ರಣಜಿ ಟ್ರೋಫಿ: ಶೌಕತ್ ಶತಕ, ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ 
ಕ್ರಿಕೆಟ್

ರಣಜಿ ಟ್ರೋಫಿ: ಶೌಕತ್ ಶತಕ, ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ

ಇಲ್ಲಿನ ರಾಜನಗರದ ಕೆಎಸ್ ಸಿಎ ಅಂಗಳದಲ್ಲಿ ನಡೆದೆ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ನಿರೀಕ್ಷೆಯಂತೆ ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ ತಂಡಕ್ಕೆ ಮೂರು ಹಾಗೂ ಉತ್ತರ ಪ್ರದೇಶ ತಂಡಕ್ಕೆ ಒಂದು ಅಂಕ ಲಭಿಸಿದೆ.

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ ಸಿಎ ಅಂಗಳದಲ್ಲಿ ನಡೆದೆ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ನಿರೀಕ್ಷೆಯಂತೆ ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ ತಂಡಕ್ಕೆ ಮೂರು ಹಾಗೂ ಉತ್ತರ ಪ್ರದೇಶ ತಂಡಕ್ಕೆ ಒಂದು ಅಂಕ ಲಭಿಸಿದೆ.

ನಾಲ್ಕನೇ ದಿನವಾದ ಶುಕ್ರವಾರ ಒಂದು ವಿಕೆಟ್ ಗೆ 29 ರನ್ ಗಳಿಂದ ಆಟ ಮುಂದುವರಿಸಿ, 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ಎರಡು ಪಂದ್ಯಗಳಿಂದ ಒಂಬತ್ತು ಅಂಕ ಕಲೆ ಹಾಕಿದೆ. 

ಉತ್ತರ ಪ್ರದೇಶದ ಅಲ್ಮಾಸ್ ಶೌಕತ್ ಶತಕ ಬಾರಿಸುತ್ತಿದ್ದಂತೆ ಪಂದ್ಯ ಡ್ರಾ ಎಂದು ಘೋಷಣೆಯಾಗಿದೆ. ಶೌಕತ್ 210ಎಸೆತಕ್ಕೆ 103ರನ್ ಗಳಿಸಿದ್ದರು. ಮೊಹಮ್ಮದ್ ಸೈಫ್ ೮ ರನ್ ಗಳಿಸಿದ್ದರು. ಪ್ರವಾಸಿ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ ೪೬ ಓವರ್ ಗಳಲ್ಲಿ ೨ ವಿಕೆಟ್‌ ಗೆ ೧೩೦ ರನ್ ಗಳಿಸಿತ್ತು.

ಉಭಯ ತಂಡಗಳಿಗೆ ಇದು ಎರಡನೇ ಲೀಗ್ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡಿನ ವಿರುದ್ಧ ಜಯ ಸಾಧಿಸಿದ್ದರೆ ಉತ್ತರ ಪ್ರದೇಶ ರೈಲ್ವೇಸ್ ತಂಡದ ವಿರುದ್ಧ ಡ್ರಾ ಸಾಧಿಸಿಕೊಂಡಿತ್ತು.

ಕರ್ನಾಟಕದ ಅಭಿಮನ್ಯು ಮಿಥುನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT