ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಇಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಸೆಣೆಸುತ್ತಿರುವ ಎರಡು ತಂಡಗಳ ವಿರುದ್ಧ ಭಾರತ ಸೋತಿದೆ. ಆದರೂ ಈ ಬಾರಿ ಟ್ರೋಫಿಯನ್ನು ಯಾರು ಗೆಲ್ಲಬಹುದೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಲೀಗ್ ಹಂತದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಆದರೆ ಅಷ್ಟೇನು ಬಲಿಷ್ಠವಲ್ಲದ ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಭಾರತ 18 ರನ್ ಗಳಿಂದ ರೋಚಕ ಸೋಲು ಕಂಡಿತ್ತು.
ವಿಶ್ವಕಪ್ ಫೈನಲ್ ಕುರಿತಂತೆ ಮಾತನಾಡಿರುವ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ. ಆದರೆ ನ್ಯೂಜಿಲ್ಯಾಂಡ್ ಸ್ವಲ್ಪ ಅಪಾಯಕಾರಿ. ಹುಷಾರಾಗಿ ಆಡದಿದ್ದರೆ ಕೊನೆಯ ಹಂತದಲ್ಲಿ ಕೆಡವುವ ಸಾಮರ್ಥ ಕಿವೀಸ್ ಗಿದೆ ಎಂದು ಹೇಳಿದ್ದಾರೆ.