ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಕೆರೆಬೇಟೆ' ಬಿಡುಗಡೆಗೆ ಸಿದ್ಧ; ಚಿತ್ರದಲ್ಲಿ ನನ್ನ ಹುಟ್ಟೂರು ಮಲೆನಾಡಿನ ಸೊಬಗು ಆಳವಾಗಿ ಬೇರೂರಿದೆ: ನಿರ್ದೇಶಕ ರಾಜಗುರು

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

'ಕೆರೆಬೇಟೆ ಚಿತ್ರದ ಮೂಲಕ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿರುವುದು ಸುದೀರ್ಘ ಹೋರಾಟದ ಪರಾಕಾಷ್ಠೆಯಾಗಿದೆ. ನಾನು 2008ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರೂ, ಸಿನಿಮಾ ನಿರ್ದೇಶಿಸುವ ನನ್ನ ಕನಸು ನನಸಾಗಲು ಇಷ್ಟು ವರ್ಷಗಳು ಬೇಕಾಯಿತು. ಈ ದಾರಿಯುದ್ದಕ್ಕೂ ವಿಷಾದದ ಕ್ಷಣಗಳು ಇದ್ದವು. ಆದರೆ, ಈಗ ಅದು ಕಾರ್ಯರೂಪಕ್ಕೆ ಬರುವುದನ್ನು ನೋಡಿ ನನಗೆ ತೃಪ್ತಿ ಇದೆ' ಎನ್ನುತ್ತಾರೆ ರಾಜ್‌ಗುರು.

ಕಂಟೆಂಟ್ ಆಧರಿತ ಸಿನಿಮಾ ಮಾಡುವ ಅವರ ನಿರ್ಧಾರದ ಬಗ್ಗೆ ಮಾತನಾಡುವ ಅವರು, 'ನಾನು ಕಮರ್ಷಿಯಲ್ ಚಿತ್ರವನ್ನು ಆಯ್ಕೆ ಮಾಡಿದ್ದರೆ ಮನ್ನಣೆ ಗಳಿಸಬಹುದು. ಆದರೆ, ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಮಲೆನಾಡು ಪ್ರದೇಶದಿಂದ ಬಂದವನಾಗಿ, ಕೆರೆಬೇಟೆ ನನ್ನ ಸ್ಥಳೀಯ ಸೊಬಗು ಆಳವಾಗಿ ಬೇರೂರಿರುವ ಮತ್ತು ನನ್ನ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಸಾಂಕ್ರಾಮಿಕ ರೋಗದ ನಂತರ ಪ್ರೇಕ್ಷಕರ ಬದಲಾಗುತ್ತಿರುವ ದೃಷ್ಟಿಕೋನಗಳು ಮತ್ತು ಹೊಸ ಕಂಟೆಂಟ್‌ಗೆ ಉದ್ಯಮದ ಮುಕ್ತತೆ ನನ್ನ ಚೊಚ್ಚಲ ಪ್ರವೇಶಕ್ಕೆ ಪರಿಪೂರ್ಣ ಅವಕಾಶವನ್ನು ಒದಗಿಸಿದೆ' ಎಂದು ಅವರು ಹೇಳುತ್ತಾರೆ.

'ಇಂದಿನ ಪ್ರೇಕ್ಷಕರು ವಾಸ್ತವಕ್ಕೆ ಹತ್ತಿರವಾದ ಕಥೆಗಳ ಹುಡುಕಾಟದಲ್ಲಿ ಕಂಟೆಂಟ್ ಆಧರಿತ ಸಿನಿಮಾದತ್ತ ಆಕರ್ಷಿತರಾಗಿದ್ದಾರೆ. ಬಲಿಷ್ಠ ಕಥೆ ಹೇಳುವ ಸಂಪ್ರದಾಯಕ್ಕೆ ಹೆಸರಾದ ನಮ್ಮ ಕನ್ನಡ ಸಿನಿಮಾಗಳು ಹೊರಗಿನ ಪ್ರಭಾವಗಳಿಂದ ತಮ್ಮ ಬೇರುಗಳಿಂದ ದೂರ ಸರಿದಿದ್ದವು. ಆದಾಗ್ಯೂ, ನಮ್ಮ ಪರಂಪರೆಯನ್ನು ಸಂಭ್ರಮಿಸುವ ಕಥೆಗಳ ಪುನರುತ್ಥಾನವನ್ನು ನಾವು ಈಗ ನೋಡುತ್ತಿದ್ದೇವೆ' ಎಂದು ಅವರು ಹೇಳುತ್ತಾರೆ.

ಕೆರೆಬೇಟೆ ಸಿನಿಮಾ ಮಲೆನಾಡು ಪ್ರದೇಶಗಳಲ್ಲಿನ ಹಳೆಯ ಮೀನುಗಾರಿಕೆ ಸಂಪ್ರದಾಯಗಳ ಸುತ್ತ ಸುತ್ತುತ್ತದೆ. ಅದರ ಶೀರ್ಷಿಕೆಯನ್ನು ಸಮರ್ಥಿಸುವ ನಿರೂಪಣೆಯೊಂದಿಗೆ ಕಮರ್ಷಿಯಲ್ ಮನರಂಜನೆಯ ಅಂಶಗಳನ್ನು ಸೇರಿಸಲಾಗಿದೆ.

ಮಲೆನಾಡಿನವರೇ ಆದ ನಟ ಗೌರಿ ಶಂಕರ್ ಅವರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ನಿರ್ದೇಶಕ ರಾಜ್‌ಗುರು ಅವರು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಗೌರಿ ಶಂಕರ್ ಅವರು ಕಥೆಯನ್ನು ಮೆಚ್ಚಿಕೊಂಡರು ಮತ್ತು ನಟ ಮತ್ತು ನಿರ್ಮಾಪಕರಾಗಿಯೂ ನೆರವಾದರು ಎನ್ನುತ್ತಾರೆ.

ಜನಮನ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ದಿನಕರ್ ತೂಗುದೀಪ ಪ್ರಸ್ತುತಪಡಿಸಿ ಜೈಶಂಕರ್ ಪಟೇಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಿಂದು ಶಿವರಾಮ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಮತ್ತು ಸಂಪತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ ಸಂಯೋಜನೆಯಿದ್ದು, ಡಿಒಪಿ ಆಗಿ ಕೀರ್ತನ್ ಪೂಜಾರಿ ಮತ್ತು ಸಂಕಲನಕಾರರಾಗಿ ಜ್ಞಾನೇಶ್ ಬಿ ಮಾತಾಡ್ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ 24 ಗಂಟೆಯಲ್ಲಿ ಕರ್ನಾಟಕದಲ್ಲಿ ತೀವ್ರ ಶೀತಗಾಳಿ?; IMD ಎಚ್ಚರಿಕೆ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ, ಥಳಿಸಿ, ವಿಷಪ್ರಾಶನ!

ಅಯೋಧ್ಯೆ ರಾಮಮಂದಿರದ ಸೀತಾ ರಸೋಯಿ ಬಳಿ ನಮಾಜ್ ಮಾಡಲು ಯತ್ನಿಸಿದ ಕಾಶ್ಮೀರಿ ವ್ಯಕ್ತಿಯ ಬಂಧನ

WPL 2026: Jay Shah ಕನಸು ಕೊನೆಗೂ ನನಸು; ಮಹಿಳಾ ಪ್ರೀಮಿಯರ್ ಲೀಗ್ ಗೆ ಹರಿದುಬಂದ ಜನ ಸಾಗರ; ದಾಖಲೆ!

SCROLL FOR NEXT