ಕಮಲ್ ಹಾಸನ್  
ಸಿನಿಮಾ ಸುದ್ದಿ

'ನಾನು ರಾಮನ ತಂದೆ ದಶರಥನ ಮಾರ್ಗ ಅನುಸರಿಸುತ್ತೇನೆ, ಅದಕ್ಕೆ ಎರಡು ಮದುವೆ ಇರಬೇಕು': ಕಮಲ್ ಹಾಸನ್

1978ರಲ್ಲಿ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದ ಅವರು 1988 ರಲ್ಲಿ ದೂರಾಗಿದ್ದರು. ಬಳಿಕ ಅದೇ ವರ್ಷ ನಟಿ ಸಾರಿಕಾ ಅವರೊಂದಿಗೆ ವಿವಾಹವಾಗಿದ್ದರು.

ನವದೆಹಲಿ: ನಟ ಕಮಲ್ ಹಾಸನ್ ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' ಬಿಡುಗಡೆಗೆ ಎದುರುನೋಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ, ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಪತ್ರಕರ್ತರೊಬ್ಬರು ತ್ರಿಶಾ ಅವರ ವಿವಾಹದ ಕುರಿತು ಪ್ರಶ್ನೆ ಕೇಳಿದಾಗ, 'ಅದು (ಮದುವೆ) ಸಂಭವಿಸಿದರೂ ಪರವಾಗಿಲ್ಲ ಮತ್ತು ಅದು ಸಂಭವಿಸದಿದ್ದರೂ ಪರವಾಗಿಲ್ಲ' ಎಂದು ಹೇಳಿದರು.

ಇದು ಕಮಲ್ ಹಾಸನ್ ಅವರನ್ನು ತಮ್ಮ ವೈವಾಹಿಕ ಅನುಭವಗಳ ಬಗ್ಗೆ ಚಿಂತಿಸುವಂತೆ ಮಾಡಿತು. ಈಗ ಸಂಸತ್ ಸದಸ್ಯರಾಗಿರುವ ಜಾನ್ ಬ್ರಿಟ್ಟಾಸ್ ಅವರೊಂದಿಗಿನ ಸಂದರ್ಶನದಿಂದ ಆಯ್ದ ಕೆಲವು ವಿಚಾರಗಳನ್ನು ಕಮಲ್ ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್ ಅವರು ಎರಡು ವಿವಾಹ ವಾಗಿದ್ದು, ಇಬ್ಬರಿಂದಲೂ ವಿಚ್ಚೇದನ ಪಡೆದಿದ್ದಾರೆ. 1978ರಲ್ಲಿ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದ ಅವರು 1988 ರಲ್ಲಿ ದೂರಾಗಿದ್ದರು. ಬಳಿಕ ಅದೇ ವರ್ಷ ನಟಿ ಸಾರಿಕಾ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾರಿಕಾ ಅವರಿಂದಲೂ ಕಮಲ್ ಹಾಸನ್ 2004ರಲ್ಲಿ ವಿಚ್ಚೇದನ ಪಡೆದಿದ್ದಾರೆ.

'ನನ್ನ ಆತ್ಮೀಯ ಸ್ನೇಹಿತ ಸಂಸದ ಬ್ರಿಟ್ಟಾಸ್ ಒಮ್ಮೆ ನನ್ನನ್ನು ಕೇಳಿದರು. ನಾನು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ಎರಡು ಬಾರಿ ಏಕೆ ಮದುವೆಯಾದೆ ಎಂದು ಮತ್ತು ಕುಟುಂಬದ ಖ್ಯಾತಿಗೂ ಮದುವೆಗೂ ಏನು ಸಂಬಂಧ ಎಂದು ನಾನು ಅವರನ್ನು ಕೇಳಿದೆ' ಎಂದು ಅವರು ನೆನಪಿಸಿಕೊಂಡರು.

ರಾಮನಿಗೆ ಒಬ್ಬಳೇ ಹೆಂಡತಿ ಎಂಬ ಉದಾಹರಣೆಯೊಂದಿಗೆ ಬ್ರಿಟ್ಟಾಸ್ ಕೇಳಿದಾಗ ತಾನು ಏನೆಂದು ಉತ್ತರಿಸಿದೆ ಎಂದರೆ, 'ಮೊದಲನೆಯದಾಗಿ, ನಾನು ಯಾವುದೇ ದೇವರನ್ನು ಪ್ರಾರ್ಥಿಸುವುದಿಲ್ಲ. ನಾನು ರಾಮನ ಮಾರ್ಗವನ್ನು ಅನುಸರಿಸುವುದಿಲ್ಲ. ಬಹುಶಃ ನಾನು ಅವನ ತಂದೆಯ (ಮೂರು ಹೆಂಡತಿಯರನ್ನು ಹೊಂದಿದ್ದ ದಶರಥ) ಮಾರ್ಗವನ್ನು ಅನುಸರಿಸುತ್ತೇನೆ' ಎಂದಿದ್ದೆ ಎಂದರು.

ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ 'ಥಗ್ ಲೈಫ್' ಜೂನ್ 5 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT