ಕ್ರಿಕೆಟ್

ಚೆನ್ನೈ ವಿರುದ್ಧ ಸೋಲಿನ ಬಳಿಕವೂ ಆರ್‌ಸಿಬಿ ತಂಡವನ್ನು ಸಮರ್ಥಿಸಿಕೊಂಡ ನಿಷ್ಠಾವಂತ ಅಭಿಮಾನಿಗಳು!

Vishwanath S
ಬೆಂಗಳೂರು: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳು ಸ್ಪರ್ಧಿಸಿದ್ದು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹೀನಾಯ ಸೋಲು ಕಂಡಿದೆ. ಇನ್ನು ಈ ಬಾರಿ ಕಪ್ ನಮ್ದೆ ಎಂದು ಹೇಳುತ್ತಿರುವ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊಹ್ಲಿ ಅಭಿಮಾನಿಗಳು ಈಗ ಸೋಲನ್ನು ಸಮರ್ಥಿಸಿಕೊಳ್ಳುತ್ತಿದ್ದು ಮೊದಲ ಆಟ ದೇವರಿಗೆ ಎಂದು ಹೇಳುತ್ತಿದ್ದಾರೆ. 
ಆರ್‌ಸಿಬಿ ಅಭಿಮಾನಿಗಳು ಟ್ವೀಟ್ ಮಾಡುತ್ತಾ, ಮೊದಲ ಆಟವನ್ನು ದೇವರಿಗೆ ನೀಡುವುದು. ಯಾರಾದರೂ ಯಾವುದಾದರೂ ಪಂದ್ಯ ಸೋತರೆ ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲ ಆಟ ಯಾವಾಗಲೂ ನಾವು ದೇವರಿಗೆ ನೀಡುತ್ತೇವೆ ಎನ್ನುತ್ತಿದ್ದಾರೆ. ಇದು ಸೋಲನ್ನು ಸಮರ್ಥಿಸಿಕೊಳ್ಳುವ ವಿಧ ಅಷ್ಟೆ, ಇದೇ ತಂತ್ರವನ್ನು ಆರ್‌ಸಿಬಿ ಅಭಿಮಾನಿಗಳು ಅನುಸರಿಸುತ್ತಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 70 ರನ್ ಗಳಿಗೆ ಆಲೌಟ್ ಆಗಿತ್ತು. 71 ರನ್ ಗುರಿ ಬೆನ್ನಟ್ಟಿದ ಚೆನ್ನೈ 3 ವಿಕೆಟ್ ನಷ್ಟಕ್ಕೆ 71 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
SCROLL FOR NEXT