ನಟ ಕಿಶೋರ್ - ಯುವ ರಾಜ್‌ಕುಮಾರ್ 
ಸಿನಿಮಾ ಸುದ್ದಿ

ನಾನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ; 'ಯುವ' ಪಾತ್ರದ ಬಗ್ಗೆ ನಟ ಕಿಶೋರ್ ಮಾತು

ಕೆಲವು ನಟರಷ್ಟೇ ತಾವು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಾಲಿಗೆ ಸೇರುತ್ತಾರೆ ನಟ ಕಿಶೋರ್. ವೈಯಕ್ತಿಕವಾಗಿ ತಮಗೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತ ಪ್ರಭಾವಿ ಪಾತ್ರಗಳನ್ನು ಆಯ್ಕೆ ಮಾಡುವ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಳ್ಳುತ್ತಾರೆ.

ಕೆಲವು ನಟರಷ್ಟೇ ತಾವು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಾಲಿಗೆ ಸೇರುತ್ತಾರೆ ನಟ ಕಿಶೋರ್. ಅವರು ಪೋಷಕ ಪಾತ್ರವನ್ನು ನಿರ್ವಹಿಸಿದರೂ ಸಹ ಚಿತ್ರದ ಒಟ್ಟಾರೆ ನಿರೂಪಣೆಯನ್ನು ಶ್ರೀಮಂತಗೊಳಿಸುವ ನಟನೆಯನ್ನು ನೀಡುತ್ತಾರೆ.

ಬಹುಭಾಷೆಗಳಲ್ಲಿ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ಕಿಶೋರ್ ಅವರು ಖಳನಟ ಮತ್ತು ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವೈಯಕ್ತಿಕವಾಗಿ ತಮಗೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತ ಪ್ರಭಾವಿ ಪಾತ್ರಗಳನ್ನು ಆಯ್ಕೆ ಮಾಡುವ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಳ್ಳುತ್ತಾರೆ.

'ಹಲವಾರು ಪಾತ್ರಗಳಿಗಾಗಿ ಸಂಪರ್ಕಿಸಲಾಗುತ್ತದೆ. ಆದರೆ, ನನಗೆ ಯಾವುದು ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಗುರುತಿಸುವುದು ಮತ್ತು ಅವುಗಳನ್ನು ಆಯ್ಕೆ ಮಾಡುವುದು ನನಗೆ ಬಿಟ್ಟದ್ದು. ಇದು ಗೊಂದಲಕಾರಿಯಾಗಿರುತ್ತದೆ. ಕೆಲವೊಮ್ಮೆ ಪಾತ್ರಕ್ಕೆ ನಮ್ಮದೇ ಆದ ಕೊಡುಗೆಗಳನ್ನು ನೀಡಲು ಪ್ರಾರಂಭಿಸಿದಾಗ, ನಿರ್ದೇಶಕರು ನಿರ್ದಿಷ್ಟ ನಟರ ಮೂಲಕ ಆ ಪಾತ್ರಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸುಲಭವಾಗುತ್ತದೆ. ಅವರು ಬರೆದ ಪಾತ್ರಕ್ಕೆ ಅನುಗುಣವಾಗಿ ಅವರು ನಟರನ್ನು ಆಯ್ಕೆ ಮಾಡುತ್ತಾರೆ. ಆಗ ಅವರ ಕಥೆ ಹೇಳುವ ಪ್ರಕ್ರಿಯೆ ತಡೆರಹಿತವಾಗಿರುತ್ತದೆ. ಅಂತಿಮವಾಗಿ, ಕಥೆ ಹೇಳುವಿಕೆಯಲ್ಲಿ ನಾವು ನಿರ್ದೇಶಕರು ನಿರೂಪಿಸುವ ಸಾಧನಗಳಾಗುತ್ತೇವೆ. ಅವರ ದೃಷ್ಟಿಯಲ್ಲಿ ಪ್ರತಿಯೊಂದು ಸಾಧನವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ' ಎಂದು ನಟ ಹೇಳುತ್ತಾರೆ.

ಕಾಂತಾರದಲ್ಲಿ ಅರಣ್ಯಾಧಿಕಾರಿಯಾಗಿ ಅವರ ಪ್ರಭಾವಶಾಲಿ ಅಭಿನಯವನ್ನು ಅನೇಕರು ನೆನಪಿಸಿಕೊಳ್ಳುತ್ತಿದ್ದರೂ, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾದಲ್ಲಿ ಮಹತ್ವದ ಪಾತ್ರದೊಂದಿಗೆ ಕಿಶೋರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಯುವ ರಾಜಕುಮಾರ್ ಅಭಿನಯದ, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರವು ಈ ವಾರ ಬಿಡುಗಡೆಯಾಗಲಿದೆ. ಕಿಶೋರ್ ಯುವ ಸಿನಿಮಾದಲ್ಲಿ ಕುಸ್ತಿ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ.

'ಒಂದು ಕ್ರೀಡೆಯಾಗಿ ಕುಸ್ತಿ ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ ಮತ್ತು ನಾನು ಈ ಸ್ಕ್ರಿಪ್ಟ್ ಅನ್ನು ಆರಿಸಿಕೊಂಡ ಕಾರಣವೆಂದರೆ ಈ ಕ್ರೀಡೆಯ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳುವುದಾಗಿತ್ತು. ಈ ಪ್ರಕ್ರಿಯೆಯಲ್ಲಿ, ನನಗೆ ಯುವ ರಾಜಕುಮಾರ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಮತ್ತು ಪಾತ್ರಕ್ಕೆ ಅವರು ತೋರುವ ಬದ್ಧತೆ ಇಷ್ಟವಾಯಿತು. ನನ್ನೊಂದಿಗೆ ತೆರೆ ಹಂಚಿಕೊಳ್ಳುವ ಮತ್ತು ಕ್ರೀಡಾ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅಲ್ಪಾವಧಿಯಲ್ಲಿಯೇ ಅವರು ಬಹಳಷ್ಟು ಕಲಿತಿದ್ದಾರೆ. ಚಿತ್ರಕ್ಕಾಗಿ ಅವರು ಅಪಾರ ಪರಿಶ್ರಮವನ್ನು ಹಾಕಿದ್ದಾರೆ. ನನಗೆ ಯಾವಾಗಲೂ ಬದ್ಧತೆ ಹೊಂದಿರುವ ನಟರು ಮೆಚ್ಚುಗೆಯಾಗುತ್ತಾರೆ. ನಾಯಕ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಾನೆ ಮತ್ತು ಯುವ ರಾಜಕುಮಾರ್ ಅವರು ನಿಜವಾಗಿಯೂ ಪಾತ್ರದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಬಹುಶಃ, ನಾಯಕನ ಈ ಚಿತ್ರಣವು ಕುಸ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೆಲವರನ್ನು ಪ್ರೇರೇಪಿಸಬಹುದು' ಎಂದು ಕಿಶೋರ್ ಹೇಳುತ್ತಾರೆ.

ತಮ್ಮ ಪಾತ್ರಕ್ಕಾಗಿ ಮಾಡಿಕೊಂಡ ಸಿದ್ಧತೆ ಬಗ್ಗೆ ಮಾತನಾಡುವ ಕಿಶೋರ್, 'ನನಗೆ ಪಾತ್ರಕ್ಕಾಗಿ ಹೆಚ್ಚು ಹೋಮ್‌ವರ್ಕ್ ಇರಲಿಲ್ಲ, ಆದರೆ ನಾನು ಕೆಲವು ನಿಜ ಜೀವನದ ಕುಸ್ತಿಪಟುಗಳಿಂದ ಸುತ್ತುವರೆದಿರುವುದು ನನ್ನ ಅದೃಷ್ಟ. ಅವರಲ್ಲಿ ಕೆಲವರು ಚಿತ್ರದಲ್ಲಿ ನಟಿಸಿದ್ದಾರೆ. ಕುಸ್ತಿ ತರಬೇತುದಾರರು ಬಳಸುವ ತಾಂತ್ರಿಕ ಪರಿಭಾಷೆಯನ್ನು ಒಳಗೊಂಡಂತೆ ನಾನು ಅವರಿಂದ ಕೆಲವು ವಿಚಾರಗಳನ್ನು ಕಲಿತಿದ್ದೇನೆ' ಎನ್ನುತ್ತಾರೆ.

'ನಾನು ಕಮರ್ಷಿಯಲ್ ಎಂಟರ್‌ಟೈನರ್‌ಗಳಿಗೆ ಹೊಂದಿಕೆಯಾಗುವುದಿಲ್ಲ. ವಿಭಿನ್ನ ಅಂಶಗಳನ್ನು ಒಟ್ಟಿಗೆ ಹೆಣೆಯುವ ಸಿನಿಮಾಗಳಿಗೆ ನಾನು ಸೂಕ್ತ ಎನಿಸುತ್ತೇನೆ. ಹೆಚ್ಚಿನ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗುವ ಅನುಭವಗಳನ್ನು ರಚಿಸುತ್ತೇನೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ ನಾನು ಬಹುಮುಖಿ ನಟನಾಗಿ ಉಳಿಯಲು ಬಯಸುತ್ತೇನೆ' ಎಂದು ಹೇಳುತ್ತಾರೆ.

ನಾನು ವಿಕ್ರಮ್ ನಿರ್ದೇಶನದ 5 ಎಂಬ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಯ ಪಾತ್ರವನ್ನು ಆನಂದಿಸುತ್ತೇನೆ. ಅಲ್ಲದೆ, ನಿರ್ದೇಶಕ ಸುಪ್ರೀತ್ ಅವರೊಂದಿಗೆ ಯಕ್ಷಗಾನವನ್ನು ಆಧರಿಸಿದ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಗಣೇಶ್ ಹೆಡ್ಗೆ ನಿರ್ದೇಶನದ ಗುಟ್ಕಾ ಎಂಬ ಇನ್ನೊಂದು ಯೋಜನೆ ಇದೆ. ಚಿತ್ರದಲ್ಲಿ ಪೆದ್ರೊ ನಿರ್ದೇಶಕ ನಟೇಶ್ ಹೆಗ್ಡೆ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇವೆಲ್ಲವೂ ಆಸಕ್ತಿದಾಯಕ ಯೋಜನೆಗಳು ಮತ್ತು ನಾನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ' ಎಂದು ಮಾತು ಮುಗಿಸುತ್ತಾರೆ ಕಿಶೋರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

SCROLL FOR NEXT