ಗೌತಮ್ ಗಂಭೀರ್ 
ಕ್ರಿಕೆಟ್

ಕಾಶ್ಮೀರದಲ್ಲಿ ಸಿಆರ್ ಪಿಎಫ್ ಯೋಧನಿಗೆ ಥಳಿತ ಪ್ರಕರಣ: ದೇಶ ವಿರೋಧಿಗಳಿಗೆ ಗೌತಮ್ ಗಂಭೀರ್ ತಿರುಗೇಟು

ಶ್ರೀನಗರ ಲೋಕಸಭೆ ಚುನಾವಣೆ ನಂತರ ವಾಪಸ್ ಹೋಗುವ ಸಂದರ್ಭದಲ್ಲಿ ಕೆಲ ಕಾಶ್ಮೀರಿ ಯುವಕರು ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ...

ನವದೆಹಲಿ: ಶ್ರೀನಗರ ಲೋಕಸಭೆ ಚುನಾವಣೆ ನಂತರ ವಾಪಸ್ ಹೋಗುವ ಸಂದರ್ಭದಲ್ಲಿ ಕೆಲ ಕಾಶ್ಮೀರಿ ಯುವಕರು ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ತಮ್ಮ ಮನಸ್ಸಿಗೆ ಬಂದ ಯೋಚನೆಗಳನ್ನು ಗಂಭೀರ್ ಯಾವುದೇ ಮುಜುಗರವಿಲ್ಲದೇ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ನಮ್ಮ ದೇಶದ ಸೈನಿಕನಿಗೆ ಬಿದ್ದ ಒಂದೊಂದು ಏಟಿಗೆ ಪ್ರತಿಯಾಗಿ ಕನಿಷ್ಠ 100 ಜಿಹಾದಿಗಳ ಪ್ರಾಣ ಹೋಗಬೇಕು, ಯಾರಿಗೆಲ್ಲಾ ಸ್ವಾತಂತ್ರ್ಯ ಬೇಕೋ ಅವರೆಲ್ಲಾ ಈ ಕೂಡಲೇ ಕಾಶ್ಮೀರ ಬಿಟ್ಟು ಹೊರಡಿ, ಕಾಶ್ಮೀರ ನಮಗೆ ಸೇರಿದ್ದು ಎಂದು ಟ್ವೀಟ್ ಮಾಡಿದ್ದಾರೆ.

For every slap on my army's Jawan lay down at least a 100 jihadi lives. Whoever wants Azadi LEAVE NOW! Kashmir is ours.#kashmirbelongs2us

— Gautam Gambhir (@GautamGambhir) April 13, 2017
ಕೇಸರಿ- ನಮ್ಮ ಆಕ್ರೋಶದ ಬೆಂಕಿ, ಬಿಳಿಬಣ್ಣ- ಜಿಹಾದಿಗಳ ಹೆಣದ ಮೇಲೆ ಹೊದಿಸುವ ಹೊದಿಕೆ, ಹಸಿರು ಬಣ್ಣ ಭಯೋತ್ಪಾದಕತೆಯನ್ನು ವಿರೋಧಿಸುತ್ತದೆ ಎಂಬುದನ್ನು ಭಾರತ ವಿರೋಧಿಗಳು ನಮ್ಮ ದೇಶದ ಭಾವುಟದ ಬಣ್ಣವನ್ನು ಮರೆತಿದ್ದಾರೆ ಎನಿಸುತ್ತದೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಭಾನುವಾರ ಶ್ರೀಗನಗರ ಬದ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಗಲಭೆಕೋರರು ಸಿಆರ್ ಪಿಎಫ್ ಯೋಧನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT