ಸುನಿಲ್ ಗವಾಸ್ಕರ್ ಮತ್ತು ಚಾಹಲ್ (ಸಂಗ್ರಹ ಚಿತ್ರ) 
ಕ್ರಿಕೆಟ್

ಚಾಹಲ್ ಐಪಿಎಲ್ ಸೀಸನ್ 9ನ ಅತ್ಯುತ್ತಮ ಪ್ರತಿಭೆ: ಗವಾಸ್ಕರ್

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಸೀಸನ್ 9ರ ಅತ್ಯುತ್ತಮ ಅನ್ವೇಷಣೆ ಎಂದರೆ ಅದು ರಾಯಲ್ ಚಾಲೆಂಜರ್ಸ್ ತಂಡ ಯಜುವೇಂದ್ರ ಚಾಹಲ್ ಎಂದು ಭಾರತ ತಂಡ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಸೀಸನ್ 9ರ ಅತ್ಯುತ್ತಮ ಅನ್ವೇಷಣೆ ಎಂದರೆ ಅದು ರಾಯಲ್ ಚಾಲೆಂಜರ್ಸ್ ತಂಡ ಯಜುವೇಂದ್ರ ಚಾಹಲ್ ಎಂದು ಭಾರತ ತಂಡ  ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ ಸೀಸನ್ 9ರ ಪ್ರತಿಭಾನ್ವೇಷಣೆ ಕುರಿತು ಮಾತನಾಡಿದ ಸುನಿಲ್ ಗವಾಸ್ಕರ್, ಯಾವ ಕ್ರಿಕೆಟಿಗನಿಗೆ ಪ್ರತಿಭೆಯೊಂದಿಗೆ ಕ್ರೀಡಾಮನೋಧರ್ಮ ಕೂಡ ಇರುತ್ತದೆಯೋ ಆತ ಖಂಡಿತ  ಉತ್ತಮ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಾನೆ. ಚಾಹಲ್ ರಲ್ಲಿ ಅಂತಹ ಪ್ರತಿಭೆ ಖಂಡಿತಾ ಇದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

"ನನ್ನ ಪ್ರಕಾರ ಯಾರಲ್ಲಿ ಪ್ರತಿಭೆಯೊಂದಿಗೆ ಕ್ರೀಡಾ ಮನೋಧರ್ಮವಿರುತ್ತದೆಯೋ ಆತ ಖಂಡಿತಾ ಉತ್ತಮ ಕ್ರೀಡಾ ಪ್ರತಿಭೆಯಾಗಿ ರೂಪುಗೊಳ್ಳುತ್ತಾನೆ. ಆ ಪ್ರಕಾರ ಯಜುವೇಂದ್ರ ಚಾಹಲ್,  ರಿಷಬ್ ಪಂತ್ ಹಾಗೂ ಕೃಣಾಲ್ ಪಾಂಡ್ಯ ನನ್ನ ಟಾಪ್ 3 ಆಟಗಾರರಾಗಿದ್ದಾರೆ. ಈ ಮೂವರಲ್ಲಿ ಚಾಹಲ್ ರನ್ನು ನಾನು ಅಗ್ರ ಸ್ಥಾನದಲ್ಲಿ ನಿಲ್ಲಿಸುತ್ತೇನೆ. ಬ್ಯಾಟ್ಸಮನ್ ದೊಡ್ಡ ಹೊಡೆತಕ್ಕೆ ಕೈ  ಹಾಕಿದರೆ ಖಂಡಿತಾ ಚಾಹಲ್ ಎದೆಗುಂದುವುದಿಲ್ಲ. ನಂತರದ ಎಸೆತದಲ್ಲೇ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸುತ್ತಾರೆ. ಐಪಿಎಲ್ ಸೀಸನ್ 9 ರಲ್ಲಿ ನಾನು ಇಂತಹ ಹಲವು ಸಂದರ್ಭಗಳನ್ನು  ವೀಕ್ಷಿಸಿದ್ದೇನೆ. ಇದು ಚಾಹಲ್ ರಲ್ಲಿ ನನಗಿಷ್ಟವಾದ ಗುಣ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಪಾಂಡ್ಯಾ ಮತ್ತು ಪಂತ್ ಬಗ್ಗೆ ಮಾತನಾಡಿದ ಗವಾಸ್ಕರ್, ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇವರಲ್ಲಿ ಒಂದಷ್ಟು ವಿಭಾಗಗಳಲ್ಲಿ  ಸುಧಾರಣೆಯಾಗಬೇಕಿದೆ. ಉತ್ತಮ ಸ್ಥಿರ ಪ್ರದರ್ಶನ ನೀಡಿದ್ದರಲ್ಲೇ ಚಾಹಲ್ ಮುಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗವಾಸ್ಕರ್ ಐಪಿಎಲ್-9 XIನಲ್ಲಿ ಚಾಹಲ್ ಗೆ ಸ್ಥಾನ

ಇನ್ನು ಐಪಿಎಲ್-9 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ 11 ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಗವಾಸ್ಕರ್ ತಂಡದಲ್ಲಿ ಚಾಹಲ್ ರಿಗೆ ಸ್ಥಾನ ನೀಡಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ,  ಮಹೇಂದ್ರ ಸಿಂಗ್ ಧೋನಿ, ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್, ಮುಸ್ತಫಿಜುರ್, ಆಶೀಶ್ ನೆಹ್ರಾ, ಪುಣೆ ತಂಡ ಅಜಿಂಕ್ಯಾ ರಹಾನೆ, ಆಸಿಬಿಯ  ಎಬಿಡಿವಿಲಿಯರ್ಸ್ ಮತ್ತು ಕೋಲ್ಕತಾದ ಯೂಸುಫ್ ಫಠಾಣ್, ಆಂಡ್ರೆ ರಸೆಲ್ ಗವಾಸ್ಕರ್ XI ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT