ಜಯಣ್ಣ, ದರ್ಶನ್, ಮೀನಾ ತೂಗುದೀಪ, ಭೋಗೇಂದ್ರ ಮತ್ತು ದಿನಕರ್ 
ಸಿನಿಮಾ ಸುದ್ದಿ

ನನ್ನಮ್ಮನಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಅತ್ಯುತ್ತಮ ನಿರ್ದೇಶಕ ನಾನು: ದಿನಕರ್ ತೂಗುದೀಪ

ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ದಿನಕರ್ ತೂಗುದೀಪ್, ನನ್ನ ತಾಯಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಮತ್ತು ಅತ್ಯುತ್ತಮ ನಿರ್ದೇಶಕ ನಾನು ಎಂದು ಅವರು ನಗುತ್ತಾ ಹೇಳಿದರು.

ಆರು ವರ್ಷಗಳ ನಂತರ ರಾಯಲ್ ಚಿತ್ರದ ಮೂಲಕ ದಿನಕರ್ ತೂಗುದೀಪ್ ನಿರ್ದೇಶನಕ್ಕೆ ಮರಳಿದ್ದಾರೆ. ಈ ಸಿನಿಮಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಮೈಲಿಗಲ್ಲಾಗಿದೆ. ರಾಯಲ್ ಚಿತ್ರದ ಮೊದಲ ಪ್ರದರ್ಶನವು ಕುಟುಂಬಕ್ಕೆ ಸೀಮಿತವಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ, ಅವರ ತಾಯಿ ಮೀನಾ ತೂಗುದೀಪ, ಅವರ ಸಹೋದರಿ ಸೇರಿದಂತೆ ಕುಟುಂಬಸ್ಥರು ಸೇರಿ ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ದಿನಕರ್ ತೂಗುದೀಪ್, ನನ್ನ ತಾಯಿಗೆ, ವಿಶ್ವದ ಅತ್ಯುತ್ತಮ ನಟ ದರ್ಶನ್, ಮತ್ತು ಅತ್ಯುತ್ತಮ ನಿರ್ದೇಶಕ ನಾನು ಎಂದು ಅವರು ನಗುತ್ತಾ ಹೇಳಿದರು. "ನಮ್ಮ ಮೇಲಿನ ಅವರ ಪ್ರೀತಿ ಎಷ್ಟು ಶುದ್ಧವಾಗಿದೆಯೆಂದರೆ ಅವರು ನಮ್ಮ ನ್ಯೂನತೆಗಳನ್ನು ಎಂದಿಗೂ ನೋಡುವುದಿಲ್ಲ. ನಾವು ಮಾಡುವ ಎಲ್ಲವನ್ನೂ ಅವರು ಮೆಚ್ಚುತ್ತಾರೆ ಎಂದು ದಿನಕರ್ ತಮ್ಮ ತಾಯಿಯನ್ನು ಶ್ಲಾಘಿಸಿದ್ದಾರೆ.

ದಿನಕರ್ ಅವರ ರಾಯಲ್ ಸಿನಿಮಾ ನೋಡಲು ಕುಟುಂಬಸ್ಥರ ಜೊತೆ ಅವರ ಮಗ ಸೂರ್ಯ ಆಗಮಿಸಿದ್ದರು. ಚೊಚ್ಚಲ ಪ್ರದರ್ಶನದ ನಿಜವಾದ ಹೈಲೈಟ್ ಸೂರ್ಯ ಎಂದು ದಿನಕರ್ ಬಹಿರಂಗಪಡಿಸಿದರು. "ಈ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡುತ್ತಿರುವ ನನ್ನ ಮಗ ಸೂರ್ಯ ಅವರ ಕಾರಣದಿಂದಾಗಿ ದರ್ಶನ್ ಈ ಚಿತ್ರವನ್ನು ವೀಕ್ಷಿಸಿದರು. ನಂತರ, ಅವರು, ‘ನಿಮ್ಮ ಮಗ ನಿನಗಿಂತ ಚೆನ್ನಾಗಿ ಮಾಡಿದ್ದಾನೆ ಎಂದು ಹೇಳಿದರು. ನನ್ನ ತಾಯಿ ಮತ್ತು ದರ್ಶನ್ ಸೂರ್ಯನ ಚೊಚ್ಚಲ ಪ್ರವೇಶವನ್ನು ಪರದೆಯ ಮೇಲೆ ನೋಡಿ ತುಂಬಾ ಸಂತೋಷಪಟ್ಟರು ಎಂದು ದಿನಕರ್ ವಿವರಿಸಿದರು.

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದ ಕ್ಲಾಸಿಕ್ ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾವಾಗಿದೆ ಎಂದು ಸಿನಿಮಾ ನೋಡಿದ ದರ್ಶನ್ ತಿಳಿಸಿದ್ದಾರೆ ಎಂದು ದಿನಕರ್ ಹೇಳಿದರು. ದಿನಕರ್ ಮತ್ತೆ ನಿರ್ದೇಶನಕ್ಕೆ ಮರಳಿದ ಸಂಭ್ರಮ ಒಂದೆಡೆಯಾದರೆ ಮೊದಲ ಪ್ರದರ್ಶನವನ್ನು ನನ್ನ ಎಲ್ಲಾ ಕುಟುಂಬಸ್ಥರು ಒಟ್ಟಿಗೆ ಸೇರಿ ವೀಕ್ಷಿಸಿದ್ದು ನನಗೆ ಮತ್ತಷ್ಟು ಸಂತಸ ತಂದಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT