ನಟಿ ಶ್ರುತಿ ಹಾಸನ್ 
ಸಿನಿಮಾ ಸುದ್ದಿ

'ಪುರುಷರಿಗೂ ಪಿರಿಯಡ್ಸ್ ಆಗಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ': ರಶ್ಮಿಕಾ ನಂತರ ನಟಿ ಶ್ರುತಿ ಹಾಸನ್ ಬೋಲ್ಡ್ ಮಾತು!

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಸಹ ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ನೋವನ್ನು ಅರ್ಥಮಾಡಿಕೊಳ್ಳಲು ಗಂಡಸರು ಒಮ್ಮೆಯಾದರೂ ಪೀರಿಯಡ್ಸ್ ನೋವನ್ನು ಅನುಭವಿಸಬೇಕು ಎಂದು ಹೇಳಿದ್ದರು.

ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಎಂದಿಗೂ ಹಿಂಜರಿಯದ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಅವರು ಈಗ ಪಿರಿಯಡ್ಸ್, PCOS ಹಾಗೂ ಸಿನಿಮಾ ಶೂಟಿಂಗ್ ವೇಳೆ ತಾವು ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಸಹ ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ನೋವನ್ನು ಅರ್ಥಮಾಡಿಕೊಳ್ಳಲು ಗಂಡಸರು ಒಮ್ಮೆಯಾದರೂ ಪೀರಿಯಡ್ಸ್ ನೋವನ್ನು ಅನುಭವಿಸಬೇಕು ಎಂದು ಹೇಳಿದ್ದರು.

ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶ್ರುತಿ ಹಾಸನ್ ಅವರು, ಮುಟ್ಟಿನ ನೋವಿಗೆ ಜನ ಹೆಚ್ಚಿನ ಮಹತ್ವ ನೀಡುವುದಿಲ್ಲ. ಆದರೆ ಪುರುಷರಿಗೂ ಮುಟ್ಟು ಆಗಬೇಕೆಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.

ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳ ಬಗ್ಗೆ ಚರ್ಚಿಸುವಾಗ ನಟಿ ಶ್ರುತಿ ಹಾಸನ್ ಹೀಗೆ ಹೇಳಿದ್ದು, "ಇದಕ್ಕೆ ಒಂದೇ ಒಂದು ಪರಿಹಾರವಿದೆ; ಪುರುಷರಿಗೂ ಮುಟ್ಟು ಆಗಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಆಗ ನಮ್ಮ ಉದ್ಯೋಗ ಒಪ್ಪಂದಗಳಲ್ಲಿ 'ಪಿರಿಯಡ್ ಹಾಲಿಡೇ'(ಮುಟ್ಟಿನ ರಜೆ) ಸೇರಿಸಬಹುದು ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

"ಇದಕ್ಕೆ ಸಹಮತ ವ್ಯಕ್ತಪಡಿಸಿದ ಸೋಹಾ, ಪುರುಷರಿಗೂ ಪಿರಿಯಡ್ಸ್ ಬಂದರೆ ಆ ತಿಂಗಳು ಯಾರಿಗೆ ಹೆಚ್ಚು ರಕ್ತಸ್ರಾವವಾಯಿತು, ಯಾರ ಟ್ಯಾಂಪೂನ್ ದೊಡ್ಡದಿದೆ ಎಂಬುದರ ಬಗ್ಗೆಯೂ ಅವರು ಪರಸ್ಪರ ಸ್ಪರ್ಧೆ ಮಾಡಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.

PCOS ನೋವು ಹಂಚಿಕೊಂಡ ನಟಿ

ನನಗೆ PCOS(Polycystic Ovary Syndrome) ಸಮಸ್ಯೆ ಇರುವುದರಿಂದ ಪಿರಿಯಡ್ಸ್ ವೇಳೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಶ್ರುತಿ ಹಾಸನ್ ಅವರಿಗೆ ತಿಳಿಸಿದ್ದಾರೆ. ಆದರೆ ವೃತ್ತಿಜೀವನದ ಆರಂಭದಲ್ಲಿ ಶೂಟಿಂಗ್ ಸೆಟ್‌ನಲ್ಲಿ ಈ ವಿಚಾರವನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ.

ಇದು ಕೇವಲ ಮುಜುಗರ ಅಥವಾ ನಿಷೇಧದ ವಿಚಾರವಾಗಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಪಿರಿಯಡ್ಸ್ ಬಗ್ಗೆ ಹೇಳಿದರೆ ಅದನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ತಮ್ಮಲ್ಲಿತ್ತು ಎಂದು ಅವರು ವಿವರಿಸಿದ್ದಾರೆ. ಆದರೆ ಕಾಲ ಕಳೆದಂತೆ ತಮ್ಮ ಸಮಸ್ಯೆಯನ್ನು ಸಹೋದ್ಯೋಗಿಗಳು ಮತ್ತು ನಿರ್ದೇಶಕರೊಂದಿಗೆ ಹಂಚಿಕೊಳ್ಳುವುದರಿಂದ ಕೆಲಸವನ್ನು ಉತ್ತಮ ರೀತಿಯಲ್ಲಿ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಂಡಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll, ಕ್ಷಣಕ್ಕೊಂದು ತಿರುವು: ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಟೂರಿಂಗ್ ಟಾಕೀಸ್ ಟೀಕೆ: ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ; ಅಶೋಕಣ್ಣ ಲೇಜಿ, ಯೂಸ್ ಲೆಸ್ ಸ್ಟಾರ್! ಸಚಿವ ಹೆಚ್. ಸಿ. ಬಾಲಕೃಷ್ಣ ತಿರುಗೇಟು

ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ; ಹೂಡಿಕೆದಾರರಿಗೆ ರೆಡ್ ಕಾರ್ಪೆಟ್

Deepika Padukone-ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನನ; ಪೋಸ್ಟ್ ಮೂಲಕ ಸಂತಸ!

ಟಿ ನರಸೀಪುರ ಗಣೇಶ ಶೋಭಾಯಾತ್ರೆ: ಸಿಡಿದೆದ್ದ ಕಾಂಗ್ರೆಸ್; ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಮೈಸೂರು SPಗೆ ದೂರು