ಬೋನಿ ಪೈನ್ ಮತ್ತು ರಿಷಬ್ ಪಂತ್ 
ಕ್ರಿಕೆಟ್

ಬೇಬಿ ಸಿಟ್ಟರ್ ಗೆ ಫುಲ್ ಡಿಮ್ಯಾಂಡ್: ರೋಹಿತ್ ಬಳಿಕ ತಮಗೂ ರಿಷಬ್ ಪಂತ್ ಬೇಕು ಎಂದ ಆಸಿಸ್ ನಾಯಕನ ಪತ್ನಿ!

ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.

ಸಿಡ್ನಿ: ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.
ಆಸಿಸ್ ಪ್ರವಾಸದಲ್ಲಿ ತಾತ್ಕಾಲಿಕ ಕ್ಯಾಪ್ಟನ್ ಎಂದು ಟಿಮ್ ಪೈನ್ ಕಾಲೆಳೆದಿದ್ದ ಪಂತ್ ಬಳಿಕ ಅವರ ಮನೆಗೇ ತೆರಳಿ ಅವರ ಪತ್ನಿಯನ್ನು ಭೇಟಿ ಮಾಡಿ ಮಕ್ಕಳನ್ನು ಎತ್ತಿಕೊಂಡು ಟಿಮ್ ಪೈನ್ ಬೇಬಿ ಸಿಟ್ಟರ್ ಹೇಳಿಕೆಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಈ ಘಟನೆ ಬಳಿಕ ರಿಷಬ್ ಪಂತ್ ಬೇಬಿ ಸಿಟ್ಟರ್ ಖ್ಯಾತಿ ಎಲ್ಲೆಡೆ ಚರ್ಚೆಯಾಗಿತ್ತು. ಇದಕ್ಕೆ ಇಂಬು ನೀಡುವಂತೆ ಭಾರತ ತಂಡದ ರೋಹಿತ್ ಶರ್ಮಾ ಕೂಡ ತಮಗೆ ಮಗುವಾಗಿದ್ದು ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಅವಶ್ಯಕತೆ ಇದೆ ಎಂದು ಪಂತ್ ಕಾಲೆಳೆಯುವ ಪ್ರಯತ್ನ ಮಾಡಿದ್ದರು. 
ಇದ್ದಕೆ ಉತ್ತರ ನೀಡಿದ್ದ ಪಂತ್, ಬಹುಶಃ ಚಾಹಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೆನಿಸುತ್ತದೆ. ನಾನು ರೆಡಿ ಎಂದು ಅವರದೇ ದಾಟಿಯಲ್ಲಿ ಉತ್ತರ ನೀಡಿದ್ದರು. ಇದೀಗ ಈ ಪಟ್ಟಿಗೆ ಆಸಿಸ್ ನಾಯಕ ಟಿಮ್ ಪೈನ್ ಪತ್ನಿ ಬೋನಿ ಪೈನ್ ಕೂಡ ಸೇರಿಕೊಂಡಿದ್ದು, ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.
ತಮ್ಮ ಮಗುವನ್ನು ಎತ್ತಿಕೊಂಡಿರುವ ಬೋನಿ ಪೈನ್, ಮಗುವಿನ ಆರೈಕೆಗಾಗಿ ಪ್ರಯತ್ನಿಸುತ್ತಿದ್ದೇನೆ, ರಿಷಬ್ ಪಂತ್ ಸಿಕ್ಕರೆ ಒಳ್ಳೆಯದು ಎಂದು ಪೋಟೋ ಮೇಲೆ ಬರಿದಿದ್ದಾರೆ. ಆ ಮೂಲಕ ತಮ್ಮ ಮಗುವಿನ ಆರೈಕೆಗಾಗಿ ಪಂತ್ ಬೇಕು ಎಂದು ಬೋನಿ ಪೈನ್ ಹೇಳಿದ್ದಾರೆ. ಇನ್ನು ಬೋನಿ ಪೈನ್ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು, ಭಯೋತ್ಪಾದಕ ಕೃತ್ಯ ಶಂಕೆ..!

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

US-Israel-Iran War: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ; ಕೇಂದ್ರ ಸರ್ಕಾರ ಭರವಸೆ

SCROLL FOR NEXT