ಬೆಂಗಳೂರು: ಪ್ರಸಕ್ತ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಹೊರಗೆ ಬಂದಿದೆ.
ಈ ಸಲ ಕಪ್ ನಮ್ದೆ ಅಭಿಯಾನ ಮೂಲಕ ಶುರುವಾಗಿದ್ದ ಆರ್ಸಿಬಿಯ ಆಟ ಬಲಿಷ್ಠ ಬ್ಯಾಟ್ಸ್ ಮನ್ ಗಳಿದ್ದರು ಕಳೆಗುಂದಿದೆ. ಅಂತೂ ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನು ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡಿದ್ದರು. ತಂಡ ಪ್ಲೇ ಆಫ್ ಹಂತಕ್ಕೇರಲು ಸಾಧ್ಯವಾಗಲಿಲ್ಲ. ಈ ಬಾರಿ ಆರ್ಸಿಬಿ ಪರ ಆಡಿದ್ದ ಮಾಜಿ ನ್ಯೂಜಿಲೆಂಡ್ ತಂಡ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಆರ್ಸಿಬಿ ಪರ ಆಡಿದ್ದ ಆರು ಪಂದ್ಯಗಳ ಪೈಕಿ ಕೇವಲ 127 ರನ್ ಮಾತ್ರ ಸಿಡಿಸಿದ್ದರು.
ಇದೀಗ ವಿದಾಯದ ಸಂದೇಶ ನೀಡಿರುವ ಮೆಕಲಮ್ ಅವರು, ನನ್ನನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತು ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ದುರಾದೃಷ್ಟಕರ ಈ ಬಾರಿ ನಮಗೆ ಸಿಹಿ ಸಿಗಲಿಲ್ಲ. ಆದರೆ ಕೆಲ ಅತ್ಯುತ್ತಮ ಸ್ನೇಹಿತರನ್ನು ಗಳಿಸಿಕೊಂಡಿದ್ದೇನೆ. ಇನ್ನು ಉನ್ನತ ಮಟ್ಟದ ಗುಂಪಿನೊಂದಿಗೆ ಆಡುವ ಅನುಭವವನ್ನು ಪಡೆದಿದ್ದೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos