ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ  
ಸಿನಿಮಾ ಸುದ್ದಿ

'ನಾವು ಒಟ್ಟಿಗೆ ಅತ್ಯುತ್ತಮ ಜೀವನ ಕಟ್ಟೋಣ' : ಮದುವೆ ಫೋಟೋ ಜೊತೆಗೆ ವೈರಲ್ ಆಗಿದೆ ರಶ್ಮಿಕಾ-ವಿಜಯ್ ಸುಂದರ ನುಡಿಮುತ್ತುಗಳು...

ಮದುವೆ ನಂತರ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಬರೆದಿರುವ ಸಾಲುಗಳು ಸುದ್ದಿಯಾಗಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ವೈಭವೋಪೇತವಾಗಿ ನೆರವೇರಿದೆ. ಅಭಿಮಾನಿಗಳು ಅವರ ಮದುವೆ ಫೋಟೋಗಳನ್ನು ನೋಡಿ ಸಂತಸಪಟ್ಟಿದ್ದಾರೆ.

ಮದುವೆ ನಂತರ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಬರೆದಿರುವ ಸಾಲುಗಳು ಸುದ್ದಿಯಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರಶಂಸಿಸಿ ಬರೆದ ನುಡಿಗಳು ಓದುಗರ ಗಮನ ಸೆಳೆದಿದ್ದು ಅನೇಕರು ಅದನ್ನು ಹಂಚಿಕೊಂಡು ಜೋಡಿ ಸುಖವಾಗಿ ಬಾಳಲಿ ಎಂದು ಹರಸಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: ಹಾಯ್ ನನ್ನ ಪ್ರಿಯರೇ, ನಿಮಗೆ ಪರಿಚಯಿಸುತ್ತಿದ್ದೇನೆ — “ನನ್ನ ಪತಿಯನ್ನು ವಿಜಯ್ ದೇವರಕೊಂಡ!!

ನಿಜವಾದ ಪ್ರೀತಿ ಎಂದರೆ ಏನು ಎಂಬುದನ್ನು ನನಗೆ ತಿಳಿಸಿದ ವ್ಯಕ್ತಿ, ಮನಶ್ಶಾಂತಿ ಎಂದರೆ ಏನು ಎಂಬುದನ್ನು ತೋರಿಸಿದ ವ್ಯಕ್ತಿ! , ದೊಡ್ಡ ಕನಸು ಕಾಣುವುದು ಸಂಪೂರ್ಣವಾಗಿ ಸರಿ ಎಂದು ಪ್ರತಿದಿನ ಹೇಳಿದ ವ್ಯಕ್ತಿ, ನಾನು ಊಹಿಸಿದುದಕ್ಕಿಂತಲೂ ಹೆಚ್ಚಾಗಿ ಸಾಧಿಸಲು ನಾನು ಸಮರ್ಥಳೇ ಎಂದು ನಿರಂತರವಾಗಿ ನಂಬಿಕೆ ತುಂಬಿದ ವ್ಯಕ್ತಿ!

ಯಾರೂ ನೋಡುತ್ತಿಲ್ಲವೆಂಬಂತೆ ನಾನು ಕುಣಿಯುವುದನ್ನು ಎಂದಿಗೂ ತಡೆಯದ ವ್ಯಕ್ತಿ, ಸ್ನೇಹಿತರೊಂದಿಗೆ ಪ್ರವಾಸ ಮಾಡುವುದು ಜೀವನದ ಅತ್ಯುತ್ತಮ ಅನುಭವ ಎಂದು ತೋರಿಸಿದ ವ್ಯಕ್ತಿ — ನಂಬಿ, ಈ ವ್ಯಕ್ತಿಯ ಬಗ್ಗೆ ನಾನು ಒಂದು ಪುಸ್ತಕವೇ ಬರೆಯಬಹುದು!

ನಾನು ಯಾವಾಗಲೂ ಕನಸು ಕಂಡ ಮಹಿಳೆಯಾಗಲು ಸಾಧ್ಯವಾದದ್ದು — ಇಂದು ನಾನು ಆಗಿರುವುದಕ್ಕೆ ನೀನೇ ಕಾರಣ! ನಾನು ನಿಜವಾಗಿಯೂ ಧನ್ಯಳಾಗಿದ್ದೇನೆ! ವಿಜ್ಜು, ನಿನ್ನ ಬಗ್ಗೆ ನನಗಿರುವ ಭಾವನೆಗಳನ್ನು ವರ್ಣಿಸಲು ನನಗೆ ಪದಗಳು ಯಾವಾಗಲೂ ಸಾಲುತ್ತಿಲ್ಲ!! ಇದನ್ನು ನಾನು ಸದಾ ನಿನಗೆ ಹೇಳಿದ್ದೇನೆ!!

ಆದರೆ ಏಕಾಏಕಿ ನನ್ನ ಎಲ್ಲಾ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಆನಂದ — ನನ್ನ ಜೀವನವೇ — ಇವೆಲ್ಲವೂ ಈಗ ಹೆಚ್ಚು ಅರ್ಥಪೂರ್ಣವಾಗಿವೆ… ಏಕೆಂದರೆ ನನ್ನ ಜೊತೆ ನೀನಿದ್ದೀಯ — ಇವೆಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಾ, ಅದರಲ್ಲಿ ಅತಿ ದೊಡ್ಡ ಭಾಗವಾಗಿರುವೆ!, ನಿನ್ನ ಪತ್ನಿಯಾಗಿರುವುದಕ್ಕೆ ನಾನು ತುಂಬಾ ಉತ್ಸುಕಳಾಗಿದ್ದೇನೆ! ನಾವು ಒಟ್ಟಿಗೆ ಅತ್ಯುತ್ತಮ ಜೀವನವನ್ನು ಕಟ್ಟೋಣ ಎಂದು ಬರೆದಿದ್ದಾರೆ.

ಇನ್ನು ವಿಜಯ್ ದೇವರಕೊಂಡ ಸಹ ರಶ್ಮಿಕಾ ಬಗ್ಗೆ ಪ್ರೀತಿಯ ಸಾಲುಗಳನ್ನು ಹೀಗೆ ಅಕ್ಷರರೂಪಕ್ಕೆ ಇಳಿಸಿದ್ದಾರೆ: ಒಂದು ದಿನ, ನಾನು ಅವಳನ್ನು ಮಿಸ್ ಮಾಡಿಕೊಂಡೆ, ಎಷ್ಟು ಮಿಸ್ ಮಾಡಿಕೊಂಡೆ ಎಂದರೆ, ಅವಳು ಹತ್ತಿರ ಇದ್ದಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎಂಬಷ್ಟು ಆಳವಾಗಿ ಮಿಸ್ ಮಾಡಿಕೊಂಡಿದ್ದೆ. ಅವಳು ನನ್ನ ಎದುರು ಕುಳಿತಿದ್ದರೆ ಊಟ ಇನ್ನಷ್ಟು ಸಂಪೂರ್ಣವಾಗಿರುತ್ತಿತ್ತು ಅನ್ನಿಸುತ್ತಿತ್ತು. ಅವಳು ಜೊತೆಗೆ ವರ್ಕೌಟ್ ಮಾಡುತ್ತಿದ್ದರೆ ಅದು ಶಿಕ್ಷೆಯಂತೆ ಅನ್ನಿಸದೆ, ಹೆಚ್ಚು ಖುಷಿಯಾಗಿ ಇರ್ತಿತ್ತು ಅನ್ನಿಸಿತು. ನೆಮ್ಮದಿ, ಆ ಶಾಂತಿ ಅನುಭವಿಸಲು ಅವಳು ಬೇಕು ಅನ್ನಿಸಿತು, ಅದು ನನಗೆ ಸಿಕ್ಕಿದೆ, ನನ್ನ ಅತ್ಯುತ್ತಮ ಸ್ನೇಹಿತೆಯನ್ನು ಪತ್ನಿಯನ್ನಾಗಿ ಮಾಡಿಕೊಂಡೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ಟೀಮ್ ಇಂಡಿಯಾದ ಸ್ಟಾರ್ ಫಿನಿಷರ್ ರಿಂಕು ಸಿಂಗ್ ತಂದೆ ಖಾನ್‌ಚಂದ್‌ ನಿಧನ

ನಮ್ಮ ತಾಳ್ಮೆಯ ಮಿತಿ ಮೀರಿದೆ, ಬಹಿರಂಗ ಯುದ್ಧ ಆರಂಭ: ಅಫ್ಘಾನ್ ಮಿಲಿಟರಿ ದಾಳಿಗೆ ಪಾಕ್‌ನಿಂದ ಪ್ರತ್ಯುತ್ತರ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕುಣಿಗಲ್ ನಿವಾಸಿಗಳ ದಾರುಣ ಸಾವು

SCROLL FOR NEXT