯೋಸ್ ವಿತರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs South Africa: ತವರಿನಲ್ಲಿ ಭಾರತಕ್ಕೆ ಮುಖಭಂಗ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬವುಮಾ ಪಡೆ!

‘ಭಾರತದ ಒಂದೇ ಜಿಲ್ಲೆಗೆ 2,20,000 H-1B ವೀಸಾ ಮಂಜೂರು’: ದೊಡ್ಡ ಪ್ರಮಾಣದ ಹಗರಣ, ಯುಎಸ್ ಅರ್ಥಶಾಸ್ತ್ರಜ್ಞ ಡಾ.ಡೇವ್ ಬ್ರಾಟ್ ಆರೋಪ

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ: ವಿಐಟಿ ಭೋಪಾಲ್ ವಿವಿ ಕ್ಯಾಂಪಸ್ ಧ್ವಂಸ, ವಾಹನಗಳಿಗೆ ಬೆಂಕಿ

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಜನಸ್ನೇಹಿ ಅಧಿಕಾರಿ ಪ್ರಾಣ ಕಸಿದ ಶ್ವಾನ: ಮುಗಿಲು ಮುಟ್ಟಿದ ಬೀಳಗಿ ಕುಟುಂಬಸ್ಥರ ಆಕ್ರಂದನ; ಬಡತನದಲ್ಲಿ ಅರಳಿದ್ದ ಧೀಮಂತ ಪ್ರತಿಭೆ

SCROLL FOR NEXT