ರಾಯಲ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ರಾಯಲ್ ಚಿತ್ರದ 2ನೇ ಹಾಡು 'ಟಾಂಗ್ ಟಾಂಗ್' ಭರ್ಜರಿ ಹಿಟ್; ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ

ತುಮಕೂರಿನಲ್ಲಿ ಹಾಡನ್ನು ಲಾಂಚ್ ಮಾಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ವಿರಾಟ್ ಮತ್ತು ಸಂಜನಾ ಆನಂದ್ ಅಭಿನಯದ ರಾಯಲ್ ಚಿತ್ರದ ಎರಡನೇ ಹಾಡು 'ಟಾಂಗ್ ಟಾಂಗ್' ಭರ್ಜರಿ ಹಿಟ್ ಆಗಿದ್ದು. ಈ ವೈರಲ್ ಟ್ರ್ಯಾಕ್ ಈಗಾಗಲೇ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ.

ತುಮಕೂರಿನಲ್ಲಿ ಹಾಡನ್ನು ಲಾಂಚ್ ಮಾಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರೇಕ್ಷಕರು ನೀಡಿದ ಬೆಂಬಲಕ್ಕೆ ಚಿತ್ರತಂಡ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ. ಈ ವಿಶೇಷ ಸಂದರ್ಭಕ್ಕೆ ನಿರ್ದೇಶಕ ದಿನಕರ್ ತೂಗುದೀಪ, ಸಂಗೀತ ನಿರ್ದೇಶಕ ಚರಣ್ ರಾಜ್, ಮತ್ತು ಗೀತರಚನೆಕಾರ ಕವಿರಾಜ್, ನಾಯಕ ನಟರಾದ ವಿರಾಟ್ ಮತ್ತು ಸಂಜನಾ ಸಾಕ್ಷಿಯಾದರು.

'ಟಾಂಗ್ ಟಾಂಗ್' ಮಧುರವಾಗಿರುವುದಕ್ಕಾಗಿ ಮಾತ್ರವಲ್ಲದೆ ಚಿತ್ರದ ಉತ್ಸಾಹವನ್ನು ಸೆರೆಹಿಡಿಯುವ ಅದರ ರೋಮಾಂಚಕ ದೃಶ್ಯಗಳಿಗಾಗಿಯೂ ಹಿಟ್ ಆಗಿದೆ. ಗೀತರಚನೆಕಾರ ಕವಿರಾಜ್ ಇದನ್ನು 'ಪರಿಪೂರ್ಣ ರಾಜಗೀತೆ' ಎಂದು ಬಣ್ಣಿಸಿದ್ದಾರೆ. ಕನ್ನಡ ಚಿತ್ರರಂಗದ ಶ್ರೀಮಂತ ಸಂಸ್ಕೃತಿಯನ್ನು ಕೊಂಡಾಡುವ ಉದ್ದೇಶ ಹೊಂದಿರುವ ಈ ಸಿನಿಮಾಗೆ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

ಐದು ವರ್ಷಗಳ ವಿರಾಮದ ನಂತರ ನಿರ್ದೇಶನಕ್ಕೆ ಮರಳಿರುವ ದಿನಕರ್ ಅವರು ಮಾತನಾಡಿ, “ನಮ್ಮ ಯಶಸ್ಸಿಗೆ ನೀವೇ ಕಾರಣ. ಅಭಿಮಾನಿಗಳ ಬೆಂಬಲಕ್ಕೆ ನಾವು ಋಣಿಯಾಗಿದ್ದೇವೆ. ನಾವು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ನಾವು ಯಾವಾಗಲೂ ನಿಮ್ಮ ಪ್ರೀತಿಯನ್ನು ಗಳಿಸಿದ್ದೇವೆ ಮತ್ತು ಈ ಚಿತ್ರ ಮತ್ತು ಮುಂದಿನ ಎಲ್ಲಾ ಕನ್ನಡ ಚಿತ್ರಗಳಿಗೆ ನಿಮ್ಮ ಬೆಂಬಲ ಬೇಕು ಎಂದರು. ಇಷ್ಟು ದಿನ ನಾನೆಲ್ಲೂ ಹೋಗಿರಲಿಲ್ಲ‌. ಕಾರಣ ಪರಿಸ್ಥಿತಿ. ಆದರೆ, ನನ್ನ ನಂಬಿ ಜಯಣ್ಣ ಭೋಗಣ್ಣ ದುಡ್ಡು ಹಾಕಿದ್ದಾರೆ. ಇದು ನನ್ನ ಜವಾಬ್ದಾರಿ ಅದಕ್ಕಾಗಿ ಈ ವೇದಿಕೆಗೆ ಬಂದಿದ್ದೀನಿ ಎಂದರು.

ರಾಯಲ್‌ ಚಿತ್ರದ ಪ್ರಮುಖ ಜೋಡಿ ವಿರಾಟ್ ಮತ್ತು ಸಂಜನಾ ಆನಂದ್ ತಂಡದೊಂದಿಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡರು. "ಜಯಣ್ಣ ಮತ್ತು ಭೋಗೇಂದ್ರ ಸರ್ ಇದನ್ನು ಸಾಧ್ಯವಾಗಿಸಿದ್ದಾರೆ ಮತ್ತು ಎಲ್ಲರೂ ಚಿತ್ರವನ್ನು ಬೆಂಬಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು.

ಸಂಕೇತ್ ಅವರ ಛಾಯಾಗ್ರಹಣದೊಂದಿಗೆ, ಜಯಣ್ಣ ಪ್ರೊಡಕ್ಷನ್ಸ್ ನಿರ್ಮಾಣದ ರಾಯಲ್, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ ಹಂತಲ್ಲಿದ್ದು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT