ರಣಜಿ ಟ್ರೋಫಿ 
ಕ್ರಿಕೆಟ್

ಕರ್ನಾಟಕ ಮಾಜಿ ರಣಜಿ ಆಟಗಾರ ಶರದ್ ರಾವ್ ನಿಧನ

ಮುಂಬೈ ಮತ್ತು ಕರ್ನಾಟಕ ರಣಜಿ ಟ್ರೋಫಿ ಮಾಜಿ ಕ್ರಿಕೆಟಿಗ ಶರದ್ ರಾವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಮುಂಬಯಿ: ಮುಂಬೈ ಮತ್ತು ಕರ್ನಾಟಕ ರಣಜಿ ಟ್ರೋಫಿ ಮಾಜಿ ಕ್ರಿಕೆಟಿಗ ಶರದ್ ರಾವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
60 ವರ್ಷದ ಬಲಗೈ ಮಧ್ಯಮ ವೇಗಿ ಮಾಜಿ ಆಟಗಾರರಾಗಿದ್ದ ಶರದ್ ರಾವ್  ಏಕನಾಥ ಸೋಲ್ಕರ್ ಅವರ ನೇತೃತ್ವದ ಬಾಂಬೆ ರಣಜಿ ಟ್ರೋಫಿ ತಂಡದಲ್ಲಿ ಆಡಿದ್ದರು, ಈ ತಂಡವು ಬಿಶನ್ ಸಿಂಗ್ ಬೇಡಿ ಅವರ ದೆಹಲಿ ತಂಡವನ್ನು 1980-81ರ ಫೈನಲ್ ನಲ್ಲಿ ಸೋಲಿಸಿತು.
1980-81 ರಿಂದ 1985-86 ರವರೆಗೆ ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಥಮ ದರ್ಜೆಯ ಹತ್ತು ಪಂದ್ಯಗಳನ್ನು ಆಡಿದ್ದರು. ರಾವ್ ಈ ಸಮಯದಲ್ಲಿ  16 ವಿಕೆಟ್ ಗಳನ್ನು  ಪಡೆದಿದ್ದರು, 27 ರನ್ ಗಳಿಗೆ 4 ವಿಕೆಟ್ ಗಳನ್ನು ಗಳಿಸಿ ಸಾಧನೆ ಮಾಡಿದ್ದರು.
ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಪರವಾಗಿ ರಾವ್ ಸಹ ಆಡಿದ್ದು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸಿದ್ದರು.
ಇಂಟರ್ ಆಫೀಸ್ ಪಂದ್ಯಾವಳಿಗಳಲ್ಲಿ ಆಡಿದ್ದ ರಾವ್ ಟಾಟಾ ಸ್ಪೋರ್ಟ್ಸ್ ಕ್ಲಬ್ ಗಾಗಿ ಸಹ ಆಟವಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT