ವಿರಾಟ್ ಕೊಹ್ಲಿ 
ಕ್ರಿಕೆಟ್

4-1 ಅಂತರದಲ್ಲಿ ಸರಣಿ ಸೋತಿದ್ದರೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ: ವಿರಾಟ್ ಕೊಹ್ಲಿ

ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1 ಅಂತರದಲ್ಲಿ ಸೋತಿದ್ದರೂ ಇದನ್ನೇ ಆಧಾರವಾಗಿಟ್ಟುಕೊಂಡು ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್ :  ನಿನ್ನೆ ಮುಕ್ತಾಯಗೊಂಡ  ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1  ಅಂತರದಲ್ಲಿ ಸೋತಿದ್ದರೂ  ಇದನ್ನೇ  ಆಧಾರವಾಗಿಟ್ಟುಕೊಂಡು   ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು  ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ  ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ನಮ್ಮಗಿಂತ ಉತ್ತಮವಾಗಿ ಆಡಿದ್ದರಿಂದ 4-1  ಅಂತರದಲ್ಲಿ ಸೋತಿದ್ದೇವೆ.  ಆದರೆ,  ಲಾರ್ಡ್ಸ್ ಟೆಸ್ಟ್   ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ  ನಾವು  ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾದ್ದೇವು ಎಂದು ಕೊಹ್ಲಿ  ಪಂದ್ಯದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.

ನಾವು ಇಂತಹ ಪಂದ್ಯವನ್ನು  ನಿರೀಕ್ಷೆ ಮಾಡಿರಲಿಲ್ಲ.  ಆದರೆ, ಉಭಯ  ತಂಡಗಳು ಸರಣಿಯನ್ನು ಪೈಪೋಟಿಯಿಂದ ತೆಗೆದುಕೊಂಡಿದ್ದಾಗಿ  ತಿಳಿಸಿದ ಕೊಹ್ಲಿ, ಈ ಸರಣಿಯಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ದೊಡ್ಡ ಪ್ರಚಾರ ಸಿಕ್ಕಂತಾಗಿದೆ ಎಂದರು.

 ಇಂಗ್ಲೆಂಡ್ ತಂಡ ವೃತ್ತಿಪರ ಆಟಗಾರರಿಂದ ಕೂಡಿದೆ. ಎರಡರಿಂದ ಮೂರು ಓವರ್ ಗಳಲ್ಲಿ ಪಂದ್ಯ ಬದಲಾಗುತ್ತಿದುದ್ದನ್ನು ನಾವು  ಗಮನಿಸಿದ್ದೇವೆ .ಅವರು ನಿರ್ಭೀತಿಯಿಂದ ಆಡಿದ್ದರಿಂದ  ನಾವೂ ಸೋಲಬೇಕಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದರು.

 ಟೆಸ್ಟ್ ಪಂದ್ಯದಲ್ಲಿ ಶತಕಗಳನ್ನು ಗಳಿಸಿದ ಕೆ. ಎಲ್ . ರಾಹುಲ್ ಹಾಗೂ ರಿಷಬ್ ಪಂತ್  ಅವರನ್ನು ಹೊಗಳಿದ ವಿರಾಟ್ ಕೊಹ್ಲಿ, ಈ ಯುವ ಆಟಗಾರರಿಗೆ ಹೆಚ್ಚಿನ ಕ್ರೆಡಿಟ್ ಸಲ್ಲಬೇಕಾಗುತ್ತದೆ. ಅವರು ಭಾರತದ ಭವಿಷ್ಯದ ತಾರೆಗಳು  ಎಂದು ಹೊಗಳಿದ ಕೊಹ್ಲಿ, ಮೊದಲ   ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ ರಿಷಬ್ ಪಂತ್ ಅವರನ್ನು ವಿಶೇಷ ಮಾತುಗಳಿಂದ ಅಭಿನಂದನೆ ಸಲ್ಲಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT