ಮಹಾವತಾರ ನರಸಿಂಹ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಅನಿಮೇಷನ್ ಬ್ಲಾಕ್‌ಬಸ್ಟರ್ 'ಮಹಾವತಾರ ನರಸಿಂಹ' ಒಟಿಟಿಯಲ್ಲಿ ಬಿಡುಗಡೆ

ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಆರಂಭಿಕ ವಾರಾಂತ್ಯದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.

ಇತ್ತೀಚಿನ ಅನಿಮೇಷನ್ ಬ್ಲಾಕ್‌ಬಸ್ಟರ್ ಮಹಾವತಾರ ನರಸಿಂಹ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರ ಶುಕ್ರವಾರ ಮಧ್ಯಾಹ್ನ 12.30 ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ, ವಿಷ್ಣುವಿನ ಕಟ್ಟಾ ಭಕ್ತ ಮತ್ತು ಅವನ ತಂದೆ ಹಿರಣ್ಯಕಶಿಪುಂ- ಒಬ್ಬ ಪರಾಕ್ರಮಿ ರಾಜ ಮತ್ತು ಕಟ್ಟಾ ನಾಸ್ತಿಕನ ನಡುವಿನ ಕಥೆಯಾಗಿದೆ. ವಿಷ್ಣುವಿನ ಇರುವಿಕೆ ಬಗ್ಗೆ ತನ್ನ ಮಗನ ಅಚಲ ನಂಬಿಕೆಯಿಂದ ಕೋಪಗೊಂಡ ತಂದೆಯ ಕಥೆಯನ್ನು ಒಳಗೊಂಡಿದೆ.

ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಆರಂಭಿಕ ವಾರಾಂತ್ಯದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸಿನ ನಂತರ, ಈ ಚಿತ್ರವು ನಂತರ ವಿದೇಶಗಳಲ್ಲಿಯೂ ಬಿಡುಗಡೆಯಾಯಿತು. ಆಗಸ್ಟ್‌ನಲ್ಲಿ, ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತು. ಅನಿಮೇಷನ್ ಚಿತ್ರವೊಂದು ಅಧಿಕ ಗಳಿಕೆ ಕಂಡ ಚಿತ್ರವಾಯಿತು.

ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ್ದು, ಕ್ಲೀಮ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ್ದಾರೆ. ಈ ಚಿತ್ರವು ಸ್ಯಾಮ್ ಸಿಎಸ್ ಅವರ ಸಂಗೀತ ಸಂಯೋಜನೆ ಹೊಂದಿದ್ದು, ಚಿತ್ರಕಥೆಯನ್ನು ಜಯಪೂರ್ಣ ದಾಸ್ ಮತ್ತು ರುದ್ರ ಪ್ರತಾಪ್ ಘೋಷ್ ಬರೆದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ತನ್ನ ಮಹತ್ವಾಕಾಂಕ್ಷೆಯ ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂಬ ಪ್ರಮುಖ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಹಿಂದೂ ಪುರಾಣದ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಆಧರಿಸಿದ ಅನಿಮೇಟೆಡ್ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ. ಈ ಸರಣಿಯ ಮೊದಲ ಚಿತ್ರ ಇದೀಗ ಬಿಡುಗಡೆಯಾಗಿದ್ದು, ಉಳಿದ ಚಿತ್ರಗಳು 2025 ಮತ್ತು 2037ರ ನಡುವೆ ಬಿಡುಗಡೆ ಮಾಡಲು ಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ, 32 ಮಂದಿ ಗಾಯ, ಭಯೋತ್ಪಾದಕ ಕೃತ್ಯವೇ? ಪೊಲೀಸರು ಹೇಳುವುದೇನು-Video

ಬಿಹಾರದಲ್ಲಿ ಹೀನಾಯ ಸೋಲು: ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ, ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಚರ್ಚೆ

ಬಿಹಾರ ವಿಧಾನಸಭೆ ಚುನಾವಣೆ: NDA ಜನರಿಗೆ ಲಂಚ ನೀಡಿ ಮತಗಳ ಖರೀದಿ- 'ಜನ್ ಸುರಾಜ್' ಪಕ್ಷದ ಮೊದಲ ಪ್ರತಿಕ್ರಿಯೆ!

ಬಿಹಾರ ಚುನಾವಣೆಯಲ್ಲಿ NDA ಗೆಲುವು ECI ಪ್ರಾಯೋಜಿತ 'ಹಗರಣ': ಸಾಮ್ನಾ ಸಂಪಾದಕೀಯ

ದೆಹಲಿ ಸ್ಫೋಟ ತನಿಖೆ: ಉಗ್ರರೊಂದಿಗೆ ನಂಟು; ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ವೈದ್ಯನ ಬಂಧನ

SCROLL FOR NEXT