ಕ್ರಿಕೆಟ್

ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದಿತ್ತು: ವೀರೇಂದ್ರ ಸೆಹ್ವಾಗ್

Srinivas Rao BV

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದಿತ್ತು ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.  

'ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ನಲ್ಲಿ ಬಡ್ತಿ ನೀಡಿದ್ದರೆ, ಫಲಿತಾಂಶ ಬೇರೆಯದ್ದೇ ಆಗುತ್ತಿತ್ತು. ಮಾಹಿ ಒತ್ತಡದ ಸನ್ನಿವೇಶದಲ್ಲಿ ಉತ್ತಮವಾಗಿ ಆಡಬಲ್ಲ ಆಟಗಾರ. ಇನ್ನಿಂಗ್ಸ್ ಬೆಳೆಸುವ ವೇಳೆಗೆ ಧೋನಿ ಬ್ಯಾಟ್ ಮಾಡಬೇಕಿತ್ತು' ಎಂದು ವೀರು ತಿಳಿಸಿದ್ದಾರೆ. 'ನಾನು ತಂಡದ ತರಬೇತುದಾರನಾಗಲು ಎಂದೂ ಬಯಸುವುದಿಲ್ಲ. ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರಿಂದ ಕೋಚ್ ಹುದ್ದೆಗೆ ಈ ಮೊದಲು ಅರ್ಜಿ ಸಲ್ಲಿಸಿದ್ದೆ' ಎಂದು ಅವರು ಹೇಳಿದ್ದಾರೆ. 

ಇದೇ ವೇಳೆ ವೇಗಿ ಶ್ರೀಶಾಂತ್ ಅವರ ಮೇಲೆ ಹೇರಲಾದ ಅಜೀವ ನಿಷೇಧವನ್ನು ಕೈ ಬಿಟ್ಟ ಬಿಸಿಸಿಐ ತೀರ್ಮಾನವನ್ನು ಅವರು ಸ್ವಾಗತಿಸಿದರು.

SCROLL FOR NEXT