ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

ಸದ್ಯಕ್ಕೆ ಧೋನಿಗೆ ನಿವೃತ್ತಿ ಯೋಚನೆಯಿಲ್ಲ- ಆಪ್ತಮಿತ್ರ

ವಿಶ್ವ ಶ್ರೇಷ್ಟ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯಕ್ಕೆ ನಿವೃತ್ತಿ ಹೊಂದುವ ಯೋಚನೆಯಿಲ್ಲ ಎಂದು ಅವರ ಆಪ್ತಮಿತ್ರ ಹಾಗೂ ವ್ಯವಹಾರಿಕ ಪಾಲುದಾರ ಅರುಣ್ ಪಾಂಡೆ ಹೇಳಿದ್ದಾರೆ.

ನವದೆಹಲಿ:ವಿಶ್ವ ಶ್ರೇಷ್ಟ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯಕ್ಕೆ ನಿವೃತ್ತಿ ಹೊಂದುವ ಯೋಚನೆಯಿಲ್ಲ ಎಂದು ಅವರ ಆಪ್ತಮಿತ್ರ ಹಾಗೂ ವ್ಯವಹಾರಿಕ ಪಾಲುದಾರ ಅರುಣ್ ಪಾಂಡೆ ಹೇಳಿದ್ದಾರೆ.
ವಿಶ್ವಕಪ್ ಉಪಾಂತ್ಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಭವಿಷ್ಯದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ.ಸೆಮಿಫೈನಲ್ ನಲ್ಲಿ ಧೋನಿ ಅರ್ಧಶತಕ ಗಳಿಸಿದ್ದರೂ ಕಿವೀಸ್ ಎದುರು ಭಾರತ ಸೋತ ನಂತರ ಅವರ ಕ್ರಿಕೆಟ್ ಬದುಕು ಮುಗಿದ ಅಧ್ಯಾಯ. ಅವರು ನಿವೃತ್ತಿಯಾಗಲಿದ್ದಾರೆ ಎಂಬಂತಹ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.
 ಆದರೆ.''ಧೋನಿ ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲ''ಅತ್ತುತ್ತಮ ಆಟಗಾರರನ ಭವಿಷ್ಯ ಬಗ್ಗೆ ನಿರಂತರವಾಗಿ ಕೇಳಿಬರುತ್ತಿರುವ ಊಹಾಪೋಹಗಳು ದುರಾದೃಷ್ಟಕರ ಎಂದು ಪಾಂಡೆ ಹೇಳಿದ್ದಾರೆ.
 ವೆಸ್ಟ್ ಇಂಡಿಸ್ ವಿರುದ್ಧದ ಪ್ರವಾಸಕ್ಕೆ ಆಗಸ್ಟ್ 3 ರಂದು ಬಿಸಿಸಿಐ ತಂಡವನ್ನು ಆಯ್ಕೆ ಮಾಡಲಿದೆ.  ಈ ಹಿನ್ನೆಲೆಯಲ್ಲಿ ಅರುಣ್ ಪಾಂಡೆ ಹೇಳಿಕೆ ಮಹತ್ವ ಪಡೆದುಕೊಂಡಿದೆ.  ಎರಡು ಬಾರಿ ವಿಶ್ವಕಪ್ ತಂದುಕೊಟ್ಟ ಆಟಗಾರನೊಂದಿಗೆ ಬಿಸಿಸಿಐ ಅಧಿಕಾರಿಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಅರುಣ್ ಪಾಂಡೆ ಧೋನಿ ಅವರ ಬಹು ಕಾಲದ ಆಪ್ತ ಮಿತ್ರರಾಗಿದ್ದು, ಕ್ರೀಡಾ ನಿರ್ವಹಣಾ ಕಂಪನಿಯೊಂದರ ಮುಖ್ಯಸ್ಥರಾಗಿರುವುದಲ್ಲದೇ ಧೋನಿಯ ಬಹುಪಾಲು ವ್ಯವಹಾರದ ಪಾಲುದಾರರಾಗಿದ್ದಾರೆ. ಧೋನಿ ಭವಿಷ್ಯ ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಬೇಕೋ ಅಥವಾ ಮಾಡಬಾರದೋ ಎಂಬ ಚಿಂತೆಯಲ್ಲಿದ್ದಾರೆ. 
ಈ ಮಧ್ಯೆ ಧೋನಿ ನಿವೃತ್ತಿಯಾಗಬೇಕೆಂಬ ಒತ್ತಡವೂ ಕ್ರಿಕೆಟ್ ವಲಯದಲ್ಲಿಯೇ ತೀವ್ರಗೊಂಡಿದೆ. 38 ವರ್ಷದ ಧೋನಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಧೋನಿ ನಾಯಕತ್ವದಲ್ಲಿ ಐಸಿಸಿ ವಿಶ್ವಕಪ್, ಟಿ-20 ಹಾಗೂ ಚಾಂಫಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಗೆದಿದ್ದೆ. ರಾಂಚಿಯ ಧೋನಿ 350 ಏಕದಿನ, 90 ಟೆಸ್ಟ್ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ.  ಏಕದಿನ ಪಂದ್ಯಗಳಲ್ಲಿ 50 ರ ಸರಾಸರಿಯಲ್ಲಿ  10 ಸಾವಿರದ 773 ರನ್ ಹಾಗೂ ಟೆಸ್ಟ್ ನಲ್ಲಿ 38. 09ರ ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT