Amaran ಫೋಸ್ಟರ್ 
ಸಿನಿಮಾ ಸುದ್ದಿ

ಸಾಯಿ ಪಲ್ಲವಿ ಫ್ಯಾನ್ಸ್ ಗಳಿಂದ ನಿರಂತರ ಕರೆ; Amaran ನಿರ್ಮಾಪಕರಿಗೆ 1.1 ಕೋಟಿ ರೂ ಲೀಗಲ್ ನೋಟಿಸ್ ಕಳುಹಿಸಿದ ವಿದ್ಯಾರ್ಥಿ!

ಸಿನಿಮಾದ ದೃಶ್ಯವೊಂದರಲ್ಲಿ ಸಾಯಿ ಪಲ್ಲವಿ ತನ್ನ ಮೊಬೈಲ್ ನಂಬರ್ ಬರೆದಿರುವ ಕಾಗದವನ್ನು ನಾಯಕ ಶಿವಕಾರ್ತಿಕೇಯನ್ ಅವರತ್ತ ಎಸೆದಿದ್ದಾರೆ. ವಾಸ್ತವದಲ್ಲಿ ಈ ನಂಬರ್ ನನ್ನದಾಗಿದ್ದು, ಆಧಾರ್‌ ಕಾರ್ಡ್ ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳವರೆಗೆ ಎಲ್ಲದಕ್ಕೂ ಲಿಂಕ್ ಆಗಿದೆ.

ವಿಚಿತ್ರ ರೀತಿಯ ಪ್ರಕರಣವೊಂದರಲ್ಲಿ ಸಿನಿಮಾದಲ್ಲಿ ಫೋನ್ ನಂಬರ್ ಬಳಸಿದ್ದಕ್ಕಾಗಿ Amaran ನಿರ್ಮಾಪಕರಿಗೆ ಚೆನ್ನೈನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ನಟಿ ಸಾಯಿ ಪಲ್ಲವಿ ಅಭಿಮಾನಿಗಳಿಂದ ಫೋನ್ ಕರೆಗಳು ಹೆಚ್ಚಾದ ನಂತರ ವಿದ್ಯಾರ್ಥಿ ವಿವಿ ವಾಗೀಸನ್ ಚಿತ್ರ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ಚಿತ್ರದಲ್ಲಿ ಆತನ ಫೋನ್ ನಂಬರ್ ತೋರಿಸಿದ್ದಕ್ಕಾಗಿ ರೂ. 1.1 ಕೋಟಿ ಲೀಗಲ್ ನೋಟಿಸ್ ಕಳುಹಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಸಿನಿಮಾದ ದೃಶ್ಯವೊಂದರಲ್ಲಿ ಸಾಯಿ ಪಲ್ಲವಿ ತನ್ನ ಮೊಬೈಲ್ ನಂಬರ್ ಬರೆದಿರುವ ಕಾಗದವನ್ನು ನಾಯಕ ಶಿವಕಾರ್ತಿಕೇಯನ್ ಅವರತ್ತ ಎಸೆದಿದ್ದಾರೆ. ವಾಸ್ತವದಲ್ಲಿ ಈ ನಂಬರ್ ನನ್ನದಾಗಿದ್ದು, ಆಧಾರ್‌ ಕಾರ್ಡ್ ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳವರೆಗೆ ಎಲ್ಲದಕ್ಕೂ ಲಿಂಕ್ ಆಗಿದ್ದು, ಬದಲಾಯಿಸಲು ಕಷ್ಟವಾಗುತ್ತದೆ ಎಂದು ವಾಗೀಸನ್ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 31 ರಂದು ಚಿತ್ರ ಬಿಡುಗಡೆಯಾದ ನಂತರ, ಸಾಯಿ ಅವರೊಂದಿಗೆ ಮಾತನಾಡಬೇಕೆಂದು ಕರೆಗಳು ವಿದ್ಯಾರ್ಥಿಗೆ ಬರಲು ಆರಂಭಿಸಿವೆ. ಆರಂಭದಲ್ಲಿ ಯಾಕೆ ಈ ರೀತಿಯ ಕರೆ ಬರುತ್ತಿವೆ ಎಂಬುದು ಆತನಿಗೆ ಗೊತ್ತಾಗಿಲ್ಲ. ಆದರೆ ಕರೆಗಳು ಹೆಚ್ಚಾದ ನಂತರ ಸಿನಿಮಾದಲ್ಲಿ ತನ್ನ ಮೊಬೈಲ್ ಸಂಖ್ಯೆ ತೋರಿಸಲಾಗಿದೆ ಎಂಬುದು ಅರಿವಿಗೆ ಬಂದಿದೆ. ಇದೀಗ ಹೇಳಲಾಗದ ಮಾನಸಿಕ ಯಾತನೆಯಿಂದ ರೂ. 1.1 ಕೋಟಿ ರೂ ಪರಿಹಾರ ಕೇಳಿದ್ದು, ಕೂಡಲೇ ಸಿನಿಮಾದಿಂದ ತನ್ನ ನಂಬರ್ ತೆಗೆಯುವಂತೆಯೂ ಕೇಳಿಕೊಂಡಿದ್ದಾರೆ.

Amaran ಚಿತ್ರ ಬಿಡುಗಡೆಯಾದಾಗಿನಿಂದಲೂ ನಿದ್ರೆ, ಅಧ್ಯಯನ ಮಾಡಲು ಆಗುತ್ತಿಲ್ಲ. ದಿನನಿತ್ಯದ ಯಾವುದೇ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಫೋಸ್ಟ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆ. ಅದನ್ನು ನಿರ್ದೇಶಕ ರಾಜಕುಮಾರ್ ಪೆರಿಯಾಸ್ವಾಮಿ ಮತ್ತು ನಾಯಕ ಶಿವಕಾರ್ತಿಕೇಯನ್ ಅವರಿಗೆ ಟ್ಯಾಗ್ ಮಾಡಿದ್ದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದ್ಯಾರ್ಥಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT