ಯಶ್  
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗ-ಪ್ರೇಕ್ಷಕರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತು; Video

ಸಾಕಷ್ಟು ಮಂದಿ ನನ್ನ ಬಳಿ ಬಂದು ಹೊಸಬರ ಚಿತ್ರಗಳನ್ನು ಲಾಂಚ್ ಮಾಡಿ, ನಮಗೆ ಹರಸಿ ಎಂದು ಕೇಳುತ್ತಿರುತ್ತಾರೆ. ಈವೆಂಟ್ ಮಾಡಿ ಎಂದು ಕೇಳುತ್ತಾರೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗ, ಪ್ರೇಕ್ಷಕರ ಬಗ್ಗೆ ಮನದ ಕಡಲು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಕನ್ನಡ ಸಿನಿಮಾವನ್ನು ಪ್ರೇಕ್ಷಕರು ನೋಡುವುದಿಲ್ಲ, ಪ್ರೋತ್ಸಾಹ ಕೊಡುವುದಿಲ್ಲ ಎಂದು ನಾನು ಕೂಡ ಹಿಂದೆ ಹೇಳುತ್ತಿದ್ದೆ, ಆಮೇಲೆ ಒಂದು ದಿನ ಕುಳಿತುಕೊಂಡು ಸಿನಿಮಾ ನೋಡುವಾಗ ಅನ್ನಿಸಿತು, ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಒಳ್ಳೆ ಕನ್ನಡ ಸಿನಿಮಾವನ್ನು ಕೊಟ್ಟರೆ ಪ್ರೇಕ್ಷಕ ನೋಡದೆ ತಿರಸ್ಕರಿಸುವುದಿಲ್ಲ, ಯಾವತ್ತೂ ಕೈಬಿಟ್ಟಿಲ್ಲ,ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಚಿತ್ರಗಳನ್ನು ಹರಸುತ್ತಾರೆ ಎಂದು ಯಶ್ ನುಡಿದರು.

ಸಾಕಷ್ಟು ಮಂದಿ ನನ್ನ ಬಳಿ ಬಂದು ಹೊಸಬರ ಚಿತ್ರಗಳನ್ನು ಲಾಂಚ್ ಮಾಡಿ, ನಮಗೆ ಹರಸಿ ಎಂದು ಕೇಳುತ್ತಿರುತ್ತಾರೆ. ಈವೆಂಟ್ ಮಾಡಿ ಎಂದು ಕೇಳುತ್ತಾರೆ. ಆದರೆ ನಾನು ನಂಬುವುದು ಈವೆಂಟ್ ಮಾಡುವುದರಿಂದ ಪ್ರಚಾರ ಸಿಗಬಹುದು, ಚಿತ್ರ ನಿಜವಾಗಿ ಗೆಲ್ಲುವುದು ನಾವು ಬರುವುದರಿಂದಲ್ಲ. ಚಿತ್ರಕ್ಕೆ ಮಾಡುವ ಕೆಲಸದಿಂದ, ಸದಭಿರುಚಿಯ ಚಿತ್ರಗಳಿಂದ.

ಚಿತ್ರರಂಗದ ಇಂದಿನ ಕಾಲಕ್ಕೆ ತಕ್ಕಂತೆ ನಾವು ಕೂಡ ಅಪ್ ಗ್ರೇಡ್ ಆಗಬೇಕು, ಕೆಲಸ ಕಲಿತು ದೊಡ್ಡ ಗುರಿ ಇಟ್ಟುಕೊಂಡು ಸ್ವಾಭಿಮಾನ ಇಟ್ಟುಕೊಂಡು ನಾವು ಯಾರಿಗೂ ಕಮ್ಮಿಯಲ್ಲ ಎಂದು ತಲೆತಗ್ಗಿಸದೆ ತಲೆಯೆತ್ತಿ ಕಷ್ಟಪಟ್ಟು ಕೆಲಸ ಮಾಡಿ ಮುಂದುವರಿಯೋಣ.

ಬರೀ ನಟನೆ ಮಾತ್ರ ಸಿನಿಮಾ ಅಲ್ಲ

ಇಂದಿನ ತಲೆಮಾರಿನ ನಟ-ನಟಿಯರು ಸಾಕಷ್ಟು ಕಲಿತುಕೊಂಡು ಚಿತ್ರರಂಗಕ್ಕೆ ಬನ್ನಿ, ಬರೀ ನಟನೆ ಮಾತ್ರ ಸಿನಿಮಾವಲ್ಲ. ವೃತ್ತಿಯನ್ನು ಹೇಗೆ ರೂಪಿಸಿಕೊಳ್ಳಬೇಕು, ಕಲಿಯಬೇಕು, ಬೆಳೆಯಬೇಕು ಟ್ರೆಂಡ್ ಹೇಗಿದೆ ಎಂದು ತಿಳಿದುಕೊಂಡು ಬನ್ನಿ ಎಂದು ಯಶ್ ಕಿವಿಮಾತು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!