ಶಿವಣ್ಣ ಮತ್ತು ಪವನ್ ಕಲ್ಯಾಣ್ 
ಸಿನಿಮಾ ಸುದ್ದಿ

'ಉದಾತ್ತ ಹೃದಯ ಮತ್ತು ಸರಳತೆ': ಜನ್ಮದಿನಕ್ಕೆ ಶುಭ ಕೋರಿದ ಶಿವಣ್ಣಗೆ ಧನ್ಯವಾದ ಹೇಳಿದ ನಟ Pawan Kalyan

ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಜೊತೆ ಕೇಕ್ ಕೇಕ್ ಕತ್ತರಿಸುವ ಮೂಲಕ ನಟ ಶಿವರಾಜ್ ಕುಮಾರ್ ಪವನ್ ಕಲ್ಯಾಣ್ ಅವರ ಜನ್ಮ ದಿನಾಚರಣೆ ಮಾಡಿ ವಿಶೇಷವಾಗಿ ಶುಭ ಹಾರೈಸಿದ್ದರು.

ಬೆಂಗಳೂರು: ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ShivarajKumar)ಗೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಧನ್ಯವಾದ ಅರ್ಪಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ್ದರು. ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಜೊತೆ ಕೇಕ್ ಕೇಕ್ ಕತ್ತರಿಸುವ ಮೂಲಕ ನಟ ಶಿವರಾಜ್ ಕುಮಾರ್ ಪವನ್ ಕಲ್ಯಾಣ್ ಅವರ ಜನ್ಮ ದಿನಾಚರಣೆ ಮಾಡಿ ವಿಶೇಷವಾಗಿ ಶುಭ ಹಾರೈಸಿದ್ದರು.

ಅಲ್ಲದೆ ಈ ಕುರಿತು ಟ್ವೀಟ್ ಮಾಡಿರುವ ಶಿವಣ್ಣ, 'ನಾನು ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸುವುದು ಅವರಿಗೆ ಸಂತೋಷವನ್ನು ನೀಡಿದರೆ, ನಾನು ಅದನ್ನು ಹಲವು ಬಾರಿ ಮಾಡುತ್ತೇನೆ. ನಿಮ್ಮ ಮೇಲಿನ ಅವರ ಪ್ರೀತಿ ಯಾವಾಗಲೂ ನಿಮ್ಮ ಶಕ್ತಿಯಾಗಿರುತ್ತದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಪವನ್ ಕಲ್ಯಾಣ್ ಅವರೇ. ಬೆಳೆಯುತ್ತಲೇ ಇರಿ, ಸ್ಫೂರ್ತಿ ನೀಡುತ್ತಾ ಇರಿ, ದೇವರು ನಿಮ್ಮನ್ನು ಆಶೀರ್ವದಿಸಲಿ! ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ನಟ ಪವನ್ ಕಲ್ಯಾಣ್ ಕೂಡ ಪ್ರತಿಕ್ರಿಯೆ ನೀಡಿ 'ಉದಾತ್ತ ಹೃದಯ ಮತ್ತು ಸರಳತೆ' ಎಂದು ಪ್ರತಿಕ್ರಿಯಿಸಿದ್ದರು.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ನಟ ಪವನ್ ಕಲ್ಯಾಣ್, 'ಕರುನಾಡ ಚಕ್ರವರ್ತಿ ಶ್ರೀ ಶಿವರಾಜ್ ಕುಮಾರ್, ನಮ್ಮ 'ಗಂಧದ ಗುಡಿ' ನಾಯಕ ಮತ್ತು ನನ್ನ ನೆಚ್ಚಿನ ಕನ್ನಡ ಐಕಾನ್ ಡಾ. ರಾಜ್‌ಕುಮಾರ್ ಅವರು ಅವರ ಪುತ್ರ. ಅವರು ನನ್ನ ಅಭಿಮಾನಿಗಳೊಂದಿಗೆ ನನ್ನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಅಪಾರ ಸಂತೋಷವನ್ನುಂಟು ಮಾಡಿದೆ' ಎಂದಿದ್ದಾರೆ.

ಅಂತೆಯೇ 'ಈ ನಡೆ ಅವರ ಉದಾತ್ತ ಹೃದಯ ಮತ್ತು ಸರಳತೆಯನ್ನು ಪ್ರತಿಬಿಂಬಿಸುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ಸಂಪೂರ್ಣ ಆರೋಗ್ಯ ಮತ್ತು ಸಂತೋಷವನ್ನು ನೀಡಿ, ಅವರ ಗಮನಾರ್ಹ ಪ್ರದರ್ಶನಗಳಿಂದ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ಮತ್ತು ಮನರಂಜನೆಯನ್ನು ನೀಡುವುದನ್ನು ಮುಂದುವರಿಸಬೇಕೆಂದು ನಾನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ' ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಅಪ್ಪಿತಪ್ಪಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟಕ್ಕೆ ಸೇರಲ್ಲ: Congress ಶಾಸಕ ಕೆ.ಎನ್ ರಾಜಣ್ಣ

KPS ಶಾಲೆ ತೆರೆಯಲು ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಆರೋಪ: 'ಕನ್ನಡ ನನ್ನ ರಕ್ತ'ದಲ್ಲಿದೆ ಎಂದ ಶಿಕ್ಷಣ ಸಚಿವ!

SCROLL FOR NEXT