ಎಂಎಸ್ ಧೋನಿ-ಕೇದಾರ್ ಜಾದವ್ 
ಕ್ರಿಕೆಟ್

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಧೋನಿ ಹೇಳಿದ ನಂತರ, ನನ್ನ ಆಟದ ಶೈಲಿಯೇ ಬದಲಾಯಿತು: ಜಾಧವ್

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು ಎಂದು ಕೇದಾರ್ ಜಾದವ್ ಹೇಳಿದ್ದಾರೆ...

ಚೆನ್ನೈ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು ಎಂದು ಕೇದಾರ್ ಜಾದವ್ ಹೇಳಿದ್ದಾರೆ. 
ಮಹಾರಾಷ್ಟ್ರದ ಆಟಗಾರ ಕೇದಾರ್ ಜಾದವ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7.8 ಕೋಟಿ ರುಪಾಯಿಗೆ ಖರೀಸಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲ್ ಮಾಡಲು ಎಂಎಸ್ ಧೋನಿ ಹೇಳಿದ ನಂತರ ನನ್ನ ಆಟದ ಶೈಲಿಯೇ ಬದಲಾಯಿತು. ಅದಕ್ಕೂ ಮುನ್ನ ನಾನು ಭಾರತ ಪರ ಬೌಲಿಂಗ್ ಮಾಡಬಹುದು ವಿಕೆಟ್ ಪಡೆಯಬಹುದು ಎಂದು ತಿಳಿದಿರಲಿಲ್ಲ ಎಂದು ಕೇದಾರ್ ಜಾದವ್ ಹೇಳಿದ್ದಾರೆ. 
ಎಂಎಸ್ ಧೋನಿ ಅವರು ಎಲ್ಲಾ ಆಟಗಾರರನ್ನು ಬೆಂಬಲಿಸುತ್ತಾರೆ ಇದರಿಂದಾಗಿ ಪ್ರತಿಯೊಬ್ಬ ಆಟಗಾರನು ಉತ್ತಮ ಪ್ರದರ್ಶನ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಪ್ರತಿ ಆಟಗಾರನಿಂದಲೂ ಉತ್ತಮ ಪ್ರದರ್ಶನ ಹೇಗೆ ಪಡೆಯಬೇಕು ಎಂದು ಧೋನಿ ಅವರಿಗೆ ಕರಗತವಾಗಿದೆ ಎಂದು ಜಾದವ್ ಹೇಳಿದ್ದಾರೆ. 
ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಲು ನಾನು ಏನು ಮಾಡಿದ್ದೇನೆ. ಆದರೆ ಧೋನಿ ಬಾಯ್ ಮತ್ತು ಈ ತಂಡದೊಂದಿಗೆ ನನ್ನ ಜೀವನದ ಅತ್ಯುತ್ತಮ ಕ್ರಿಕೆಟ್ ಅನ್ನು ಆಡಲು ನಾನು ಆಶಿಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT