ಬೆಂಗಳೂರು: ಸತತ ಸೋಲುಗಳ ಬಳಿಕ ಇದೀಗ ಆರ್ಸಿಬಿ ತಂಡ ಗೆಲುವಿನ ಲಯ ಕಂಡುಕೊಂಡಿದ್ದು ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು ಇದೀಗ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ.
ಕ್ರೀಡಾಂಗಣದಲ್ಲಿ ಹಾಕಿರುವ ಎಲ್ಇಡಿ ಪರದೆಯಲ್ಲಿ ಡಾ. ರಾಜಕುಮಾರ್ ಅವರ ಫೋಟೋವನ್ನು ಹಾಕಿ. ಅದರ ಕೆಳಗೆ ಹುಟ್ಟುಹಬ್ಬಕ್ಕೆ ಶುಭಾಶಯ ಎಂದು ಬರೆಯಲಾಗಿತ್ತು.