ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದ್ದು ಇದಕ್ಕೆ ಮುಂಬೈ ತಂಡದ ಆಟಗಾರ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 40 ಓವರ್ ಗಳಲ್ಲಿ 453 ರನ್ ಸಿಡಿಸಿದ್ದರು. ವಾಂಖೆಡೆ ಮೈದಾನವನ್ನು ಬ್ಯಾಟಿಂಗ್ ಪಿಚ್ ಮಾಡಿರುವುದರಿಂದ ರನ್ ಹೊಳೆ ಹರಿದಿದ್ದು ಕ್ರೀಡಾಂಗಣದ ಪಿಚ್ ಕ್ಯೂರೇಟರ್ ರನ್ನು ಹರ್ಭಜನ್ ಸಿಂಗ್ ಟೀಕಿಸಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ಹರ್ಭಜನ್ ಸಿಂಗ್ ಸದ್ಯದಲ್ಲೇ ಪಂದ್ಯಗಳಲ್ಲಿ ಬೌಲರ್ ಗಳ ಬದಲು ಬೌಲಿಂಗ್ ಯಂತ್ರಗಳನ್ನು ನೋಡಿದರೂ ಅಚ್ಚರಿಯಿಲ್ಲ ಎಂದು ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos