ನಯನತಾರಾ-ಧನುಷ್ TNIE
ಸಿನಿಮಾ ಸುದ್ದಿ

'ನೀಚ', ಆತ ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ: ಬಹಿರಂಗ ಪತ್ರದ ಮೂಲಕ ಧನುಷ್ ವಿರುದ್ಧ ನಯನತಾರಾ ಕಿಡಿ!

ನಿರ್ಮಾಪಕರ ವಿರುದ್ಧ 10 ಕೋಟಿ ರೂಪಾಯಿಗಳ ಕಾಪಿರೈಟ್ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಾಗಿ ನಟಿ ಧನುಷ್‌ನಿಂದ ಅನುಮತಿ ಕೇಳಿದ್ದರೂ, ಅವರು ಅದನ್ನು ನಿರಾಕರಿಸಿದ್ದರು. ಈಗ ಅವರು ಚಿತ್ರದ ಕೆಲ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಯನತಾರಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ನಟಿ ಧನುಷ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇತ್ತೀಚೆಗೆ, ನಟಿಯ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಆಧರಿಸಿದ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಈ ಸಾಕ್ಷ್ಯಚಿತ್ರದ ಮೇಲೆ ಧನುಷ್ 10 ಕೋಟಿ ಕಾಪಿರೈಟ್ ಕೇಸ್ ಹಾಕಿದ್ದಾರೆ. ಇದು ನಯನತಾರಾ ಕೋಪಗೊಳ್ಳುವಂತೆ ಮಾಡಿದೆ.

ನಟಿಯ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ನಲ್ಲಿ ಧನುಷ್ ಅವರ ಚಲನಚಿತ್ರ 'ನಾನು ರೌಡಿ ಧಾನ್' ನಿಂದ 3 ಸೆಕೆಂಡುಗಳ ಕ್ಲಿಪ್ಪಿಂಗ್ ಅನ್ನು ಬಳಸಿದ್ದಕ್ಕಾಗಿ ನಿರ್ಮಾಪಕರ ವಿರುದ್ಧ 10 ಕೋಟಿ ರೂಪಾಯಿಗಳ ಕಾಪಿರೈಟ್ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಾಗಿ ನಟಿ ಧನುಷ್‌ನಿಂದ ಅನುಮತಿ ಕೇಳಿದ್ದರೂ, ಅವರು ಅದನ್ನು ನಿರಾಕರಿಸಿದ್ದರು. ಈಗ ಅವರು ಚಿತ್ರದ ಕೆಲ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಹಲವು ಬಾರಿ ಮನವಿ ಮಾಡಿದರೂ ನಾನು ರೌಡಿ ಧಾನ್ ಚಿತ್ರದ ಹಾಡು ಅಥವಾ ದೃಶ್ಯ ಕಟ್ ಮತ್ತು ಫೋಟೋಗಳನ್ನು ಬಳಸಲು ನೀವು ಅನುಮತಿ ನೀಡಲಿಲ್ಲ. ನಾವು ಕೂಡ ಇದಕ್ಕಾಗಿ ಬಹಳ ಸಮಯ ಕಾಯುತ್ತಿದ್ದೆವು ಎಂದು ನಟಿ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಅವರ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಜನರ ಫೋನ್‌ಗಳಲ್ಲಿ ಚಿತ್ರೀಕರಿಸಲಾಗಿದೆ ಮತ್ತು ನೀವು ಇದನ್ನು ಸಹ ಆಕ್ಷೇಪಿಸಿದ್ದೀರಿ ಎಂದು ಬರೆದಿದ್ದಾರೆ.

ನೀವು ಅತ್ಯಂತ ಕೆಳಮಟ್ಟಕ್ಕೆ ಇಳಿದ್ದೀರಾ? ಇದು ನಿಮ್ಮ ಪಾತ್ರದ ಬಗ್ಗೆ ಏನನ್ನಾದರೂ ಹೇಳುತ್ತದೆ ಎಂದು ಅವರು ಬರೆದಿದ್ದಾರೆ. ಅವರ ಕಾನೂನು ನೋಟಿಸ್‌ಗೆ ತಕ್ಕ ಉತ್ತರ ನೀಡುವುದಾಗಿ ನಯನತಾರಾ ಹೇಳಿದ್ದಾರೆ. ನಿಮ್ಮ ಲೀಗಲ್ ನೋಟಿಸ್ ನನಗೆ ಬಂದಿದ್ದು, ಅದಕ್ಕೆ ಕಾನೂನು ರೀತಿಯಲ್ಲಿ ತಕ್ಕ ಉತ್ತರವನ್ನೂ ನೀಡುತ್ತೇವೆ ಎಂದು ನಟಿ ಬರೆದಿದ್ದಾರೆ.

ನಯನತಾರಾ ಅವರ ಬಹಿರಂಗ ಪತ್ರಕ್ಕೆ ಪಾರ್ವತಿ ತಿರುವೋತ್ತು ಬೆಂಬಲ ನೀಡಿದ್ದಾರೆ. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಇದಲ್ಲದೇ ಆರ್ ಎಸ್ ದುರೈ ಸೆಂಥಿಲ್ ಕುಮಾರ್ ಅವರ 2016ರ ರಾಜಕೀಯ ಸಾಹಸ ನಾಟಕ ಕೊಡಿ ಚಿತ್ರದಲ್ಲಿ ಧನುಷ್ ಜೊತೆ ತೆರೆ ಹಂಚಿಕೊಂಡಿರುವ ಅನುಪಮಾ ಪರಮೇಶ್ವರನ್ ಕೂಡ ನಯನತಾರಾ ಅವರ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಜಲ ವಿವಾದ: ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್; ವಾಟಾಳ್ ನಾಗರಾಜ್ ಘೋಷಣೆ

Russia-Ukraine war: ಸಂಕಷ್ಟದಲ್ಲಿರುವ ಭಾರತೀಯರ ಕುಟುಂಬಗಳಿಗೆ ನೆರವು; Nodal ಅಧಿಕಾರಿ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ Supreme Court ಸೂಚನೆ

ಮಹಾರಾಷ್ಟ್ರ: ಭಿವಂಡಿಯಲ್ಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆ; ರಕ್ಷಣಾ ಕಾರ್ಯಾಚರಣೆಯ ವೇಳೆ NDRF ಅಧಿಕಾರಿಗೆ ಗಾಯ; Video

Parliament Monsoon Session: ಸಂಸತ್‌ನಲ್ಲಿ ಮತ್ತೆ ಹೈಡ್ರಾಮಾ; ಅಮಿತ್ ಶಾ ವಿಚಾರವಾಗಿ ಭಾರೀ ಗದ್ದಲ, Lok Sabha-Rajya Sabha ಕಲಾಪ ಸೋಮವಾರಕ್ಕೆ ಮುಂದೂಡಿಕೆ..!

Iranಗೆ ಬೆಂಬಲ ಆರೋಪ: ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ, China-Russia ಸಂಸ್ಥೆಗಳೂ Black listಗೆ..!