ಧನುಷ್-ಮೃಣಾಲ್ ಠಾಕೂರ್  
ಸಿನಿಮಾ ಸುದ್ದಿ

ತಮಿಳು ನಟ ಧನುಷ್ ಜೊತೆಗೆ ಮದುವೆ ವದಂತಿ; ರಹಸ್ಯ ಪೋಸ್ಟ್ ಹಂಚಿಕೊಂಡ ನಟಿ ಮೃಣಾಲ್ ಠಾಕೂರ್!

ಮೃಣಾಲ್ ಮತ್ತು ಧನುಷ್ ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈವರೆಗೂ ಅವರಿಬ್ಬರೂ ಈ ವರದಿಗಳ ಕುರಿತು ದೃಢಪಡಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ.

ನವದೆಹಲಿ: ನಟ ಧನುಷ್ ಜೊತೆಗಿನ ವಿವಾಹದ ವದಂತಿಗಳು ಹರಿದಾಡುತ್ತಿರುವ ನಡುವೆ, ಮೃಣಾಲ್ ಠಾಕೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಹಸ್ಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ಸೂರ್ಯಾಸ್ತ ಮತ್ತು ಸಮುದ್ರದ ತಂಗಾಳಿಯನ್ನು ಆನಂದಿಸುತ್ತಾ ದೋಣಿಯಲ್ಲಿ ಕುಳಿತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 'ಗ್ರೌಂಡೆಡ್, ಹೊಳೆಯುವ ಮತ್ತು ಅಲುಗಾಡದ!' ಎಂದು ಮೃಣಾಲ್ ಶೀರ್ಷಿಕೆ ನೀಡಿದ್ದಾರೆ.

ಮೃಣಾಲ್ ಮತ್ತು ಧನುಷ್ ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈವರೆಗೂ ಅವರಿಬ್ಬರೂ ಈ ವರದಿಗಳ ಕುರಿತು ದೃಢಪಡಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ.

ಇತ್ತೀಚೆಗೆ, 2026ರ ಫೆಬ್ರುವರಿಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ವರದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ನಂತರ ಈ ಊಹಾಪೋಹಗಳು ಹೆಚ್ಚಾದವು.

ಈ ಮದುವೆ ಕುರಿತಾದ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಟನ ಆಪ್ತ ಮೂಲವೊಂದು ಸ್ಪಷ್ಟಪಡಿಸಿದೆ. 'ಮುಂದಿನ ತಿಂಗಳು ಮೃಣಾಲ್ ಮದುವೆಯಾಗುತ್ತಿಲ್ಲ. ಇದು ಗಾಳಿಸುದ್ದಿ' ಎಂದು ಮೂಲಗಳು HTCity ಗೆ ತಿಳಿಸಿವೆ.

ಮೂಲಗಳ ಪ್ರಕಾರ, ಮೃಣಾಲ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮೃಣಾಲ್ ನಟನೆಯ ಚಿತ್ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ ಮತ್ತು ನಂತರ ಮಾರ್ಚ್‌ನಲ್ಲಿ ಮತ್ತೊಂದು ತೆಲುಗು ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ ಮದುವೆಯನ್ನು ಯೋಜಿಸುವುದರಲ್ಲಿ ಅರ್ಥವಿಲ್ಲ. ಈ ಸಮಯದಲ್ಲಿ ಅವರ ಗಮನವು ಸಂಪೂರ್ಣವಾಗಿ ಕೆಲಸದ ಮೇಲೆ ಇದೆ' ಎಂದು ಮೂಲಗಳು ತಿಳಿಸಿವೆ.

2025ರ ಆಗಸ್ಟ್‌ನಲ್ಲಿ ಮೃಣಾಲ್ ಮತ್ತು ಧನುಷ್ ನಡುವಿನ ಡೇಟಿಂಗ್ ವದಂತಿಗಳು ಹಬ್ಬಿದವು. ಮೃಣಾಲ್ ತನ್ನ 'ಸನ್ ಆಫ್ ಸರ್ದಾರ್ 2' ಚಿತ್ರದ ಫಸ್ಟ್ ಷೋ ವೇಳೆ ತಮಿಳು ನಟ ಧನುಷ್ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದು ಕಂಡುಬಂದ ನಂತರ, ಅವರಿಬ್ಬರು ಡೇಟಿಂಗ್ ಮಾಡುತ್ತಿರಬಹುದು ಎಂಬ ವದಂತಿಗಳು ಕೇಳಿಬಂದವು. ಆ ಕ್ಷಣದ ವಿಡಿಯೋ ವೈರಲ್ ಆಗಿತ್ತು. ಇದಕ್ಕೂ ಮೊದಲು, ಧನುಷ್ ಅವರ ಚಿತ್ರ ತೇರೆ ಇಷ್ಕ್ ಮೇ ಚಿತ್ರದ ರ‍್ಯಾಪ್ ಪಾರ್ಟಿಯಲ್ಲಿ ಮೃಣಾಲ್ ಉಪಸ್ಥಿತಿಯು ಊಹಾಪೋಹಗಳಿಗೆ ಕಾರಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗೋಲ್ಡನ್ ಟೆಂಪಲ್‌ನ ಕೊಳದಲ್ಲಿ ಕೈ, ಕಾಲು ತೊಳೆದು ಬಾಯಿ ಮುಕ್ಕಳಿಸಿ ಅಪವಿತ್ರಗೊಳಿಸಿದ Muslim ವ್ಯಕ್ತಿ, Video!

Guillain-Barré Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ, ಮೂವರ ಬಂಧನ!

ಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿಗಳ ಆತಿಥ್ಯಕ್ಕೆ ಸಿದ್ಧವಾದ ಕುಂದಾಪುರ!

SCROLL FOR NEXT