ಡರೇನ್ ಬ್ರಾವೋ (ಸಂಗ್ರಹ ಚಿತ್ರ) 
ಕ್ರಿಕೆಟ್

ಅಧ್ಯಕ್ಷರನ್ನು ಈಡಿಯಟ್ ಎಂದ ಡರೇನ್ ಬ್ರಾವೋ ವಿಂಡೀಸ್ ತಂಡದಿಂದ ಔಟ್!

ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಮಂಡಳಿ ಅಧ್ಯಕ್ಷರ ವಿರುದ್ಧ ಈಡಿಯಟ್ ಎಂದು ನಿಂದನೆ ಮಾಡಿದ್ದ ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಅವರನ್ನು ರಾಷ್ಟ್ರೀಯ ಏಕದಿನ ತಂಡದಿಂದ ಕೈ ಬಿಡಲಾಗಿದೆ..

ಸೆಂಟ್ ಜಾನ್ಸ್: ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಮಂಡಳಿ ಅಧ್ಯಕ್ಷರ ವಿರುದ್ಧ ಈಡಿಯಟ್ ಎಂದು ನಿಂದನೆ ಮಾಡಿದ್ದ ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಅವರನ್ನು ರಾಷ್ಟ್ರೀಯ ಏಕದಿನ ತಂಡದಿಂದ ಕೈ ಬಿಡಲಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರ ಗುತ್ತಿಗೆ ವಿಚಾರ ತಾರಕಕ್ಕೇರಿದ್ದು, ಆಟಗಾರರು ಮತ್ತು ಮಂಡಳಿ ವಿರುದ್ಧ ವಾಕ್ಸಮರ ಮುಂದುವರೆದಿದೆ. ಟಿ20 ವಿಶ್ವಕಪ್ ಬಳಿಕ ಜಗಜ್ಜಾಹಿರಾಗಿದ್ದ ಈ ವಿಚಾರ ನಿನ್ನೆ ಮತ್ತೊಂದು ಹಂತ ತಲುಪಿದ್ದು,  ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಮಂಡಳಿ ಅಧ್ಯಕ್ಷ ಕಮೆರಾನ್ ರನ್ನು ಈಡಿಯಟ್ ಎಂದು ನಿಂದಿಸುವ ಮೂಲಕ ದಂಡನೆಗೆ ಒಳಗಾಗಿದ್ದಾರೆ. ಮುಂಬರುವ ವಿಂಡೀಸ್ ತಂಡದ ಏಕದಿನ ಸರಣಿಗೆ ಬ್ರಾವೋ ಅವರನ್ನು ಕೈ  ಬಿಡಲಾಗಿದ್ದು, ಅವರ ಬದಲಿಗೆ ಜೇಸನ್ ಮಹಮದ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಇತ್ತೀಚೆಗೆ ನಡೆದ ಟಿವಿ ಸಂದರ್ಶನವೊಂದರಲ್ಲಿ ಆಟಗಾರರ ಗುತ್ತಿಗೆ ವಿಚಾರ ಸಂಬಂಧ ಮಾತನಾಡಿದ್ದ ವಿಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕೆಮರಾನ್ ಅವರು, ಇತ್ತೀಚೆಗಿನ ಸರಣಿಗಳಲ್ಲಿ ಡರೇನ್ ಬ್ರಾವೋ ಅವರ ಬ್ಯಾಟಿಂಗ್  ಕುಸಿದಿದ್ದು, ಹೀಗಾಗಿ ಅವರನ್ನು ಸಿ ದರ್ಜೆಗೆ ಇಳಿಸಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಖಾರವಾಗಿ ಉತ್ತರ ನೀಡಿದ್ದ ಬ್ರಾವೋ ಕಳೆದ ನಾಲ್ಕು ವರ್ಷಗಳಿಂದ ನಾನು ಕಾಯುತ್ತಿದ್ದೇನೆ. ಎಂತಹ ಉತ್ತಮ ಪ್ರದರ್ಶನ  ನೀಡಿದರೂ ತಮ್ಮಂಥಹ ಆಟಗಾರರಿಗೆ ಎ ದರ್ಜೆಯ ಮನ್ನಣೆ ಸಿಗುತ್ತಿಲ್ಲ. ಸಮರ್ಥ ಆಟಗಾರರನ್ನು ಗುರುತಿಸಲು ಆಗದ ನೀನೇಕೆ ರಾಜಿನಾಮೆ ನೀಡಬಾರದು ಈಡಿಯಟ್ ಎಂದು ನಿಂದಿಸಿದ್ದರು.

ಇದರ ಬೆನ್ನಲ್ಲೇ ಅವರನ್ನು ವಿಂಡೀಸ್ ತಂಡದಿಂದ ಕೈ ಬಿಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT