ಕ್ರಿಕೆಟ್

ಏಕದಿನ, ಟಿ20 ಪಂದ್ಯಗಳಿಂದ ಬುಮ್ರಾರನ್ನು ದೂರವಿಟ್ಟಿದ್ದೇಕೆ: ವಿರಾಟ್ ಕೊಹ್ಲಿ ಹೇಳಿದ್ದೇನು?

Vishwanath S

ನಾರ್ತ್ ಸೌಂಡ್: ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 318 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಿದ  ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ನಾಯಕ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಏಳು ರನ್ ನೀಡಿ ಐದು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಅವರನ್ನು ಪ್ರಶಂಸಿಸಿದರು, ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬುಮ್ರಾ ತಂಡದ ಪ್ರಮುಖ ಆಟಗಾರ ಎಂದು ಹೇಳಿದ್ದಾರೆ. 
  
ಪಂದ್ಯದ ಬಳಿಕ ಮಾತನಾಡಿದ ವಿರಾಟ್, ನಾವು ಈ ಪಂದ್ಯ ಗೆಲ್ಲುವಲ್ಲಿ ತುಂಬಾ ಶ್ರಮಿಸಿದ್ದೇವೆ. ತಂಡ ಎರಡೂ ಇನ್ನಿಂಗ್ಸ್‌ಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಪಂದ್ಯದ ಸಮಯದಲ್ಲಿ ನಾಲ್ಕೈದು ಬಾರಿ ಪಂದ್ಯಕ್ಕೆ ಪುಟಿದೇಳುವ ಅವಕಾಶ ಸಿಕ್ಕಿತು.
  
“ಆಟಗಾರರ ಮೇಲಿನ ಒತ್ತಡವನ್ನು ಸಮತೋಲನಗೊಳಿಸುವುದು ಬಹಳ ಮುಖ್ಯ. ಆದ್ದರಿಂದ ವಿಶ್ವಕಪ್ ನಂತರ ಬುಮ್ರಾ ಅವರನ್ನು ಸೀಮಿತ ಕ್ರಿಕೆಟ್‌ನಿಂದ ದೂರವಿಡಲಾಯಿತು. ಬುಮ್ರಾ ಟೆಸ್ಟ್ ಚಾಂಪಿಯನ್‌ಶಿಪ್‌ನ ತಂಡದ ಪ್ರಮುಖ ಆಟಗಾರ. ಅವರು ಬೌಲಿಂಗ್ ಬಗ್ಗೆ ನಾವೆಲ್ಲ ತಿಳಿದಿದ್ದೇವೆ ಎಂದು ನಮಗೆಲ್ಲರಿಗೂ ತಿಳಿದಿದೆ " ಎಂದಿದ್ದಾರೆ. 
  
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 318 ರನ್‌ಗಳಿಂದ ಸೋಲಿಸಿ ಭಾರತ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಎರಡು ಟೆಸ್ಟ್ ಸರಣಿಯಲ್ಲಿ ಟೆಸ್ಟ್ ಗೆಲುವಿನಲ್ಲಿ 60 ಅಂಕಗಳನ್ನು ಕಲೆ ಹಾಕಿದೆ.

SCROLL FOR NEXT