ಕ್ರಿಕೆಟ್

ಭಾರತವು ಮುಂಬರುವ ವಿಶ್ವಕಪ್ ಪಂದ್ಯ ಆಡುವಂತೆ ಪಾಕ್ ಅಭಿಮಾನಿ ಮನವಿ

Nagaraja AB

ಹೊಸದಿಲ್ಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ವ್ಯಾಪಕ ಒತ್ತಾಯ ಕೇಳಿಬರುತ್ತಿದೆ.

ಈ ಮಧ್ಯೆ ಕಳೆದ ವರ್ಷ ಏಷ್ಯಾ ಕಪ್ ವೇಳೆ ಭಾರತೀಯ ರಾಷ್ಟ್ರಗೀತೆ ಹಾಡಿ ಭಾರತೀಯರ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್ , ಪಾಕಿಸ್ತಾನ ವಿರುದ್ಧದ  ವಿಶ್ವಕಪ್ ಪಂದ್ಯ ನಿಗದಿಯಂತೆ ಆಡುವಂತೆ ಭಾರತಕ್ಕೆ ಕರೆ ನೀಡಿದ್ದಾರೆ.
ಯುಎಇನಲ್ಲಿ ಇಂದಿಗೂ ಪಾಕ್ ಹಾಗೂ ಭಾರತೀಯರು ಉತ್ತಮ ಬಾಂಧ್ಯವ್ಯ ಹೊಂದಿದ್ದು, ಅತ್ತ ಪಾಕಿಸ್ತಾನ ಆಟಗಾರರು ಭಾರತದ ಜೊತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
SCROLL FOR NEXT